ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ಚೆನ್ನೈ ಮೂಲದ ಬಯೋಟೆಕ್ ಸಂಸ್ಥೆಯೊಂದರ ಜನರಲ್ ಮ್ಯಾನೆಜರ್ ಮಹಾಮಾರಿ ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಮೃತಪಟ್ಟಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ಗುಣಪಡಿಸುವ ಔಷಧಿ ಸಂಶೋಧಿಸಿದ ಸುಜಾತ ಬಯೋಟೆಕ್ ಸಂಸ್ಥೆಯ ಮ್ಯಾನೇಜರ್ 47 ವರ್ಷದ ಶಿವನೇಶನ್ ಅವರು ಔಷಧಿ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ. ಈ ಸಂಸ್ಥೆಯು ಉತ್ತರಾಖಂಡದ ಕಾರ್ಖಾನೆಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದ ಶಿವನೇಶನ್ ನಂತರ ಚೆನ್ನೈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯ ಮಾಲೀಕ ಡಾ.ರಾಜ್ ಕುಮಾರ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಈ ಔಷಧಿ ತಯಾರಿಸುವಲ್ಲಿ ವೈದ್ಯರೂ ಸಹ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.