(www.vknews.com) : ಇದೀಗ ನಮಗೆ ಪವಿತ್ರ ರಂಝಾನ್ ಮಾಸದ ಪರ್ವಕಾಲವಾಗಿದ್ದು ಇದರಲ್ಲಿ ಕೆಲವು ಮುಖ್ಯ ಆರಾಧನಾ ವಿಧಿಗಳನ್ನು ಮಸೀದಿಗಳಲ್ಲಿ ಸಾಮೂಹಿಕವಾಗಿ ನೆರವೇರಿಸಲು ಕಡ್ಡಾಯ, ಆದರೆ ಈ ವರ್ಷ ಮನುಕುಲಕ್ಕೆ ಮಾರಕವಾಗಿದ್ದು ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ (COVID 19) ಅನ್ನು ನಿಗ್ರಹಿಸಲು ಭಾರತ ಸರಕಾರ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದು ನಾವು ಈ ಎಲ್ಲಾ ಆರಾಧನಾ ವಿಧಿಗಳನ್ನು ಮನೆಗಳಲ್ಲಿ ಸೀಮಿತಗೊಳಿಸುವುದರ ಮೂಲಕ ಒಂದು ದೊಡ್ಡ ತ್ಯಾಗವನ್ನೇ ಮಾಡಿರುತ್ತೇವೆ.
ಲಾಕ್ ಡೌನ್ ನಿಂದಾಗಿ ನಮ್ಮ ಅನೇಕ ಬಂದುಗಳು ಕೆಲಸವಿಲ್ಲದೆ, ಆದಾಯವಿಲ್ಲದೆ ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಇಸ್ಲಾಮಿಗೆ ಯಾವುದೇ ಸಂಭಂದವಿಲ್ಲದ ಈದ್ ಶಾಪಿಂಗ್ ಹೆಸರಿನಲ್ಲಿ ಹಗಲು ರಾತ್ರಿ ಅಂಗಡಿಗಳಲ್ಲಿ ಪೇಟೆಯಲ್ಲಿ ಬೇಕಾ ಬಿಟ್ಟಿ ಅಲೆದಾಡಿ ತಮ್ಮ ಜೀವಕ್ಕೆ ತಮ್ಮ ಕುಟುಂಬದ ಜೀವಕ್ಕೆ ಮತ್ತು ಪರಿಸರಕ್ಕೆ ಅಪಾಯ ತಂಡೊಡ್ಡುವ ವರ್ತನೆಯಿಂದ ದೂರವಿರುವ ಸಲುವಾಗಿ ಮತ್ತು ಸಮಾಜದ ಬಡ ವರ್ಗದವರೊಂದಿಗೆ ಸಹಾನುಭೂತಿ ತೋರುವ ಸಲುವಾಗಿ ಎಲ್ಲಾ ಸಮಾಜ ಬಾಂಧವರು ಈ ವರ್ಷದ ಈದ್ ಶಾಪಿಂಗ್ ಗೆ ತೆರಳದೆ ಮನೆಯ ಒಳಗೆ ಇದ್ದು ಕೊರೋನಾ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಸಹಕಾರ ಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
K ABDUL MUNAF CONVENOR JAMIA MASJID KANDLUR
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.