ಚಿಕ್ಕಬಳ್ಳಾಪುರ (www.vknews.com) : ಜಿಲ್ಲೆಯ ವಾಣಿಜ್ಯ ನಗರಿ ಎಂದು ಖ್ಯಾತಿ ಹೊಂದಿರುವ ಚಿಂತಾಮಣಿಯಲ್ಲಿ ಕೋರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರದಲ್ಲಿ ಈ ಹಿಂದೆ ಎರಡು ಪ್ರಕರಣಗಳು ದಾಖಲಾಗಿದ್ದವು ಈಗ ಮೂರನೇ ವ್ಯಕ್ತಿಗೆ ಕೋರೋನ ಪಾಸಿಟಿವ್ ದೃಡಪಟ್ಟಿದೆ.
ಮೊನ್ನೆಯಷ್ಟೆ ರೋಗಿ ಸಂಖ್ಯೆ 790 , 71 ವರ್ಷದ ವೃದ್ದನಿಗೆ ಕೋರೋನ ಪಾಸಿಟಿವ್ ಬಂದಿದ್ದ ಮರುದಿನವೇ ವೃದ್ಧನ ಮೊಮ್ಮಗನಿಗೆ ಕೋರೋನ ವೈರಸ್ ಇರುವುದು ದೃಡಪಟ್ಟಿತ್ತು . ಇಂದು ವೃದ್ಧನ ಮಗನಿಗೂ covid 19 ಸೊಂಕು ವಕ್ಕರಿಸಿದೆ. ಒಂದೇ ಕುಟುಂಬದ 3 ಜನರಿಗೆ ವೈರಸ್ ಅಟ್ಯಾಕ್ ಆಗಿದ್ದು, ದಿನೇ ದಿನೇ ನಗರದಲ್ಲಿ ಸೊಂಕೀತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರ ಮತ್ತು ಗ್ರಾಮೀಣ ಭಾಗದ ಜನರಲ್ಲಿ ಕೊರೋನಾ ಆತಂಕ ಶುರುವಾಗಿದೆ.
ಚಿಂತಾಮಣಿ ನಗರದಲ್ಲಿ ಕರೋನ ಸೋಂಕಿತ ರ ಸಂಖ್ಯೆ 3 ವ್ಯಕ್ತಿಗಳಿಗೆ ಸೊಂಕು ಈಗಾಗಲೇ ಸೊಂಕು ದೃಡಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತ ಶಂಕೆ 24 ಕ್ಕೆ ಏರಿಕೆ ಆಗಿದೆ. ಕೊವೀಡ್-19ಮುಕ್ತವಾಗಿದ್ದ ಚಿಂತಾಮಣಿ ನಗರದಲ್ಲೂ ಈಗ ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಜನ ಭಯ ಬೀತರಾಗಿದ್ದರೆ.
ಚಿಂತಾಮಣಿ ನಗರದಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನೆಲೆ ಅವರ ಸಂಪರ್ಕದಲ್ಲಿ ಇದ್ದ 100 ಕಿಂತ ಹೆಚ್ಚು ಮಂದಿಯನ್ನು ಕ್ವಾರಂಟೆನ್ ಮಾಡಿದ್ದು , ಅದರಲ್ಲಿ 44 ಜನರಿಗೆ ಆರೋಗ್ಯದ ಸ್ಥಿತಿ ನೆಗೆಟಿವ್ ಬಂದಿದೆ. ಇನ್ನೂ ಹಲವು ಮಂದಿಯ ಕೋರೋನ ಪರೀಕ್ಷೆಯ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.
ಇನ್ನೂ ಚಿಂತಾಮಣಿ ನಗರದ ಎನ್ ಆರ್ ಬಡಾವಣೆ ನಿವಾಸಿ 71 ವರ್ಷದ ವೃದ್ಧ ನಿಂದ , ಮಗ, ಮೊಮ್ಮಗನಿಗೆ ಸೊಂಕು ತಗಲಿದೆ. ಇವರನ್ನು ಚಿಕ್ಕಬಳ್ಳಾಪುರದ covid19 ಜಿಲ್ಲಾಸ್ಪತ್ರೆಯ ಐಸೋಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತಿಷ್ಠಿತ ಕುಟುಂಬ ಹಾಗೂ ಜ್ಯುವೆಲ್ಲರಿ ಶಾಪ್ ಮಾಲೀಕ ರಾಗಿರುವ ರೋಗಿ ಸಂಖ್ಯೆ 790, 71 ವರ್ಷದ ಸೋಂಕಿತ ವೃದ್ಧನ 65 ವರ್ಷದ ಪತ್ನಿ ಬೆಂಗಳೂರಿನ ವಿಜಯನಗರದ ಮಗಳ ಮನೆ ಯಿಂದ ಚಿಂತಾಮಣಿಗೆ ವಾಪಾಸ್ಸಾಗಿದ್ದರು. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಒಳಗಾಗಿ ಮಗಳ ಮನೆ ಯಲ್ಲಿ ಕೆಲದಿನಗಳು ವಿಶ್ರಾಂತಿ ಪಡೆದು ಚಿಂತಾಮಣಿ ನಗರದ ನಿವಾಸಕ್ಕೆ ಏಪ್ರಿಲ್ 26ರಂದು ವಾಪಸ್ಸಾಗಿದ್ದರು. ಮೇ 4ರ ರಾತ್ರಿ ಸೋಂಕಿತನ ಪತ್ನಿ ವೃದ್ಧೆ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮೇ 5ರಂದು ಅಂತ್ಯಕ್ರಿಯೆ ನೇರವೇರಿಸಿದ್ದರು. ಅಂತ್ಯ ಕ್ರಿಯೆಯಲ್ಲಿ ಬೆಂಗಳೂರಿನ ಹಲವರು ಬಾಗಿಯಾಗಿದ್ದರು ಎನ್ನಲಾಗಿದ್ದು ಅಲ್ಲಿಂದ ವೈರಸ್ ಅಟ್ಯಾಕ್ ಆಗಿರಬಹುದು ಎನ್ನಲಾಗಿದೆ.
ಚಿನ್ನದ ಅಂಗಡಿ ಮಾಲೀಕ, ಅವರ ಮೊಮ್ಮಗ ಈಗ ಮಗನಿಗೂ ಕೋರೋನ ಸೊಂಕು ಪಾಸಿಟಿವ್ ಬಂದಿದ್ದು, ಚಿಂತಾಮಣಿ ನಗರದ 9 ನೇ ವಾರ್ಡ ಕಂಟೇನ್ ಮೆಂಟ್ ಜೂನ್ ಮಾಡಲಾಗಿದೆ..
– ಮನ್ಸೂರ್ ಅಹಮದ್, ಚಿಂತಾಮಣಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.