(www.vknews.com) : ಪುತ್ತೂರು ಡಿವಿಷನ್ ನ ಸರ್ಕ್ಯುಲರ್ ಪ್ರಕಾರ ಎಸ್.ಎಸ್.ಎಫ್.ಮಾಡನ್ನೂರು ಶಾಖೆ ವತಿಯಿಂದ ದಿನಾಂಕ 9-05-2020 ಶನಿವಾರ 10.00 ಗಂಟೆಗೆ ಸರಿಯಾಗಿ ಮಾಡನ್ನೂರು ಶಾಖಾ ಗ್ರೂಪಲ್ಲಿ ಆನ್ಲೈನ್ ಬದ್ರ್ ಮೌಲೀದ್ ಮಜ್ಲಿಸ್ ಹಮ್ಮಿಕೊಳ್ಳಲಾಯಿತು..
ಸಮಾರಂಭದ ಪ್ರಾರ್ಥನೆಯನ್ನು ಅಬ್ದುಲ್ಲತೀಫ್ ಸಖಾಫಿ ಮಾಡನ್ನೂರು ನೆರವೇರಿಸಿದರು. ಎಸ್ಸೆಸ್ಸೆಫ್ ಮಾಡನ್ನೂರು ಶಾಖಾ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಾವು ಸ್ವಾಗತ ಪ್ರಭಾಷಣವನ್ನು ಮಾಡಿದರು.. ಶಾಖಾ ಅಧ್ಯಕ್ಷರಾದ ಸಲೀಂ ಮಾಡನ್ನೂರು ಅಧ್ಯಕ್ಷ ಪೀಠವನ್ನು ಅಲಂಕರಿಸಿದರು. ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಕೋಶಾಧಿಕಾರಿ ಸಂಶುದ್ದೀನ್ ಹನೀಫಿ ಮೀನಾವು ಸಮಾರಂಭವನ್ನು ಜಗದೊಡೆಯನ ನಾಮದಿಂದ ಉದ್ಘಾಟಿಸಿದರು.
ಚೆನ್ನಾವರ ಖತೀಬರಾಗಿರುವ ಅಬ್ದುಲ್ಲ ಅಹ್ಸನಿ ಮಾಡನ್ನೂರು, ಕೆಮ್ಮಾರ ಮುದರ್ರಿಸರಾದ ಹಾಫಿಳ್ ಇಲ್ಯಾಸ್ ಸಖಾಫಿ ಮಾಡನ್ನೂರು, ಮುನೀರ್ ಲತೀಫಿ ಮಾಡನ್ನೂರು, ಲತೀಫ್ ಸಖಾಫಿ ಮಾಡನ್ನೂರು,ತಖಿಯುದ್ದೀನ್ ಮದನಿ ಮಾಡನ್ನೂರು, ದಾರುಲ್ ಹುದಾ ತಂಬಿನಮಕ್ಕಿ ವಿಧ್ಯಾರ್ಥಿಯಾದ ನೌಫಾನ್ ಕಾವು ಮೌಲೀದ್ ಮಜ್ಲಿಸಿಗೆ ನೇತೃತ್ವವನ್ನು ನೀಡಿದರು.
ಸಮಾರೂಪ ಪ್ರಾರ್ಥನೆಯನ್ನು ಮದೀನತುಲ್ ಮುನವ್ವರ ಮೂಡಡ್ಕ ಮುದರ್ರಿಸರಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ನೆರವೇರಿಸಿದರು.ಕೆ.ಸಿ.ಎಫ್.ಕಾರ್ಯಕರ್ತರಾದ ಇಝ್ಝುದ್ದೀನ್ ಮುಸ್ಲಿಯಾರ್ ಕಾವು,ಶಮೀರ್ ಮಾಡನ್ನೂರು, ಇಬ್ರಾಹಿಂ ಸಅದಿ, ಎಸ್.ವೈ.ಎಸ್.ಮಾಡನ್ನೂರು ಕೋಶಾಧಿಕಾರಿ ಯೂಸುಫ್ ಕಾವು, ರಝ್ಝಾಕ್ ದೊಳಂತೋಡಿ ಅಲ್ಲದೆ ಟಿ.ಡಿ.ಸಿ.,ಎಸ್.ವೈ.ಎಸ್., ಎಸ್ಸೆಸ್ಸೆಫ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತಿಯನ್ನು ವಹಿಸಿದರು.
ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಉಪಾಧ್ಯಕ್ಷರಾದ ಇರ್ಫಾನ್ ಮಾಡನ್ನೂರು ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.