(www.vknews.com) : ದೇಶದಲ್ಲಿ ಕೋವಿಡ್-19 ಕೊರೋನ ವೈರಸ್ ನರ್ತನದಿಂದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಡ ಹಾಗೂ ಮಧ್ಯಮ ವರ್ಗವು ಯಾವುದೇ ಆದಾಯವಿಲ್ಲದೇ ಒಪ್ಪೊತ್ತಿನ ಆಹಾರಕ್ಕಾಗಿ ಪರದಾಡುತ್ತಿದ್ದು ಅಲ್ಲದೇ ಅದೆಷ್ಟೋ ಮಾನವ ಜೀವಗಳು ಹಸಿವಿನಿಂದ ಪ್ರಾಣ ಬಿಟ್ಟಿವೆ. ಈಗಾಗಲೇ ಪಡಿತರ ಚೀಟಿಗೆ ಅರ್ಜಿ ಹಾಕಿದವರಿಗೂ ಪಡಿತರವನ್ನು ವಿತರಿಸಲಾಗುವುದು ಎಂದು ಸರಕಾರವು ಆದೇಶವನ್ನು ಮಾಡಿ ಇದೀಗ 3ಕೋಟಿ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಇಲಾಖೆಯ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್ ಅವರು ಹೇಳಿಕೆಯನ್ನು ನೀಡಿದ್ದು ಇದೊಂದು ದೇಶದ ಜನತೆಯು ಈವೊಂದು ಸಂದಿಗ್ದ ಪರಿಸ್ಥಿತಿಯಲ್ಲಿ ಅನುಭವಿಸುತ್ತಿರುವ ಸಂಧರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೊರೋನ ವೈರಸ್ ನಿಂದ ಹಾಗೂ ಲಾಕ್ ಡೌನ್ ನಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಉದ್ಯೋಗವಿಲ್ಲದೇ ಸಂಪಾದನೆ ಸೂನ್ಯವಾಗಿ ನರಕ ಯಾತನೆಯನ್ನು ಅನುಭವಿಸುತ್ತಿರುವ ದೇಶದ ಪ್ರಜೆಗಳಿಗೆ ಪೆಟೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ದಾಖಲೆ ಮಟ್ಟದಲ್ಲಿ ಏರಿಸಿ ಪ್ರತೀ ಲೀಟರಿಗೆ 10ರಿಂದ 12 ರೂಪಾಯಿಗಳ ವರೆಗೆ ಏರಿಸಿ ದಿನಬಳಕೆಯ ಸಾಮಗ್ರಿಗಳ ಬೆಳೆಯನ್ನು ಏರುವಂತೆ ಮಾಡಿ ಇದೀಗ ಬಡವರಿಗೆ ಸಿಗಬೇಕಾದ ಪಡಿತರವನ್ನು ಆಧಾರ್ ಜೋಡನೆಯಾಗಿಲ್ಲ ಎಂಬ ನೆಪವನ್ನೊಡ್ಡಿ 3ಲಕ್ಷ ಪಡಿತರ ಚೀಟಿಯನ್ನು ರದ್ದುಪಡಿಸಿ ಬಡವರ ಹೊಟ್ಟೆಯಮೇಲೆ ನೇರವಾಗಿ ಹೊಡೆಯುತ್ತಿರುವನ್ನು ಅಖಿಲ ಭಾರತ ಮುಸ್ಲಿಂ ಡೆವಲಪ್ಮೆಂಟ್ ಫಾರಂ ತೀವ್ರವಾಗಿ ಖಂಡಿಸುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ಡೆವಲಪ್ಮೆಂಟ್ ಫಾರಂ ಇದರ ರಾಜ್ಯ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.