(www.vknews.com) : ‘ಬದ್ರ್’, ಇಸ್ಲಾಮೀ ಸುವರ್ಣ ಯುಗಕ್ಕೆ ಮುಹೂರ್ತವಿಟ್ಟ ಕ್ಷಣ. ಬದ್ರ್ ಯುದ್ಧವಿಲ್ಲದೇ ಹೋದಲ್ಲಿ ನಾವು ಮುಸಲ್ಮಾನರೆನ್ನಲು ಅನುಮಾನಪಡಬೇಕಾಗಿತ್ತು. ಬದ್ರ್ ಯುದ್ಧ ಇಸ್ಲಾಮಿನ ಪ್ರಸರಣದ ಮಹಾ ತಿರುವು. ಬದ್ರ್ ಮಹಾತ್ಮರು ತಮ್ಮ ಜೀವದ ಹಂಗನ್ನೇ ತೊರೆದು ಹೋರಾಡಿ ಇಸ್ಲಾಮಿಗೆ ಪುನರ್ಜನ್ಮವಿತ್ತವರು. ಸಮುದ್ರದ ಅಲೆಗಳಷ್ಟು ಕಷ್ಟ ನಷ್ಟಗಳು ನಮ್ಮ ಜೀವನದಲ್ಲಿ ತುಂಬಿದ್ದರೂ ಈಜಿ ಬರಲು ಅಲ್ಲಾಹನ ಸಹಾಯ ಸಾಕು ಎಂಬುದಕ್ಕೆ ‘ಬದ್ರ್’ ಜ್ವಲಂತ ನಿದರ್ಶನವಾಗಿ ನಿಲ್ಲುತ್ತದೆ.
ಬದ್ರ್
ಬದ್ರ್ ಎಂಬುವುದು ಮದೀನಾದ ಒಂದು ಕುಗ್ರಾಮ. ಮಕ್ಕಾ ಹಾಗೂ ಮದೀನಾದಿಂದ ಕ್ರಮವಾಗಿ 345 ಮತ್ತು135 ಕಿ.ಮೀ ದೂರದಲ್ಲಿದೆ. ‘ಬದ್ರ್ ಬಿನ್ ಹಾರಿಸ್’ ಎಂಬವರಿಂದ ಅಲ್ಲಿಗೆ ಬದ್ರ್ ಎಂದು ನಾಮಕರಣಗೊಂಡಿತು.
ಬದ್ರ್ ಯುದ್ಧವಾಗಲು ಕಾರಣ ಏನಾಗಿರಬಹುದು…?
●ಮುಸ್ಲಿಂ ಪಕ್ಷದಿಂದ – ನಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನನ್ನು ಆರಾಧಿಸಿ, ತೌಹೀದ್ ಅನುಸರಿಸಿ ಜೀವಿಸುವ ಹಕ್ಕುಗಳಿಗಾಗಿ ಹಾಗೂ ನೈಜವಿಶ್ವಾಸದ ಸಂರಕ್ಷಣೆಗಾಗಿ ನಮಗೆ ಹೋರಾಡಬೇಕಾಯಿತು.ತಮ್ಮದೇ ಸೊತ್ತುಗಳನ್ನು ಲೂಟಿ ಮಾಡಿ ವ್ಯಾಪಾರ ನಡೆಸುತ್ತಿರುವ ಅಬೂಸುಫ್ಯಾನರ ವ್ಯಾಪಾರ ಸಂಘವು ಸಿರಿಯಾದಿಂದ ಹಿಂದಿರುಗುವುದನ್ನು ಎದುರಿಸುವುದು ನಮಗೆ ಅನಿವಾರ್ಯವಾಗಿತ್ತು.
●ಮುಶ್ರಿಕ್ ಪಕ್ಷದಿಂದ- ಸ್ವಂತ ಹುಟ್ಟೂರಾದ ಮಕ್ಕಾದಿಂದ ಹೊರದಬ್ಬಲ್ಪಟ್ಟು ನೆರೆಯ ಪ್ರದೇಶವಾದ ಮದೀನಾದಲ್ಲಿ ಆಶ್ರಯ ಪಡೆದ ಒಂದು ಸಮೂಹವನ್ನು ನಾಶಪಡಿಸಿ ತಮ್ಮ ನಾಯಕರ ಪ್ರತಿಷ್ಟೆ ಕಾಪಾಡಲು ಹಾಗೂ ಪ್ರವಾದಿ ﷺರು ಸುಳ್ಳಾಗಿಸಿದ ಅವರ ಆರಾಧ್ಯರ ಘನತೆಯನ್ನು ಸಂರಕ್ಷಿಸಲು ನಾವು ಮುಸ್ಲಮರನ್ನು ಎದುರಾಗಿಕೊಂಡೆವು.
ನಾಯಕರು
●ಮುಸ್ಲಿಂ- ಪ್ರವಾದಿ ﷺರು. ●ಮುಶ್ರಿಕ್- ಅಬೂ ಜಹಲ್
ವಿಶ್ವ ಪ್ರಸಿದ್ಧ ಬದ್ರ್ ಯುದ್ಧ ನಡೆದ ದಿನಾಂಕ ಹಿಜ್ರಾ ೨ನೇ ವರ್ಷ ರಮಳಾನ್ ಹದಿನೇಳನೆ ಶುಕ್ರವಾರ.
ಪ್ರವೇಶ
●ಮುಸ್ಲಿಮರು ರಮಳಾನ್ 8ರಿಂದ ಮದೀನಾದಿಂದ ಹೊರಟಾಗ
ಘಟನೆಗಳು
●ಅಂದು ಮುಶ್ರಿಕರಾಗಿದ್ದ ಅಬೂಸುಫ್ಯಾನರ ಯಾತ್ರಾ ಸಂಘವನ್ನು ತಡೆಯುವುದಕ್ಕಾಗಿ ಪ್ರವಾದಿ ﷺರು ಸ್ವಹಾಬಿಗಳನ್ನು ಒಟ್ಟುಗೂಡಿಸಿ ಯಾತ್ರೆಗೈದರು. ಇದು ತಿಳಿದ ಅಬೂಸುಫ್ಯಾನರು ವ್ಯಾಪಾರ ಸಂಘವನ್ನು ರಕ್ಷಿಸುವ ಸಲುವಾಗಿ ಳಂಳಮುಬ್ನು ಅಮ್ರಿಲ್ ಗಿಫ್ಫಾರೀಯನ್ನು ಮಕ್ಕಾಕ್ಕೆ ಕಳುಹಿಸುತ್ತಾರೆ. ●ಮಕ್ಕಾದ ಮುಶ್ರಿಕರು ಭಾರೀ ಯುದ್ಧ ಸನ್ನಾಹದೊಂದಿಗೆ ಒಂಭೈನೂರರಷ್ಟು ಸೈನಿಕರು ಹಾಗು ಶಸ್ತ್ರಾಸ್ತ್ರಗಳೊಂದಿಗೆ ಯಾತ್ರೆಗೈಯುತ್ತಾರೆ. ● ಆದರೆ, ಅಬೂಸುಫ್ಯಾನರ ವ್ಯಾಪಾರ ಸಂಘವು ತಂತ್ರ ಪೂರ್ವಕವಾಗಿ ದಾರಿ ಬದಲಿಸಿ ಕಡಲ ಕಿನಾರೆಯಿಂದ ದಾಟಿ ಸುರಕ್ಷಿತವಾಗಿ ಜುಹ್ಫಾ ತಲುಪುತ್ತದೆ. ●ಮುಶ್ರಿಕರಿಗೆ ಹಿಂದಿರುಗಲು ಹಾಗೂ ನಾವು ಬಂದು ತಲುಪಿದ್ದೇವೆಂಬ ಮಾಹಿತಿ ನೀಡಲು ಓರ್ವರನ್ನು ಕಳುಹಿಸುತ್ತಾರೆ. ●ಮುಶ್ರಿಕರ ನಾಯಕ ಅಬೂಜಹಲನು ಧಿಕ್ಕಾರದ ಮಾತುಗಳನ್ನಾಡುತ್ತಾನೆ ಹಾಗೂ ಅವನನ್ನು ಕಡೆಗಣಿಸುತ್ತಾರೆ. ●ಅಬೂಜಹನು ‘ಒಮ್ಮೆಯೂ ಹಿಂದಿರುಗುವ ವಿಷಯವಿಲ್ಲ, ನಾವು ಬದ್ರ್ಗೆ ಹೋಗುತ್ತೇವೆ ಅಲ್ಲಿ ಮೂರು ದಿವಸಗಳ ಕಾಲ ತಂಗುತ್ತೇವೆ. ಅರಬಿಗಳು ನಮ್ಮಿಂದ ಭಯವಿಹ್ವಲರಾಗಬೇಕು’ ಎಂಬ ಧಿಕ್ಕಾರದ ಮಾತುಗಳನ್ನಾಡುತ್ತಾನೆ. ●ಎರಡು ಪಂಗಡಗಳು ಬದ್ರ್ನಲ್ಲಿ ತಂಗುತ್ತಾರೆ. ನಂತರ ಯುದ್ಧ ಪ್ರಾರಂಭಗೊಳ್ಳುತ್ತೆ..
ಯುದ್ಧದಲ್ಲಿನ ಸೇನಾಬಲಗಳು:
●ಮುಸ್ಲಿಂ: 313 ಸ್ವಹಾಬಿಗಳು(240 ಅನ್ಸಾರಿಗಳು ಹಾಗು70 ರಷ್ಟು ಮುಹಾಜಿರ್ಗಳು), 60 ಯುದ್ಧ ಕವಚ, 3 ಕುದುರೆ, 70 ಒಂಟೆ. 3 ಕುದುರೆಗಳು ಈ ರೀತಿಯಂತಿವೆ ಮರ್ಸದ್(ರ)ರವರ–ಸಬ್ಲ್ ಮಿಕ್ದಾದ್(ರ)ರವರ–ಅಷ್ಜ ಝುಬೈರ್(ರ)ರವರ–ಯಅ’ಸೂಬ್
●ಮುಶ್ರಿಕ್: 1000 ಶಸ್ತ್ರಸಜ್ಜಿತ ಸೈನಿಕರು,100 ಕುದುರೆ, 700ಒಂಟೆ.
ತಂಗುವಿಕೆ;
ಬದ್ರ್ ಸಮೀಪದಲ್ಲಿ ಎರಡು ಸಾಮಾನ್ಯ ದಿಣ್ಣೆಗಳಿವೆ. ಅದರಲ್ಲಿ ಮುಸ್ಲಿಮರು ‘ಉದ್ವತುದ್ದುನ್ಯಾ’ ಎಂಬ ದಿಣ್ಣೆಯಲ್ಲಿ ತಂಗಿದರೆ ಮುಶ್ರಿಕರು ಉದ್ವತುಲ್ ಖುಸ್ವಾ ಎಂಬಲ್ಲಿ ತಂಗಿದರು.
ಪ್ರಾರಂಭಿಕ ಹಂತ:
ಮುಸ್ಲಿಮರು ತಂಗಿದ ಉದ್ವತುದ್ದುನ್ಯಾ ಕಣಿವೆಯಲ್ಲಿ ನೀರಿನ ಅಭಾವ ಎದ್ದು ಕಾಣುತ್ತಿತ್ತು. ಅವರಿಗೆ ಅಂಗಸ್ನಾನ, ಕುಡಿಯಲು ಹಾಗು ಸ್ನಾನ ಮಾಡಲು ನೀರು ಅತ್ಯವಶ್ಯಕವಾಗಿದ್ದವು. ಇದರಿಂದ ತೊಂದರೆಗೊಳಗಾಗಿದ್ದ ಮುಸ್ಲಿಮರಿಗೆ ಅನುಗ್ರಹವೆಂಬಂತೆ ಮಳೆ ವರ್ಶಿಸಿತು. ಅದೇ ಮಳೆ ಮುಶ್ರಿಕರ ನೆಲೆಯಲ್ಲಿ ನೀರು ನಿಂತು ಕೆಸರಾಗಿ, ಅತ್ತಿತ್ತ ಓಡಾಡಲು ಕಷ್ಟಕರವಾಯಿತು. ಮುಸ್ಲಿಮರು ನೀರಿನ ಕಟ್ಟೆಯೊಂದನ್ನು ನಿರ್ಮಿಸಿದರು. ಅದರಿಂದ ಮುಶ್ರಿಕರು ಬಾಯಾರಿಕೆ ನೀಗಿಸಲು ಬರುತ್ತಿದ್ದರು. ಹೀಗೆ ರಮಳಾನ್ ೧೭ರ ರಾತ್ರಿ ಯುದ್ಧ ಸನ್ನಾಹ ಮುಗಿಯಿತು.
ರಮಳಾನ್ ೧೭ರ ಪ್ರಭಾತದಲ್ಲಿ ಅಸ್ವದುಲ್ ಮಖ್ಝೂಮೀ ಎಂಬ ದುಷ್ಟನು ಮುಸ್ಲಿಮರ ನೀರಿನ ಸಂಗ್ರಹದಿಂದ ನೀರು ಕುಡಿಯುವೆ ಇಲ್ಲವೇ ಅದನ್ನು ನಾಶ ಮಾಡುವೆಂದು ಧಾವಿಸಿ ಬರುತ್ತಾನೆ. ಹಂಝ(ರ) ಅವನನ್ನು ಎದುರಿಸಿ ಕಾಲು ತುಂಡರಿಸುತ್ತಾರೆ. ಮತ್ತೆ ಶೌರ್ಯ ತೋರಿಸಿದಾಗ ಹಂಝ(ರ)ರು ಅವನ ಕತೆ ಮುಗಿಸಿದರು.
ದ್ವಿತೀಯ ಹಂತ:
ದ್ವಿತೀಯ ಹಂತದಲ್ಲಿ ದ್ವಂದ್ವ ಯುದ್ಧದಿಂದ, ಯುದ್ಧ ಆರಂಭಗೊಳ್ಳತ್ತೆ. ಮುಶ್ರಿಕರ ಕಡೆಯಿಂದ ಉತ್ಬತ್, ಸಹೋದರ ಶೈಬತ್, ಮಗ ವಲೀದ್ ಮುಂದಕ್ಕೆ ಬರುತ್ತಾರೆ.
●ಔಫ್ ಬಿನ್ ಹಾರಿಸ್ (ರ) ●ಮುಆವ್ವಿದ್ಸ್ ಬಿನು ಹಾರಿಸ್(ರ) ●ಅಬ್ದುಲ್ಲಾಹಿಬ್ನು ರವಾಹ(ರ)
ಎಂಬೀ ಮೂವರು ಅನ್ಸಾರಿಗಳು ಹೋದಾಗ ಮುಶ್ರಿಕರು ‘ಮದೀನಾದವರು ನಮಗೆ ಅಗತ್ಯವಿಲ್ಲ, ನಮ್ಮೊಂದಿಗಿದ್ದವರು ಮುಂದೆಬರಲಿ’ ಎಂಬ ಜಂಭದ ಮಾತಿನಿಂದ ಕೆಣಕುತ್ತಾರೆ. ಅದಕ್ಕೆ ಪ್ರತಿಯಾಗಿ ಉಬೈದಾ (ರ), ಹಂಝ(ರ) ಹಾಗು ಅಲಿಯ್ಯ(ರ) ಬರುತ್ತಾರೆ. ಪರಸ್ಪರ ಕಾದಾಟ ಆರಂಭಗೊಳ್ಳುತ್ತೆ ಉಬೈದಾ(ರ)–ಉತ್ಬತ್ ಹಂಝ(ರ)–ಶೈಬತ್ ಅಲಿ(ರ)–ವಲೀದ್
ಈ ರೀತಿಯಾಗಿ ಆರಂಭವಾದ ಕ್ಷಣಾರ್ಧದಲ್ಲೇ ಹಂಝ(ರ)ರ ಏಟಿಗೆ ಶೈಬತ್ ಬಲಿಯಾಗುತ್ತಾನೆ. ಉಬೈದಾ(ರ)ರಿಂದ ಸಿಕ್ಕ ಶೈಬತ್ ತಿರುಗೇಟು ನೀಡುವಾಗ ಉಬೈದಾ(ರ)ಗೆ ಕಾಲಿಗೆ ಪೆಟ್ಟಾಗುತ್ತದೆ. ಅಲೀ(ರ) ಎದುರಾಳಿಯಾದ ವಲೀದ್ನ ಕತೆ ಮುಗಿಸುತ್ತಾರೆ. ಇದೀಗ ೪ ಸಾವು ಸಂಭವಿಸಿರುತ್ತೆ.
ಕೊನೆಯ ಹಂತ ಹಾಗೂ ಫಲಿತಾಂಶ
ತಮ್ಮ ಘಟಾನುಘಟಿ ನಾಯಕರ ಕಳೆದುಕೊಂಡ ಮುಶ್ರಿಕರ ಗುಂಪುದಾಳಿ ಆರಂಭವಾಗುತ್ತದೆ. ಎರಡೂ ಸೇನೆಗಳು ಮುಖಾಮುಖಿಯಾಗಿ ಹೋರಾಡುತ್ತಾರೆ. ಮುಸ್ಲಿಮರು ‘ಅಹದ್, ಅಹದ್’ ಎನ್ನತ್ತಾ ಮುನ್ನುಗ್ಗುತ್ತಾರೆ. ಇತ್ತ ಡೇರೆಯಲ್ಲಿ ಪ್ರವಾದಿ ﷺರು ತನ್ನ ಕೈಗಳನ್ನು ಆಕಾಶದೆತ್ತರಕ್ಕೆ ಏರಿಸಿ ‘ಅಲ್ಲಾಹ್…! ಇದು ನಿನ್ನ ಸೈನ್ಯವಾಗಿದೆ. ಇಂದಿವರು ಯುದ್ಧದಲ್ಲಿ ಪರಾಜಿತರಾದರೆ ಭೂಮಿಯಲ್ಲಿ ನಿನ್ನನ್ನು ಆರಾಧಿಸುವವರು ಯಾರೂ ಇಲ್ಲ. ಆದ್ದರಿಂದ ನೀನು ನಮಗೆ ಸಹಾಯವನ್ನೊದಗಿಸು’ ಎಂದು ಕಣ್ಣೀರಿಳಿಸುತ್ತಾ ಪ್ರಾರ್ಥಿಸುತ್ತಿದ್ದಾರೆ. ಅಲ್ಲಾಹನಿಂದ ಸಹಾಯದ ವಾಗ್ದಾನವು ನೆರವೇರಿಸಲ್ಪಡುತ್ತದೆ. ಇಬ್ಲೀಸ್ ಮತ್ತವನ ಸೈನ್ಯವು ಮುಶ್ರಿಕರ ಸಹಾಯದಲ್ಲಿತ್ತು ಅದಕ್ಕೆ ಪ್ರತಿಯಾಗಿ ಅಲ್ಲಾಹನು ಮಲಕ್ಗಳನ್ನು ಕಳಿಸಿದ. ಪ್ರಥಮ ಹಂತದಲ್ಲಿ ಸಾವಿರ ಮಲಕನ್ನು ಇಳಿಸಿ ಕೊಡುತ್ತಾನೆ. ನಂತರ ಮೂರು ಸಾವಿರ, ಐದು ಸಾವಿರಕ್ಕೂ ಏರಿಸುತ್ತಾನೆ. ಮಲಕುಗಳ ಸಹಾಯದಿಂದ ಮುಸ್ಲಿಮರಿಗೆ ಬಲ ಕೂಡುತ್ತದೆ. ಮುಸ್ಲಿಮರು ಮುನ್ನುಗ್ಗುತ್ತಾ ಹೋದಂತೆ ಶತ್ರುಗಳು ಹಿಂದೇಟು ಹಾಕುತ್ತಾರೆ. ತಮ್ಮ ಘಟಾನುಘಟಿ ನಾಯಕರು ಕಣ್ಣುದುರಲ್ಲೇ ಬೀಳುತ್ತಿದ್ದಂತೆಯೇ ಅವರ ಸೈನ್ಯ ಛಿದ್ರ ಛಿದ್ರವಾಗಿ ಬಿಡುತ್ತದೆ.
ತಮ್ಮ ಘಟಾನುಘಟಿ ನಾಯಕರನ್ನು, ಆಪ್ತ ಬಂಧುಮಿತ್ರರು ಹಾಗೂ ಕುಟುಂಬಿಕರನ್ನು ಕಳೆದುಕೊಂಡ ಮುಶ್ರಿಕರು ಹೀನಾಯವಾಗಿ ಸೋಲುನ್ನುತ್ತಾರೆ. ವಿಜಯ ಪತಾಕೆ ಮುಸ್ಲಿಮರ ಕೈವಶವಾಗುತ್ತೆ.
ಪರಿಣಾಮ;
●ಉಬೈದಾ(ರ)ರಿಗೆ ದ್ವಂದ್ವ ಯುದ್ಧದಲ್ಲಿ ಪೆಟ್ಟಾಗಿರುವುದರಿಂದ ಮದೀನಾಕ್ಕೆ ಹಿಂದಿರುಗುವಾಗ ವಫಾತಾಗುತ್ತಾರೆ. ●ಅಬೂಜಹಲನನ್ನು ಮುಆದ್ಸ್(ರ) ಮತ್ತು ಮುಆವ್ವಿದ್ಸ್(ರ)ಎಂಬೀ ಮಕ್ಕಳ ಏಟಿನಿಂದ ನೆಲಕ್ಕುರುಳುತ್ತಾನೆ. ಇಬ್ನು ಮಸ್ಊದ್(ರ) ಧಾವಿಸುತ್ತಾ ಬಂದು ಅವನ ಕತ್ತು ಕತ್ತರಿಸಿ ಹಾಕುತ್ತಾರೆ. ●ಮುಶ್ರಿಕರ ನೇತಾರ ಉಮಯ್ಯತ್ನನ್ನು ಕೊಂದದ್ದು ಸ್ವತಃ ಅಡಿಯಾಳಾದ ಬಿಲಾಲ್(ರ)ರಿಂದಾಗಿದೆ. ●ಮಸ್ಲಿಮರಲ್ಲಿ ೧೪ ಮಂದಿ ಹುತಾತ್ಮರಾಗುತ್ತಾರೆ (8ಮುಹಾಜಿರ್,6 ಅನ್ಸಾರ್ಗಳು) ● ಮುಶ್ರಿಕರಲ್ಲಿ 70ಮಂದಿ ಹತರಾಗಿ 70ಮಂದಿ ಬಂಧಿಯಾಗುತ್ತಾರೆ. ●ಬದ್ರ್ನ ಪ್ರಥಮ ಶಹೀದ್ ಮಿಹ್ಜಅ'(ರ) ರವರಾಗಾದ್ದಾರೆ. ●ಮದೀನಾದ ಜನತೆಗೆ ಗನೀಮತ್(ಯುದ್ಧದ ಶೇಷ ಸೊತ್ತುಗಳು) ಸೊತ್ತುಗಳನ್ನು ಪ್ರವಾದಿ ﷺರು ಹಂಚುತ್ತಾರೆ. ●ಬಂಧಿಸಿದ ಜನರಿಂದ ದಂಡ ಪರಿಹಾರಗಳನ್ನು ವಸೂಲಿ ಮಾಡಿದರು.
ಕೆಲವೊಂದು ವಿಚಾರಗಳು
●ಪ್ರವಾದಿ ﷺರು ಮದೀನಾದಲ್ಲಿ ನಮಾಝಿನ ನೇತೃತ್ವವನ್ನು ಅಬ್ದುಲ್ಲಾಹಿಬ್ನು ಉಮ್ಮು ಮಕ್ತೂಮ್(ರ) ರಿಗೆ ನೀಡಿದರೆ, ಆಡಳಿತದ ಹೊಣೆಯನ್ನು ಅಬೂ ಲುಬಾಬತ್(ರ) ರಿಗೆ ನೀಡುತ್ತಾರೆ. ●ಅಬೂಜಹಲ್, ಮಕ್ಕಾ ನಿವಾಸಿಗಳಿಗೆ ನಾಶವೆರಗುತ್ತೆಂದು ಅಬ್ದುಲ್ ಮುತ್ತಲಿಬರ ಪುತ್ರಿ ಆತಿಕಾರಿಗೆ ಬಿದ್ದ ಕನಸು ನಿಜವಾಗುತ್ತೆಂದು ಭಯವಿಹ್ವಲನಾಗಿ ಯುದ್ಧ ಮಾಡಲು ಹಿಂಜರಿದನು, ಕೊನೆಗೆ ಅವನ ಮನವೊಲಿಸುವಲ್ಲಿ ನಾಯಕರು ಸಫಲರಾದರು. ●ಬದ್ರ್ಗೆ ಪ್ರವಾದಿ ﷺರು ಹೊರಡಿದ್ದು ರಮಳಾನ್ 12 ರಂದು ಶನಿವಾರವಾಗಿದೆ. ●ಕಾಲ್ದಳದ ನಾಯಕ ಉಮೈರುಬ್ನು ಅಬೀ ಸಅ’ಸಅ(ರ)ರವರಾಗಿದ್ದರು. ●ಬದ್ರಿನಲ್ಲಿ ಮೂರನೇ ಖಲೀಫಾ ಉಸ್ಮಾನ್(ರ)ಭಾಗವಹಿಸಿಲ್ಲ, ಕಾರಣ ಪತ್ನಿ, ಪ್ರವಾದಿ ﷺರ ಪುತ್ರಿಗೆ ರೋಗವಿತ್ತು. ●ಪ್ರವಾದಿ ﷺರು ಈ ರೀತಿ ಹೇಳಿ سَيُهْزَمُ الْجَمْعُ وَيُوَلُّونَ الدُّبُر ಒಂದು ಹಿಡಿ ಮಣ್ಣನ್ನು ತೆಗೆದು ಎಸೆದಾಗ ಅದು, ಅಲ್ಲಿದ್ದ 12,000 ಮಂದಿಯ ಕಣ್ಣಿಗೂ ತಲುಪಿತು, ನಂತರ ಅವರು ಅಲ್ಲಿಂದ ಪರಾರಿಯಾದರು. ಬದ್ರ್ನಲ್ಲಿ ಭಾಗವಹಿಸಿದ್ದೇ ಒಂದು ಸಾವಿರವಾಗಿದೆ, ಆದರೆ ಆ 12,000ದಲ್ಲಿ ವೀಕ್ಷಕರು, ಸಹಾಯ ಮಾಡಿದ ಪಿಶಾಚಿಗಳ ಕಣ್ಣಿಗೂ ನಾಟಿದೆ. ●ಇಬ್ಲೀಸನು, ರಣರಂಗಕ್ಕೆ ಸುರಾಖತ್ ಬಿನು ಮಾಲಿಕಿನ ವೇಷದಲ್ಲಿ ಬರುತ್ತಾನೆ. ಮಲಕ್ಗಳ ಆಗಮನವೇ ಆಗಮನ ಆತ ಅಲ್ಲಿಂದ ಪಲಾಯಣಗೈಯುತ್ತಾನೆ. ●ಮುಸ್ಲಿಮರ ಪತಾಕೆ ವಾಹಕ ಮಿಸ್ಅಬ್ ಬಿನ್ ಉಮೈರ್(ರ) ರವರಾಗಿದ್ದಾರೆ.
ಬದ್ರ್ ಯೋಧರ ಮಹತ್ವ:
ಒಮ್ಮೆ ಜಿಬ್ರೀಲ್(ಅ)ರು ಪ್ರವಾದಿ ﷺರ ಸನ್ನಿಧಿಗೆ ಬಂದು ಕೇಳುತ್ತಾರೆ, ನಿಮ್ಮವರೊಂದಿಗಿರುವ ಬದ್ರ್ ಯೋಧರ ಪದವಿಯೇನು..? ಪ್ರತ್ಯುತ್ತರವಾಗಿ ಪ್ರವಾದಿ ﷺರು ಹೇಳಿದರು: ಮನುಷ್ಯರ ಪೈಕಿಯಲ್ಲಿ ಬದ್ರ್ ಯೋಧರು ಅತ್ಯುನ್ನತ ಸ್ಥಾನದಲ್ಲಿರುವರು, ಆಗ ಜಿಬ್ರೀಲ್(ಅ) ಹೇಳುತ್ತಾರೆ ಬದ್ರ್ನಲ್ಲಿ ಪಾಲ್ಗೊಂಡ ಮಲಕುಗಳು, ಮಲಕುಗಳ ಪೈಕಿ ಶ್ರೇಷ್ಟರಾಗಿದ್ದಾರೆ. (ಸ್ವಹೀಹುಲ್ ಬುಖಾರಿ3692)
ಒಂದು ಮನೆಯಲ್ಲಿ ಬದ್ರ್ ಸ್ವಹಾಬಿಗಳ ಮದ್ಹ್ ಹಾಡಿ ಧಫ್ ತಟ್ಟುತ್ತಿದ್ದರು, ಪ್ರವಾದಿ ﷺರ ಆಗಮನವನ್ನರಿತ ಅವರು ಪ್ರವಾದಿ ﷺರ ಗುಣಗಾನಗಳನ್ನು ಹಾಡುತ್ತಾರೆ. ಪ್ರಸ್ತುತ ಸಮಯದಲ್ಲಿ ಪ್ರವಾದಿ ﷺರು ಹೇಳುತ್ತಾರೆ ಆಗ ಹಾಡುತ್ತಿದ್ದ (ಬದ್ರೀಙಳ ಮದ್ಹ್) ಮದ್ಹನ್ನೇ ಹಾಡಲು ನಿರ್ದೆಶಿಸಿದರು. (ಸ್ವಹೀಹುಲ್ ಬುಖಾರಿ)
ಬದ್ರ್ ಮೌಲಿದ್
ಕೇರಳಿಯರಾದ, ಪ್ರಮುಖ ಸೂಫಿವರ್ಯರೂ, ಗ್ರಂಥಕರ್ತರೂ ಆದ ‘ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರ್'(ನ.ಮ)ರವರಾಗಿದ್ದಾರೆ ಬದ್ರ್ ಮೌಲಿದ್ ರಚಿಸಿದ್ದು. ಇವರು ಕ್ರಿ.ಶ1851(ಹಿ.1268) ರಲ್ಲಿ ಕೇರಳದ ಪೊನ್ನಾನಿಯಲ್ಲಿ ಜನನ. ಹಮದಾನಿ ತಂಙಳ್, ಪುದಿಯಾಪಳ ಅಬ್ದುಲ್ಲಾ ಮುಸ್ಲಿಯಾರ್, ಚಾಲಿಲಗತ್ತ್ ಕುಂಙಿ ಅಹ್ಮದ್ ಮುಸ್ಲಿಯಾರ್ ಮುಂತಾದವರು ಇವರ ಪ್ರಮುಖ ಶಿಷ್ಯರಾಗಿದ್ದಾರೆ. ಸುಮಾರು ಹತ್ತರಷ್ಟು ಗ್ರಂಥಗಳು ಸಮಾಜಕ್ಕರ್ಪಿಸಿದ ಇವರು ಕ್ರಿ.ಶ 1904 (ಹಿ.1322)ರಂದು ಪೊನ್ನಾನಿಯಲ್ಲಿ ಮರಣಹೊಂದಿದರು.
ಖುರ್ಆನ್ ಏನೆನ್ನುತ್ತದೆ.
ಅಶ್ರಫ್ ನಾವೂರು
ಖುರ್ಆನ್ ಈ ಯುದ್ಧವನ್ನು “ಯೌಮುಲ್ ಫುರ್ಖಾನ್” ಸತ್ಯ ಹಾಗು ಅಸತ್ಯವನ್ನು ಬೇರ್ಪಡಿಸಿದ ದಿನವೆಂದು ಬಣ್ಣಿಸಿದೆ. إِذْ تَسْتَغِيثُونَ رَبَّكُمْ فَٱسْتَجَابَ لَكُمْ أَنِّى مُمِدُّكُم بِأَلْفٍۢ مِّنَ ٱلْمَلَٰٓئِكَةِ مُرْدِفِينَ (ಅಲ್ ಅನ್ಫಾಲ್ -9) ನೀವು ನಿಮ್ಮ ಪ್ರಭುವಿನೊಡನೆ ಸಹಾಯ ಬೇಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಾನು ಒಂದು ಸಾವಿರ ದೇವಚರರನ್ನು ಸರದಿ ಪ್ರಕಾರ ಕಳುಹಿಸಿ ಕೊಟ್ಟು ನಿಮಗೆ ಸಹಾಯ ಮಾಡುತ್ತೇನೆಂದು ಅವನು ಉತ್ತರಿಸಿದನು…
ಅಲ್ಹಂದುಲಿಲ್ಲಾಹ್, ಸಣ್ಣಮಟ್ಟಿಗೆ ಬದ್ರ್ ಯೋಧರ ಅಧ್ಯಯನವಾಯಿತು. ಇಂದು ಬದ್ರ್ ಹುತಾತ್ಮರ ಅನುಸ್ಮರಣೆ ದಿನವಾಗಿದೆ. ಆದ್ದರಿಂದ ಯಾರೂ ಫಾತಿಹಾ ಓದಿ ಹದಿಯಾ ಮಾಡಲು ಮರೆಯದಿರೋಣ. ಸರ್ವಶಕ್ತನು ಅನುಗ್ರಹಿಸಲಿ.
✍🏻 ಅಶ್ರಫ್ ನಾವೂರು (ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರು)
ಅವಲಂಬನೆ: ಮಲಯಾಳಂ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.