ವಚನಗಳು : (www.vknews.com)
1. ದಗೆಯ ದಾಹವೋ ದೇಹ ಆವರಿಸಿದ ಕಲ್ಪನೆಯೋ ಕೂಡಿ ಕಳೆದು ನಿಬ್ಬೆರಗಾಗಿ ನಿಷ್ಕಲ್ಮಶ ನಿನ್ನ ನಾಮ ಸ್ಮರಣೆಗಿಳಿಯಲು ಕಾಡು ಮಲ್ಲಿಕಾರ್ಜುನ ನಿನ್ನ ಮಂಗಳ ಮೂರುತಿ ಕನಸ ಕನ್ನಡಿಯಲಿ ರಾರಾಜಿಸಿತ್ತು.
2. ಕಾರಣದ ಕಾರಣಿಕ ಕಾಡುಮಲ್ಲಿಕಾರ್ಜುನ ಕೇಳಬೇಕೇನು ನಾನಿನ್ನ? ನೀನಿಟ್ಟ ಸೌಭಾಗ್ಯವ ಸವಿದುಣ್ಣುವಾಗ ಕಣ್ಣೀರೇಕೆ? ಪಾಪ ಕರ್ಮದ ಫಲವ ಕಡಿದುರುಳಿಸಿ ಕೊಲ್ಲಬಹುದೇ?
3. ಸಂಕಟಗಳನೇಕೆ ಶಂಖದಂತೆ ಊದುವುದು ಮನ ಸಂಕಟಹರ ಕಾಡುಮಲ್ಲಿಕಾರ್ಜುನ ನಿನ್ನ ಅಲಕ್ಷಿಸಿದುದಕೆ ಲಕ್ಷಕೋಟಲೆಗಳೆನ್ನ, ಭುಂಜಿಸಬಂದುದುದಂತೆ ಸತ್ಯ.
4. ಕಣ್ಣಿದ್ದು ಕುರುಡಾದೆ ಕಿವಿಯಿದ್ದು ಕಿವುಡಾದೆ ಕಾಲಿದ್ದು ಹೆಳವನಾದೆ ಕೈಯಿದ್ದು ಉಣ್ಣಲಾರದೆ ಹೋದೆ. ಮೊಲೆ ಹೊತ್ತ ಹೆಣ್ಣಾಗಲಿಲ್ಲ, ಮೀಸೆ ಹೊತ್ತ ಅಣ್ಣಗಳಾಗಲಿಲ್ಲ, ಎಲ್ಲವೂ ಇದ್ದೇನು ಫಲ, ‘ನಾನು’ ತುಂಬಿದ ಮದ ಅಂತರಂಗದಿಕರಗಲು ಎಲ್ಲೆಲ್ಲೂ ಕಾಡುಮಲ್ಲಿಕಾರ್ಜುನನ ಕಂಡು ನಲಿದೆ.
5. ಇದ್ದುದೆಲ್ಲವು ನನ್ನದೇ ಏನು? ಇರದಿದ್ದುದನನಗಾಗಿಬೇಕೇನು? ಇನ್ನೆಷ್ಟುದಿನಕಾಗಿಪಾಪವ ಸಂಚಯಿಸಿ ಸಾಕುವುದು? ಪುಕ್ಕಟೆ ಕರ್ಮಗಳಿಗೆ ಭಾಜರಾಗಲು. ನಿನ್ನ ನಾಮಸ್ಮರಣೆ ನಿತ್ಯವೂ ನಡೆಯಲು, ಅನುರಕ್ತೆ ಪಾರಮಾರ್ಥಿಕದೊಡೆಯ ಕಾಡುಮಲ್ಲಿಕಾರ್ಜುನನ ದಿವ್ಯರೂಪಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.