ಮಂಗಳೂರು(www.vknews.in): ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಆಟೋ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರಕಾರ ಘೋಷಣೆ ಮಾಡಿದ 5 ಸಾವಿರ ರೂಪಾಯಿ ಪರಿಹಾರ ಧನ ಶೀಘ್ರ ಕೊಡಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್(ಎಸ್ಡಿಟಿಯು) ದಕ ಜಿಲ್ಲೆಯ ವಿವಿದೆಡೆ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಮಂಗಳೂರು: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಎಸ್ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಕೆ ಸರಕಾರ ಪರಿಹಾರ ಧನ ಘೋಷಣೆ ಮಾಡಿ 18 ದಿವಸ ಕಳೆದರೂ ಪರಿಹಾರ ಧನ ಮಾತ್ರ ಫಲಾನುಭವಿಗಳ ಕೈ ಸೇರಿಲ್ಲ ಪರಿಹಾರ ಧನ ಹೇಗೆ ಪಡೆಯುವುದು ಎಂದು ಅಧಿಕೃತವಾಗಿ ಸರಿಯಾದ ಆದೇಶ ಹೊರಡಿಸದೆ ಸಂಕಷ್ಟದಲ್ಲಿರುವ ಚಾಲಕರನ್ನು ಸತಾಯಿಸುತ್ತಿರುವುದೂ ಗಮನಿಸಿದರೆ ಈಗಾಗಲೇ ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಚಾಲಕರ ಜೀವನದಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ ಇದು ಖಂಡನೀಯ, ಈ ಬಗ್ಗೆ ಮೇ 21 ರಂದು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆ ಲಾಕ್ ಡೌನ್ ಕಾರಣದಿಂದ ತಾತ್ಕಾಲಿಕ ಮುಂದೂಡಿದ್ದೇವೆ ಆದರೆ ಸರಕಾರ ಘೋಷಿಸಿದ ಪರಿಹಾರ ಧನ ನೀಡದೆ ಇದ್ದರೆ ಲಾಕ್ ಡೌನ್ ಲೆಕ್ಕಿಸದೆ ರಾಜ್ಯದಾದ್ಯಂತ ಆಟೋ ಟ್ಯಾಕ್ಸಿ ಚಾಲಕರು ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು, ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ, ನಗರ ಸಮಿತಿ ಅಧ್ಯಕ್ಷ ಮಜೀದ್ ಉಳ್ಳಾಲ, ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ, ಉಪಾಧ್ಯಕ್ಷ ಶಿಯಾಬ್ ಜೆಪ್ಪು, ಕಾರ್ಯದರ್ಶಿ ಶೆರೀಫ್ ಕುತ್ತಾರ್ ಉಪಸ್ಥಿತರಿದ್ದರು. ಮಂಗಳೂರು(ಉಳ್ಳಾಲ): ಎಸ್ಡಿಟಿಯು ಮಂಗಳೂರು(ಉಳ್ಳಾಲ) ಕ್ಷೇತ್ರ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಉಳ್ಳಾಲ ನಗರ ಸಭಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು, ಉಪಾಧ್ಯಕ್ಷ ಇಸ್ಮಾಯಿಲ್ ತಲಪಾಡಿ, ಕಾರ್ಯದರ್ಶಿ ಮೋಯಿದಿನ್, ಜಿಲ್ಲಾ ಸಮಿತಿ ಸದಸ್ಯ ಖಲೀಲ್ ಉಳ್ಳಾಲ್, ಆಟೋ ಯೂನಿಯನ್ ಕಾರ್ಯದರ್ಶಿ ನವಾಜ್ ಅಳೇಕಲ, ಅಬೂಬಕ್ಕರ್ ಉಳ್ಳಾಲ್, ನಗರ ಸಭಾ ಸದಸ್ಯ ಅಸ್ಗರ್ ಅಲಿ ಉಪಸ್ಥಿತರಿದ್ದರು. ಬಂಟ್ವಾಳ : ಎಸ್ಡಿಟಿಯು ತಾಲೂಕು ಅಧ್ಯಕ್ಷ ಕಾದರ್ ಆಲಂಪಾಡಿ ನೇತ್ರತ್ವದಲ್ಲಿ ಉಪ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಲಕೆ, ಸದಸ್ಯರಾದ ಶಾಫಿ ಕಲ್ವಾಯಿ, ಆಟೋ ಯೂನಿಯನ್ ಅಧ್ಯಕ್ಷರಾದ ಸಂಶುದ್ದೀನ್ ಪಲ್ಲಮಜಲ್, ಸಮಿತಿ ಸದಸ್ಯರಾದ ತೌಸೀಫ್ ಅಲಾಡಿ, ಹಾರಿಸ್ ಸಜಿಪ, ಉಪಸ್ಥಿತಿತರಿದ್ದರು. ಬೆಳ್ತಂಗಡಿ: ಎಸ್ಡಿಟಿಯು ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ಉಮರ್ ಫಾರೂಕ್ ರವರ ನೇತೃತ್ವದಲ್ಲಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು, ಪ್ರಧಾನ ಕಾರ್ಯದರ್ಶಿಗಳಾದ ಶಮೀಮ್ ಯೂಸೂಫ್, ಉಪಾಧ್ಯಕ್ಷರಾದ ಅಜಯ್ ಲೋಬೋ ಮತ್ತು ಆಟೋ ಯೂನಿಯನ್ ಚಾಲಕ ಸಂಘದ ಅಧ್ಯಕ್ಷರಾದ ನವಾಜ್ ಜಿಕೆ,ಕಾರ್ಯದರ್ಶಿಗಳಾದ ಅಬ್ದುಲ್ ರಹಮಾನ್,ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿಗಳಾದ ಫಜಲ್ ರಹ್ಮಾನ್ ಕೋಯಾ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು: ಎಸ್ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ರವರ ನೇತೃತ್ವದಲ್ಲಿ ಉಪ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು ಸೋಷಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ಶಮೀರ್ ಕೂರ್ನಡ್ಕ, ಕಾರ್ಯದರ್ಶಿ ಆಸಿಫ್ ಮುಕ್ವೆ, ಉಮ್ಮರ್ ಪರ್ಪುoಜ, ಉಮರ್ ಸಂಪ್ಯ, ಅಝೀಜ್ ಉಪ್ಪಿನಂಗಡಿ ಉಪಸ್ಥಿತರಿದ್ದರು. ಸುಳ್ಯ: ಎಸ್ಡಿಟಿಯು ಸುಳ್ಯ ತಾಲೂಕು ಅಧ್ಯಕ್ಷ ಫೈಝಲ್ ಬೆಳ್ಳಾರೆ ಯವರ ನೇತೃತ್ವದಲ್ಲಿ ಸುಳ್ಯ ತಾಲೂಕು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು, ಕಾರ್ಯದರ್ಶಿ ಕಬೀರ್ ಮಡಿಕೇರಿ, ಜಿಲ್ಲಾ ಕೋಶಾಧಿಕಾರಿ ಹಮೀದ್ ಬಿಳಿಯರು, ಎಸ್ಡಿಪಿಐ ಕಾರ್ಯದರ್ಶಿಗಳಾದ ಮುಸ್ತಫ. ಎಂ. ಕೆ, ಆಟೋ ಯೂನಿಯನ್ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಕಲ್ಲುಮುಟ್ಟು, ಸದಸ್ಯರಾದ ಅಬೂಬಕ್ಕರ್ ಸಂಭ್ರಮ, ರಿಝ್ವಾನ್ ಸುಳ್ಯ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.