ಆತೂರು (www.vknews.com) : ಅನೇಕ ಜೀವಕಾರುಣ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ “ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಮಂಗಳೂರು” (ಡಿ.ಕೆ.ಎಸ್.ಸಿ) ಇದರ ಬೆಳ್ಳಿಹಬ್ಬದ ಪ್ರಯುಕ್ತ ಸಿಲ್ವರ್ ಜ್ಯಬಿಲಿ ಕೋರ್ ಕಮಿಟಿ (ಜಿಸಿಸಿ) ಕೋವೀಡ್ -19 ವೈರಾಣುವಿನಿಂದ ಸಂಕಷ್ಟಗೊಳಾದ ಜನರಿಗೆ ಸಾಂತ್ವಣದ ಬಲ ತುಂಬುವ ಸಲುವಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಸುಮಾರು 50 ಲಕ್ಷ ರೂಪಾಯಿಗೂ ಮಿಕ್ಕಿದ ವೆಚ್ಚದಲ್ಲಿ, ಸುಮಾರು 2500 ಕ್ಕಿಂತ ಅಧಿಕ ಕುಟುಂಬಕ್ಕೆ ವಿತರಿಸುವ ಭಾಗವಾಗಿ ಕಡಬ ತಾಲೂಕಿನ ಕಡಬ, ಕೋಡಿಂಬಾಳ, ಸುಂಕದಕಟ್ಟೆ, ಮರ್ಧಾಳ, ಕಳಾರ, ಹೊಸಮಠ, ಕುಂತೂರು, ಕುಂಡಾಜೆ, ಹಳೇನೇರೆಂಕಿ, ಗಂಡಿಬಾಗಿಲು ಮತ್ತು ಆತೂರು ಜಮಾಅತ್ ನಲ್ಲಿ 130 ಕ್ಕೂ ಅಧಿಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಅಕ್ಕಿ ಮತ್ತು ದಿನಸಿ ಸಾಮಾನುಗೊಳಗೊಂಡ ಕಿಟ್ಟನ್ನು ವಿತರಿಸಲಾಯಿತು.
ಎ.ಕೆ. ಸಿರಾಜ್ ಕುಂತೂರು, ಅಬೂಬಕ್ಕರ್ ಕಡಬ, ಕೆ.ಎ. ಯಹ್ಯಾ ಆತೂರು, ಕೆ.ಮಹಮ್ಮದ್ ಆತೂರು, ನಿಝಾಂ ಕುಂತೂರು ಮತ್ತು ಶಾಕಿರ್ ಆತೂರು ಇವರು ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.