ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್- 19 ಸಾಂಕ್ರಾಮಿಕ ವ್ಯಾಧಿಯ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ದ.ಕ.ಜಿಲ್ಲೆಯ ಅನಿವಾಸಿಗರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸಿಧ್ದವಾಗಿರುವ ಜಿಲ್ಲೆಯ ಸುನ್ನೀ ಶಿಕ್ಷಣ ಸಂಸ್ಥೆಗಳ ಪೈಕಿ ಸದ್ಯ ಮಂಜನಾಡಿ ಅಲ್ ಮದೀನಾ ಮತ್ತು ಮಾಣಿ ದಾರುಲ್ ಇರ್ಶಾದ್ ಸಂಸ್ಥೆಗೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಲ್ ಮದೀನಾ ಸಂಸ್ಥೆಗೆ ಇಂದು ಯು.ಎ.ಇ.ಯಿಂದ ಬರುವ ವಿಮಾನದಲ್ಲಿ ಬರುವವರ ಪೈಕಿ ಯಾರನ್ನಾದರೂ ಅಧಿಕೃತರು ಕಳಿಸುವುದಾದರೆ ಅವರನ್ನು ಸ್ವೀಕರಿಸುವ ಸಿಧ್ದತೆಗಳ ಬಗ್ಗೆ ಸಮಾಲೋಚನೆ ನಡೆಸುವುದಕ್ಕಾಗಿ ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಉಸ್ಮಾನ್ ಸ’ಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರ ನಾಯಕತ್ವದಲ್ಲಿ ಸ್ಥಳೀಯ ಸಂಘಟನಾ ನಾಯಕರ ಮತ್ತು ಟೀಂ ಇಸಾಬಾ ತಂಡದ ಸಭೆಯು ಅಲ್ ಮದೀನಾ ಸಭಾಂಗಣದಲ್ಲಿ ನಡೆಯಿತು.
ಅವರಿಗೆ ಬೇಕಾಗುವ ಸೌಲಭ್ಯಗಳ ಬಗ್ಗೆ ಚರ್ಚಸಿ ಬೇಕಾದ ವ್ಯವಸ್ಥೆ ಮಾಡಿಕೊಡಲು ಅಲ್ ಮದೀನಾ ಆಡಳಿತ ಸಮಿತಿಯು ಈಗಾಗಲೇ ನಿರ್ಣಯ ಕೈಗೊಂಡಿದ್ದು ಅವರಿಗೆ ಅಗತ್ಯವಾದ ಸೇವಾ ಸಹಕಾರ ಚಟುವಟಿಕೆಗಳನ್ನು ನಡೆಸಲು ಎಸ್.ವೈ.ಎಸ್.ನ ಸೇವಾ ವಿಭಾಗವಾದ ಟೀಂ ಇಸಾಬಾ ವನ್ನು ಸಂಪೂರ್ಣ ಸಜ್ಜುಗೊಳಿಸಲಾಗಿದೆ. ಟೀಂ ಇಸಾಬಾ ದ.ಕ.ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಎಂ.ಇಸ್ಮಾಯಿಲ್ ಕಿನ್ಯ ಹಾಗೂ ಅವರ ತಂಡ ಇದರ ನೇತೃತ್ವವನ್ನು ವಹಿಸಿ ಕೊಂಡಿದೆ. ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಗತ್ಯವಾದ ಮಾರ್ಗ ನಿರ್ದೇಶನಗಳನ್ನು ನೀಡಲಾಯಿತು.
ಸಭೆಯಲ್ಲಿ ಉಸ್ಮಾನ್ ಸ’ಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ರಶೀದ್ ಝೈನೀ ನಿರ್ದೇಶನ ನೀಡಿದರು. ಎಸ್. ವೈ.ಎಸ್.ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ಇಸ್ಮಾಯಿಲ್ ಸ’ಅದಿ, ಅಲ್ ಮದೀನಾ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಂಜದಿ,ಫಾರೂಖ್ ಅಬ್ಬಾಸ್ ಉಳ್ಳಾಲ, ಕಲ್ಕಟ್ಟ ಮೋನು, ಮುಹಮ್ಮದ್ ಮಾಸ್ಟರ್ ಕಲ್ಕಟ್ಟ, ಅಬ್ದುಲ್ ರಝಾಖ್ ನಾವೂರು, ಮೊಯ್ದಿನ್ ಕುಂಞಿ ಮೋಂಟುಗೋಳಿ ಮುಂತಾದವರು ಹಾಗೂ ಸ್ಥಳೀಯ ಟೀಂ ಇಸಾಬಾ ಸದಸ್ಯರು ಪಾಲ್ಗೊಂಡರು. ಇಸ್ಮಾಯಿಲ್ ಕಿನ್ಯ ಸ್ವಾಗತಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.