(www.vknews.com) : ಪುತ್ತೂರು ಡಿವಿಷನ್ ನ ಸರ್ಕ್ಯುಲರ್ ಪ್ರಕಾರ ಎಸ್.ಎಸ್.ಎಫ್.ಈಶ್ವರಮಂಗಳ ಸೆಕ್ಟರ್ ವತಿಯಿಂದ ದಿನಾಂಕ 10-05-2020 ಆದಿತ್ಯವಾರ ರಾತ್ರಿ 10.00 ಗಂಟೆಗೆ ಸರಿಯಾಗಿ ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಕ್ಯಾಂಪಸ್ ಗ್ರೂಪಲ್ಲಿ ಆನ್ಲೈನ್ ಬದ್ರ್ ಮೌಲೀದ್ ಮಜ್ಲಿಸ್ ಹಮ್ಮಿಕೊಳ್ಳಲಾಯಿತು..
ಸಮಾರಂಭದ ಪ್ರಾರ್ಥನೆಯನ್ನು ಈಶ್ವರಮಂಗಳ ಸೆಕ್ಟರ್ ಕೋಶಾಧಿಕಾರಿ ಶಂಸುದ್ದೀನ್ ಹನೀಫಿ ಮೀನಾವು ನೆರವೇರಿಸಿದರು. ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಾಸಿರ್ ಕುಕ್ಕಾಜೆ ಸ್ವಾಗತ ಪ್ರಭಾಷಣವನ್ನು ಮಾಡಿದರು.
ಈಶ್ವರಮಂಗಳ ಸೆಕ್ಟರ್ ಅಧ್ಯಕ್ಷರಾದ ಅಬೂಬಕ್ಕರ್ ಲತೀಫಿ ಪಮ್ಮಲೆ ಅಧ್ಯಕ್ಷತೆಯನ್ನು ವಹಿಸಿದರು.ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಖಾಫಿ ಗಟ್ಟಮನೆ ಸಮಾರಂಭವನ್ನು ಜಗದೊಡೆಯನ ನಾಮದಿಂದ ಉದ್ಘಾಟಿಸಿದರು.
ಪುತ್ತೂರು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಿಹಾಬ್ ರಹ್ಮಾನ್ ಹಸನ್ ನಗರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮರ್ ಸಅದಿ,ನೌಫಾನ್ ಕಾವು,ಶಫೀಕ್ ಕತ್ರಿಬೈಲ್,ಹಿಶಾಂ ಕೊಯಿಲ, ರಮೀಝ್ ಮುಂಡೋಳೆ, ಮೌಲೀದ್ ಮಜ್ಲಿಸಿಗೆ ನೇತೃತ್ವವನ್ನು ನೀಡಿದರು.
ಸಮಾರೂಪ ಪ್ರಾರ್ಥನೆಯನ್ನು ತ್ವೈಬಾ ನಾಯಕರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ ನೆರವೇರಿಸಿದರು.ಹುಸೈನ್ ಜೌಹರಿ,ಶಿಹಾಬುದ್ದೀನ್ ಸಖಾಫಿ ಪಾಳ್ಯತ್ತಡ್ಕ, ಸಲೀಂ ಝುಹ್ರಿ ಪಾಳ್ಯತ್ತಡ್ಕ, ಶಫೀಕ್ ಸಅದಿ,ಸಾದಿಕ್ ಇಂದಾದಿ ಮೇನಾಲ,ಇರ್ಫಾನ್ ಮಾಡನ್ನೂರು, ಇರ್ಷಾದ್ ಕುಕ್ಕಾಜೆ, ಸಾದಾತ್ ಕೊಯಿಲ,ಲತೀಫ್ ಬಡಗನ್ನೂರು ಅಲ್ಲದೆ ಈಶ್ವರಮಂಗಳ ಸೆಕ್ಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಖಾ ಕ್ಯಾಂಪಸ್ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿಯನ್ನು ವಹಿಸಿದರು.
ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ನೌಫಾನ್ ಕಾವು ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.