( ವಿಶ್ವ ಕನ್ನಡಿಗ ನ್ಯೂಸ್): ಕೊರೊನವೈರಸ್ ಅಬ್ಬರಕ್ಕೆ ವಿಶ್ವದ ಆರ್ಥಿಕತೆಯೇ ಅಲ್ಲೋಲ ಕಲ್ಲೋಲವಾಗಿದ್ದು ವಿಶ್ವಾದ್ಯಂತ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ ಈಗಾಗಲೇ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ . ಜೊತೆಗೆ ವಿದೇಶದಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ಕೂಡ ಅತಂತ್ರರಾಗಿದ್ದಾರೆ .ಇದರ ನಡುವೆ ಹಳ್ಳಿಗಳಲ್ಲಿ ಆಸ್ತಿ ಹೊಂದಿದ ಅನೇಕರು ವಿದೇಶ ಪಟ್ಟಣಗಳ ಕೆಲಸವನ್ನು ಬಿಟ್ಟು ತಮ್ಮ ತಮ್ಮ ಊರಿಗೆ ಬಂದು ಕೃಷಿ , ಹೈನುಗಾರಿಕೆ ಮಾಡಲು ಮನಸ್ಸುಮಾಡಿದ್ದು ಇನ್ನು ಕೆಲವರು ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ .ಇದರಿಂದ ಹಳ್ಳಿಗಳಲ್ಲಿ ಹೊಸ ಹುಮ್ಮಸ್ಸು ಮೂಡತೊಡಗಿದೆ .
ಒಂದು ಕಾಲದಲ್ಲಿ ಕೃಷಿ ಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಯುವ ಜನಾಂಗ ಈಗ ಮನಸ್ಸು ಬದಲಾಗಿಸಿ ಕೃಷಿಯತ್ತ ಚಿತ್ತ ಇಟ್ಟಿರುವುದು ಒಳ್ಳೆಯ ವಿಚಾರ .ಕುಟುಂಬ ಪ್ರೀತಿಯಿಂದ ವಂಚಿತರಾಗಿದ್ದ ಹಲವರು ಕೃಷಿ ಜೊತೆ ಅದನ್ನು ಇನ್ನು ಪಡೆಯಲಿದ್ದಾರೆ . ಕಳೆದ ಕೆಲವು ವರ್ಷಗಳಿಂದ ಅಮೇರಿಕ ಸೇರಿದಂತೆ ಹಲವು ರಾಷ್ಟ್ರಗಳಿಂದ ಮರಳಿ ಬಂದು ಕೃಷಿ ಮಾಡಿದ ಅನೇಕ ಯುವಕರ ಉದಾಹರಣೆ ನಮ್ಮ ಮುಂದಿರುವಾಗ ಕೊರೊನ ನಂತರ ಇದರ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.