ಬೀದರ (www.vknews.com): ಕೋವಿಡ್-19 ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟುವ ಸಂಬಂಧ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿದವರಿಗೆ ಬಸವಕಲ್ಯಾಣ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಮೇ.7ರಂದು ಬಸವಕಲ್ಯಾಣದ ಶ್ರೀ ಮಹಾತ್ಮ ಗಾಂಧಿ ವೃತ್ತ, ಶ್ರೀ ಬಸವೇಶ್ವರ ವೃತ್ತ, ಶ್ರೀ ಬಿ.ಆರ್.ಅಂಬೇಡ್ಕರ ವೃತ್ತ ಸೇರಿದಂತೆ ಇನ್ನೀತರ ಕಡೆಗಳಲ್ಲಿ ದಾಳಿ ನಡೆಸಿ, ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಮತ್ತು ಕಿರಾಣಾ, ಮೆಡಿಕಲ್ ಅಂಗಡಿಗಳು, ಲ್ಯಾಬಗಳು, ತರಕಾರಿ ಅಂಗಡಿಗಳಲ್ಲಿ, ಚಿಕನ್ ಮತ್ತು ಮಟನ್ ಅಂಗಡಿಗಳಲ್ಲಿ ಕೂಡ ಮಾಸ್ಕ್ ಧರಿಸದೇ ಇರುವವರಿಗೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ದ ಕ್ರಮಕೈಗೊಂಡು 3150 ರೂ. ದಂಡ ವಿಧಿಸಿದ್ದಾರೆ.
ನಗರಸಭೆ ಬಸವಕಲ್ಯಾಣದ ಸಹಾಯಕ ಅಭಿಯಂತರರಾದ ಶ್ರೀ ಗೌತಮ ಕಾಂಬಳೆ ಅವರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿಗಳಾದ ಪ್ರ.ದ.ಸ ಶ್ರೀ ಸೂರ್ಯಕಾಂತ ಶಾಖಾ, ಶೀಘ್ರಲಿಪಿಗಾರರು ಶ್ರೀ ಶ್ರೀಕಾಂತ ಕುಲಕರ್ಣಿ, ಸ್ಯಾನಿಟರಿ ಸೂಪರವೈಸರ್ ಶ್ರೀ ಅಶ್ವಿನ ಕಾಂಬಳೆ, ಕಿರಿಯ ಆರೋಗ್ಯ ನಿರೀಕ್ಷಕರು ಶ್ರೀ ಗಂಗಾಧರ, ಕಿರಿಯ ಆರೋಗ್ಯ ನಿರೀಕ್ಷಕರು ಶ್ರೀ ನಿತ್ಯಾನಂದ ಮತ್ತು ಇನ್ನೀತರು ದಾಳಿ ನಡೆಸಿದರು.
ಕೋವಿಡ್–19 ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯ ನಿಷೇಧಿಸಿ ಹಾಗೂ ಪ್ರತಿಯೊಬ್ಬ ವ್ಯಕ್ತಿಯು ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮೊದಲ ಸಲ ಉಲ್ಲಂಘನೆಗೆ ದಂಡದ ಮೊತ್ತವು ಮಾಸ್ಕ ಹಾಕದಿದ್ದರೆ 50 ರೂ., ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದಕ್ಕೆ ದಂಡ 250 ರೂ., ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ 100 ರೂ., ಗುಟ್ಕಾ ತಂಬಾಕುಗಳನ್ನು ಮಾರಾಟ ಮಾಡಿದರೆ ದಂಡ 250 ರೂ., ಅಗತ್ಯವಿಲ್ಲದೇ ಅಂಗಡಿಗಳನ್ನು ತೆರೆದಿರುವುದಕ್ಕೆ ದಂಡ 500 ರೂ., ಯಾವುದೇ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ 500 ರೂ. ದಂಡ ವಿಧಿಸಲಾಗುವುದು.
ಈ ಆದೇಶ ಪಾಲಿಸುವಲ್ಲಿ ವಿಫಲರಾದ ಸಾರ್ವಜನಿಕರ ವಿರುದ್ಧ ಕಲಂ 188 ಮತ್ತು 269 ಇಂಡಿಯನ್ ಪೇನಲ್ 1860ರಡಿ ಕ್ರಮ ತೆಗೆದುಕೊಳ್ಳವುದಾಗಿ ಮತ್ತು ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡುವ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿದೆ. ಆದ್ದರಿಂದ ಸದರಿ ಆದೇಶ ಪಾಲಿಸುವಲ್ಲಿ ವಿಫಲರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಬಸವಕಲ್ಯಾಣ ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ವರದಿ : ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.