(www.vknews.com) : “ನಾಳೆ ಮಾಡುವುದನ್ನು ಇಂದು ಮಾಡು, ಇಂದು ಮಾಡುವುದನ್ನು ಈಗಲೇ ಮಾಡು” ಎಂಬ ದಾಸರು ತಮ್ಮ ನುಡಿಗಳ ಮೂಲಕ ಸಮಯ ಇರುವಾಗಲೇ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸಬೇಕು ಎಂದು ಹೇಳಿದ್ದಾರೆ. ಯಾವ ವ್ಯಕ್ತಿಗೆ ಸಮಯಪ್ರಜ್ಞೆ ಇರುತ್ತೋ ಆ ವ್ಯಕ್ತಿ ತನ್ನ ಗುರಿಯನ್ನು ಮುಟ್ಟುವುದರಲ್ಲಿ ಬೇರೆ ಮಾತಿಲ್ಲ. ಅದೇ ಯಾವ ವ್ಯಕ್ತಿಗೆ ಸಮಯದ ಬೆಲೆ ಹಾಗೂ ಪರಿಜ್ಞಾನ ಇರುವದಿಲ್ಲವೋ ಆ ವ್ಯಕ್ತಿ ಮುಂದೊಂದು ದಿನ ಕಣ್ಣೀರು ಹಾಕುತ್ತಾನೆ. ಅವನು ಆ ಸಮಯದ ಸದುಪಯೋಗ ಸರಿಯಾಗಿ ಪಡೆದುಕೊಂಡರೆ ತನಗೆ ಈ ಗತಿ ಬರುತ್ತಿಲ್ಲವೆಂದು ಮನದಲ್ಲಿ ಕೊರಗುತ್ತಾನೆ .
ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ,ಕಾಯಕ, ಇವೆಲ್ಲವೂಗಳಿಂದ ಕೂಡಿದಾಗ ಮಾತ್ರ ಆತ ಆರೋಗ್ಯವಂತನಾಗಿರಲು ಸಾಧ್ಯ . ಇಲ್ಲದಿದ್ದರೆ ಆ ವ್ಯಕ್ತಿಯಲ್ಲಿ ಆಲಸ್ಯ, ಸೋಮಾರಿತನ,ಏಸಿಡಿಟಿ, ನಿದ್ರಾಹೀನತೆ ಉಂಟಾಗಿ ಅನಾರೋಗ್ಯದಿಂದ ಬಳಲುತ್ತಾನೆ.ಆದರಿಂದ ಆತ ಮೊದಲು ಸಮಯ ಪ್ರಜ್ಞೆ ಬಗ್ಗೆ ತಿಳ್ಕೊಂಡಿರಬೇಕು. ಸಮಯ ಪ್ರಜ್ಞೆ ಎಂದರೇನು? ಎಲ್ಲರಿಗೂ ಪ್ರಶ್ನೆ ಕಾಡುತ್ತಿದೆಯೇ? ಉತ್ತರ ಇಲ್ಲಿದೆ ನೋಡಿ ಸಮಯಕ್ಕೆ ತಕ್ಕಂತೆ ಬಳಕೆ ಮಾಡುವುದು ಚಿತ್ತಾವಧಾನ, ಚಾಕ ಕುಕ್ಕತೆ, ಪ್ರಸಂಗವಧಾನ ಎಂಬ ಅರ್ಥಗಳು ಕೊಡುತ್ತದೆ. ಇದನ್ನು ಬೆಳೆಸಿಕೊಳ್ಳಲು ಹೇಳುವ ನಾವು ನೀವುಗಳು ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಕಾರ್ಯಗಳನ್ನು ಚಾಚು ತಪ್ಪದೆ ಮಾಡಬೇಕು. ವಿದ್ಯಾರ್ಥಿಗಳು ಪಾಠವನ್ನು ಗಮನ ಹರಿಸಿ ಕೇಳಬೇಕು ಹಾಗೆ ನಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನಾವು ಬೇರೆ ಕಡೆಗೆ ಲಕ್ಷ್ಯ ವಹಿಸದೆ ಇರುವುದು, ನಮ್ಮ ಗಮನ ಬೇರೆ ಕಡೆಗೆ ಕೊಡುವದು ಮಾಡಿದರೆ ಆ ಸಮಯ ವ್ಯರ್ಥವಾಗಿ ಹೋಗುತ್ತೆ .
ಯಾವಾಗಲೂ ಒಳ್ಳೆಯ ಕಾರ್ಯ ಮಾಡಲು ಹೆಚ್ಚು ಸಮಯ ಅವಕಾಶ ತೆಗೆದುಕೊಳ್ಳಬಾರದು ಬಹು ಬೇಗ ಮಾಡಿ ಮುಗಿಸಬೇಕು. ನಮ್ಮ ಬಳಿ ಒಂದು ವಿಶೇಷವಾದ ಶಕ್ತಿ (ಮೆದಳು )ಇದೆ. ಅದರ ಹೆಸರು ಏನು ಗೊತ್ತಾ? ಅದು ” ಸಮಯ” ಪ್ರತಿ ದಿನವೊಂದಕ್ಕೆ ಆ ಶಕ್ತಿಯಲ್ಲಿ (ಮೆದುಳಿನಲ್ಲಿ ) 86400 ಸೆಕೆಂಡ್ಗಳು ಕೂಡಿ ಇಡುತ್ತೇವೆ. ನಾವು ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು. ಈ ದಿನ ನಾನೇನನ್ನು ಕೈಗೊಳ್ಳಬೇಕೆಂದುಕೊಂಡಿರುವೆನೋ ಅದು ಹಿಂದಿನ ದಿನ ಮಲಗುವ ಮುಂಚೆಯೇ ನಿರ್ಧರಿಸಬೇಕು. ನಮ್ಮ ಜೀವನದಲ್ಲಿ ನಾವು ಕಲಿಯುವ ತರಗತಿಗಳು ಮತ್ತೆಂದೂ ಹಿಂದಿರುಗುವುದಿಲ್ಲ. ಅದು ಹತ್ತನೇ ತರಗತಿ ಆಗಿರಬಹುದು, ಇಲ್ಲ ಪಿ.ಯು.ಸಿ.ನೇ ಆಗಿರಬಹುದು. ಅದನ್ನು ಮನಸಾರೆಯಾಗಿ ಓದಿ ಆ ತರಗತಿಯಲ್ಲಿಯೇ ಸಾಧ್ಯವಾದಷ್ಟು ಜ್ಞಾನವನ್ನು ಹೀರಿಕೊಂಡು ಗರಿಷ್ಠ ಮಟ್ಟ ಮುಟ್ಟಬೇಕು. ಯಾಕೆಂದರೆ ಅದು ಮತ್ತೊಮ್ಮೆ ನಮ್ಮ ಜೀವನದಲ್ಲಿ ಮರಳಿ ಬರಲಾರದು .
ಸಮಯ ಪ್ರಜ್ಞೆಯ ಬಗ್ಗೆ ತೆನಾಲಿರಾಮರ ಒಂದು ಕಥೆಯನ್ನು ಹೇಳುತ್ತೇನೆ. ಒಂದು ಸಾರಿ ಮಾವಿನಹಣ್ಣಿನ ಕಾಲ ಬೆಳೆ ಸಮೃದ್ಧಿಯಾಗಿ ಬೆಳೆದಿರುತ್ತದೆ. ಕೃಷ್ಣದೇವರಾಯನ ಆಸ್ಥಾನದಲ್ಲಿ ಮಾವಿನ ಹಣ್ಣಿನ ಸಮಾರಂಭ ಒಂದನ್ನು ಏರ್ಪಡಿಸಿರುತ್ತಾರೆ. ಆಗ ಅಲ್ಲಿ ಎಲ್ಲರೂ ನಾನಾ ರೀತಿಯ ಸಿಹಿಯಾದ ಸವಿಯಾದ ಹಣ್ಣುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲಿ ತೆನಾಲಿ ರಾಮನು ಬಂದಿರುತ್ತಾನೆ. ಅಲ್ಲಿ ನೆರೆದಂತಹ ಜನರು ತಾವು ತಂದಂತಹ ಮಾವಿನಹಣ್ಣಿನ ವಿಶೇಷತೆಗಳನ್ನು ತಳಿಗಳನ್ನು ರಾಜನ ಮುಂದೆ ಹೇಳುತ್ತಾ ಹೊಗಳುತ್ತಾರೆ. ಆದರೆ ತೆನಾಲಿಯು ಒಂದು ಕೋಣೆಯಲ್ಲಿ ತೆಪ್ಪಗೆ ನಿಂತಿರುವದನ್ನು ಕಂಡು ಕೃಷ್ಣದೇವರಾಯರು ತೆನಾಲಿಯ ಹತ್ತಿರ ಹೋಗಿ ಎಲ್ಲರೂ ತಂದಂತಹ ಪರಿಪಾರಿಯಾದ ಹಣ್ಣುಗಳನ್ನು ಕೊಟ್ರು ಆದ್ರೆ ನೀನ್ಯಾಕೆ ಕೊಟ್ಟಿಲ್ಲ ಅಂತ ಕೇಳುತ್ತಾರೆ. ಆಗ ತೆನಾಲಿಯು ತನ್ನ ಕೈಯಲ್ಲಿರುವ ಒಂದು ಮಾವಿನ ಹಣ್ಣನ್ನು ರಾಜನ ಕೈಯಲ್ಲಿಡುತ್ತಾನೆ . ಅದನ್ನು ನೋಡಿ ಸಭೆಯಲ್ಲಿ ನೆರೆದಿರುವ ಎಲ್ಲಾ ಜನರು ಕೇಕೆಹಾಕಿ ನಗಲು ಪ್ರಾರಂಭಿಸುತ್ತಾರೆ. ಕೃಷ್ಣದೇವರಾಯನಿಗೂ ನಗು ತಾಳದೆ ಅವರು ಸಹ ನಗಲು ಪ್ರಾರಂಭಿಸುತ್ತಾನೆ. ಆಗ ತೆನಾಲಿ ನಿಧಾನವಾಗಿ ಹೇಳಿದ ಮಹಾರಾಜರೇ ಈ ಹಣ್ಣು ನಮ್ಮ ಪೂರ್ವಜರು ಹಚ್ಚಿರುವಂತಹ ಮರದ ಮೊದಲನೇ ಹಣ್ಣು ಇದರಲ್ಲಿ ನಮ್ಮ ಪೂರ್ವಜರ ಆಶೀರ್ವಾದ, ಹಾರೈಕೆ ಇದೆ ಎಂದು ಇದನ್ನು ತಂದಿರುವೆನೆಂದು ಹೇಳುತ್ತಾನೆ . ಅದನ್ನು ಕೇಳಿದ ರಾಜನು ತೆನಾಲಿ ಮಾತಿನಲ್ಲಿ ಸತ್ಯವಿದೆ ಎಂದುಕೊಂಡು ಕೊಟ್ಟಿರುವಂತಹ ಹಣ್ಣನ್ನು ಮೊದಲಿಗೆ ತಿನ್ನುತ್ತಾನೆ. ಅದನ್ನು ನೋಡಿದಂತಹ ಜನರು ಆಶ್ಚರ್ಯ ಚಕಿತರಾಗುತ್ತಾರೆ. ಇಲ್ಲಿ ತೆನಾಲಿ ರಾಮನು ತನ್ನ ಚತುರತೆಯನ್ನು ಬಳಸಿಕೊಂಡು ಸಿಕ್ಕ ಸಮಯದಲ್ಲಿ ಅವಕಾಶವನ್ನು ಬಳಸಿಕೊಂಡು ಪ್ರಜೆಗಳ ಗಮನ ತನ್ನ ಕಡೆ ಸೆಳೆದುಕೊಳ್ಳುತ್ತಾನೆ. ಈ ಕಥೆಯಿಂದ ನಮಗೆ ತಿಳಿಯುವುದೇನೆಂದರೆ ಸಮಯ ಕಡಿಮೆ ಇದ್ದಾಗಲೂ ನಮ್ಮ ಚಾತುರ್ಯತೆಯಿಂದ ಸಮಯದ ಸದುಪಯೋಗ ಮಾಡಿಕೊಳ್ಳಬಹುದು ಅಂತಾ ತೆನಾಲಿರಾಮ ನಮ್ಮೆಲ್ಲರಿಗೂ ತಿಳಿಸಿಕೊಟ್ಟ.
ಸಮಯದ ಅಪವ್ಯಯ ಹಣದ ಅಪವ್ಯಯ ಕ್ಕಿಂತಲೂ ಅಪಾಯಕಾರಿಯಾದದ್ದು ಹಣ ಕಳೆದುಕೊಂಡರೆ ಮುಂದೊಂದು ದಿನ ಸಂಪಾದಿಸಬಹುದು ಆದರೆ ಸಮಯವನ್ನು ಕಳೆದುಕೊಂಡರೆ ಎಂತಹ ಶ್ರೀಮಂತನು ಸಂಪಾದಿಸಲು ಸಾಧ್ಯವೇ ಇಲ್ಲ ಅಲ್ಲವೇ ? ಆದರೆ ಕೆಲವೊಬ್ಬರು ನನ್ನ ಮನವೆಂಬ ಮರ್ಕಟನು ಕುಣಿಸಿದಂತೆ ಕುಣಿದು ತಮ್ಮ ಸಮಯವನ್ನು ವ್ಯಯ ಮಾಡುತ್ತಾರೆ. ನಾನಾ ಆಸೆಗಳಿಗೆ, ಚಟಗಳಿಗೆ, ಬಲಿಪಶುವಾಗಿ ಮಾರಿ ಹೋಗುತ್ತಾರೆ. ಮುಂದೊಂದು ದಿನ ತನ್ನ ಸಹಪಾಠಿಗಳು ಒಳ್ಳೆಯ ಹುದ್ದೆಯಲ್ಲಿದ್ದಾಗ ಆಕಸ್ಮಿಕವಾಗಿ ಭೇಟಿ ಆದಾಗ ಅವರಿಗೆ ತನ್ನ ತಪ್ಪಿನ ಅರಿವಾಗುತ್ತದೆ . ಆಗ ಕಳೆದು ಹೋದ ಸಮಯವನ್ನು ನೆನೆಯುತ್ತ ನಾನು ಅವನಂತೆ ಸಮಯಕ್ಕೆ ಸರಿಯಾಗಿ ಓದಿನತ್ತ ಆಸಕ್ತಿ ತೋರಿಸಿದ್ದರೇ ಈಗ ನಾನು ಸಹ ಒಂದು ಒಳ್ಳೆಯ ಹುದ್ದೆಯಲ್ಲಿ ಇರಬಹುದಿತ್ತು ಎಂದು ಮನಸ್ಸಿನಲ್ಲೇ ನೊಂದುಕೊಳ್ಳುತ್ತಾನೆ. ಬಸ್ ಹೋದ ಮೇಲೆ ಟಿಕೆಟ್ ಕೇಳಿದರೆ ಯಾರು ಕೊಡುತ್ತಾರೆ ? ಕಳೆದು ಹೋದ ಸಮಯ ಮತ್ತೆ ಸಿಗಲ್ಲ …….. ಸಮಯ ಸಿಕ್ಕಾಗ ಅದರ ಸದುಪಯೋಗ ಮಾಡಿಕೊಳ್ಳಬೇಕು ಮುಂದೆ ಆ ಜ್ಞಾನ ಸಿಗಲು ಸಾಧ್ಯವಿಲ್ಲ.
ಸುನಿತಾ. ಎಸ್. ಪಾಟೀಲ
ನಾವು ಕೆಲವೊಂದು ಒತ್ತಡಗಳಿಗೆ ಮಣಿದು ಬಾಲ್ಯವನ್ನು ಯೌವನದಲ್ಲಿ, ಯೌವ್ವನವನ್ನು ಮುಪ್ಪಿನಲ್ಲಿ ಕಾಣಲು ಪ್ರಯತ್ನಿಸುತ್ತೇವೆ. ಆಗ ಹಲವರ ಟೀಕೆಗಳಿಗೆ ಗುರಿಯಾಗುತ್ತವೆ. ಸಮಯ ಇದ್ದಾಗಲೇ ನಾವು ನೀವುಗಳು ತಂದೆ -ತಾಯಿ ಆಗಿರ್ಬಹುದು, ಹೆಂಡತಿ -ಮಕ್ಕಳಾಗಿರಬಹುದು, ಇಲ್ಲ ಪ್ರೇಯಸಿಯಾಗಿರಬಹುದು, ಬಂಧು-ಬಳಗವೇ ಆಗಿರ್ಬಹುದು ಅವರು ನಮ್ಮಿಂದ ಸ್ವಲ್ಪ ಸಮಯ, ಪ್ರೀತಿಯ ಎರಡು ಮಾತು, ಅಕ್ಕರೆಯ ನೋಟ, ಬಯಸುವದನ್ನು ನಾವು ಅರಿತುಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಮಕ್ಕಳು ಚಿಕ್ಕವರಿದ್ದಾಗ ತನ್ನ ತಂದೆ ತಾಯಿಯ ಜೊತೆ ಸಮಯ ಕಳೆಯಲು ಹಂಬಲಿಸುತ್ತಾರೆ ಆಗ ಕೆಲಸದ ಒತ್ತಡದಲ್ಲಿ ತಂದೆ ತಾಯಿಗೆ ಮಕ್ಕಳಿಗೆ ಕೊಡಲು ಸಮಯ ಇರುವುದಿಲ್ಲ. ಅದೇ ಮುಂದೊಂದು ದಿನ ತಂದೆ-ತಾಯಿ ವಯಸ್ಸಾದಾಗ ಮಕ್ಕಳೊಂದಿಗೆ ಸಮಯ ಕಳೆಯಲು ಇಚ್ಛಿಸುತ್ತಾರೆ ಆಗ ಅದೇ ಮಕ್ಕಳಿಗೆ ತಂದೆ-ತಾಯಿಗೆ ಸಮಯ ಕೊಡಲು ಆಗುವುದಿಲ್ಲ. ಗಡಿಯಾರ ದಿನನಿತ್ಯ ತಿರುಗುತ್ತದೆ ನಿಜ ! ಆದರೆ ಹೋದ ಸಮಯ ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಆದ್ದರಿಂದ ಸಮಯ ಇದ್ದಾಗಲೇ ನಾವು ಸಮಯ ಪ್ರಜ್ಞೆ ಯನ್ನು ಅರಿತುಕೊಂಡು ನಡೆದರೆ ನಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಹೇಳುತ್ತಾ ನನ್ನ ಬರವಣಿಗೆಗೆ ವಿರಾಮ ಇಡುತ್ತೇನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.