ಬೆಂಗಳೂರು (www.vknews.com) : ಮೇ 21:ಕೊವಿಡ್ 19 ಅಥವಾ ಕೊರೊನದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಕಾರ್ಮಿಕರನ್ನು ಹಲ್ಲಿಲ್ಲದ ಹಾವಿನಂತೆ ಮಾಡುವುದಕ್ಕೋಸ್ಕರ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡಿದೆ.ಈ ತಿದ್ದುಪಡಿ ಕಾಯ್ದೆಗಳ ಪ್ರಕಾರ ಕಾರ್ಮಿಕರು ಶಾಂತಿಯುತವಾಗಿ ಪ್ರತಿಭಟಿಸುವಂತಿಲ್ಲ, ಒಕ್ಕೂಟಗಳನ್ನು ಅಥವಾ ಸಂಘಗಳನ್ನು ರಚಿಸುವ ಹಕ್ಕನ್ನು ನಿರಾಕರಿಸುತ್ತದೆ.
ಕಾರ್ಮಿಕ ಸಂಘಗಳ ಮಾನ್ಯತೆ ಸ್ಥಗಿತಗೊಳ್ಳಲಿದೆ. ಈ ಹೊಸ ಕಾನೂನುಗಳು ಕಾರ್ಮಿಕರ ಆರೋಗ್ಯದ ಹಕ್ಕು, ವಿರಾಮ, ಸುರಕ್ಷಿತ ಕೆಲಸದ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ. ಅದು ಸಂವಿಧಾನದ 21 ನೇ ಪರಿಚ್ಛೇಧದ ಅಡಿಯಲ್ಲಿ ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತದೆ. ಕಾರ್ಮಿಕ ಕಾನೂನುಗಳ ಕುರಿತಾದ ಅಂತರರಾಷ್ಟ್ರೀಯ ಚೌಕಟ್ಟನ್ನು ಈ ತಿದ್ದುಪಡಿಗಳು ಉಲ್ಲಂಘಿಸಿವೆ ಎಂದು ಹೇಳಲಾಗುತ್ತಿದೆ.
ಆದ್ದರಿಂದ ಯಾವುದೇ ಕಾರಣಕ್ಕೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡಬಾರದು ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಮಿಕ ಕಾನೂನುಗಳಲ್ಲಿ ಮಾಡಿದ ಬದಲಾವಣೆಗಳು, ಆರ್ಥಿಕ ಚಟುವಟಿಕೆ ಮತ್ತು ಮಾರುಕಟ್ಟೆ ಸುಧಾರಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ವಾಸ್ತವದಲ್ಲಿ ಕಾರ್ಮಿಕರನ್ನು ಬಲವಂತದ ದುಡಿಮೆಗೆ ತಳ್ಳುವಂತಹ ಕಾಯ್ದೆಯಾಗಿದೆ ಎಂದು ಅನುಮಾನವಿದೆ.ಅಷ್ಟು ಮಾತ್ರವಲ್ಲ ಬಂಡವಾಳ ಶಾಹಿಗಳ ಅಣತಿಯಂತೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.
ಕಾರ್ಮಿಕರನ್ನು ಯಾವ ರೀತಿ ಇವರು ಉಪಚಾರ ಮಾಡುತ್ತಾರೆಂದು ಈಗಾಗಲೇ ವಲಸೆ ಕಾರ್ಮಿಕರ ವಿಷಯದಲ್ಲಿ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಇದರ ವಿರುದ್ಧ ಮೇ 22ರಂದು ರಾಷ್ಟ್ರಾದ್ಯಂತ ನಡೆಯುವ ಪ್ರತಿಭಟನೆಯಲ್ಲಿ FITU ಸಕ್ರೀಯವಾಗಿದೆ.
ಪ್ರಧಾನಮಂತ್ರಿ,ಕಾರ್ಮಿಕ ಸಚಿವರು ಮತ್ತು ರಾಷ್ಟ್ರಪತಿಗಳಿಗೆ ಪ್ರತಿಭಟನೆಯ ಸಂಕೇತವಾಗಿ ಪ್ರತಿ ಜಿಲ್ಲೆಯಿಂದ,ತಾಲೂಕ್ ಮಟ್ಟದಿಂದ ಮನವಿ ಕಳಿಸುವ ಮೂಲಕ ಮತ್ತು ಲಾಕ್ಡೌನ್ ನಿಯಮವನ್ನು ಪಾಲಿಸಿ ಪ್ರತಿಭಟನೆ ಮಾಡುವಂತಹದ್ದನ್ನು FITU ಮಾಡಲಿದೆ ಎಂದು ಅವರು ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.