ವಿಶ್ವಕನ್ನಡಿಗ ನ್ಯೂಸ್: ನನ್ನ ಸ್ನೇಹಿತರೇ, ನೀವು ಪ್ರತಿಯೊಬ್ಬರು ಈ ಘಟನೆಯನ್ನು ಓದಲೇ ಬೇಕು ಮತ್ತು ಪ್ರಾರ್ಥಿಸಬೇಕು. ಇದು ನಿಮ್ಮಲ್ಲಿ ನನ್ನ ಕಳಕಳಿಯ ವಿನಂತಿ.
ನನ್ನ ಮುಖಪುಟದ ಗೆಳಯರಲ್ಲೊಬ್ಬರಾದ ಅಬ್ದುಲ್ ಜಲೀಲ್ ಮೆಲ್ಕಾರ್ ಇವರ ಮಡದಿಯ ಅಕ್ಕನ ಪ್ರೀತಿಯ ಮಗನಾದ ನಾಲ್ಕು ವರ್ಷದ ಮೊಹಮ್ಮದ್ ರಿಹಾನ್ ನ ಈ ನಶ್ವರ ಇಹಲೋಕದ ಅಲ್ಪಸಮಯದ ಕರಾಳ ಬದುಕಿನ ಕುರಿತು ಒಂದೆರಡು ಪದಗಳನ್ನು ಬರೆಯಲು ಇಷ್ಟ ಪಡುತ್ತಿದ್ದೇನೆ. ಉಪ್ಪಿನಂಗಡಿ ಸಮೀಪದ ಕೋಲೆಜಾಲ್ ಎಂಬ ಪ್ರದೇಶದ ಮೊಹಮ್ಮದ್ ಇರ್ಫಾನ್ ಮತ್ತು ಅಫ್ಸಾ ದಂಪತಿಗಳ ಪ್ರೀತಿಯ ಸುಪುತ್ರನಾದ ಮೊಹಮ್ಮದ್ ರಿಹಾನ್ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ತನ್ನ ಬದುಕನ್ನು ತನ್ನ ಪ್ರಾಯದ ಮಕ್ಕಳೊಂದಿಗೆ ಬೆರೆತು ಆಟ,ವಿನೋದಗಳಿಂದ ಕಟ್ಟಿಕೊಳ್ಳುತ್ತಿದ್ದ, ಈಗೆ ಆಟವಾಡುತ್ತಿದ್ದ ಮಗು ಒಂದು ದಿನ ತನ್ನ ತಾಯಿಯಲ್ಲಿ ಅಮ್ಮಾ ಏನೋ ನನ್ನ ಹೊಟ್ಟೆಯಲ್ಲಿ ನೋವು ಕಾಣಿಸುತ್ತಿದೆ ಎಂದು ಹೇಳ ತೊಡಗಿದ ಇದನ್ನು ಗಮನಿಸಿದ ತಾಯಿ ಇದೊಂದು ಸಾಮನ್ಯವಾಗಿ ಮಕ್ಕಳಿಗೆ ಬರುವಂತ ಹೊಟ್ಟೆನೋವು ಎಂದುಕೊಂಡು ಮನೆಯಲ್ಲಿಯೇ ಇದ್ದ ಔಷಧಿಯನ್ನು ನೀಡಿದರು. ಒಮ್ಮೆಗೆ ಗುಣಮುಖನಾಗಿ ಮೊಹಮ್ಮದ್ ರಿಹಾನ್ ಎಂದಿನಂತೆ ತನ್ನ ಆಟದಲ್ಲಿಯೇ ನಿರತನಾಗಿದ್ದನು ಈಗೆ ಮುಂದುವರೆಯುತ್ತಾ ಕಾಲಕ್ರಮೇಣ ಮಗು ತನ್ನ ಹೊಟ್ಟೆಯ ವಿಪರೀತ ನೋವಿನ ಬಗ್ಗೆ ಮತ್ತೆ ತಾಯಿಯಲ್ಲಿ ಹೇಳತೊಡಗಿದ ಇದನ್ನು ಗಮನಿಸಿದ ತಾಯಿ ತನ್ನ ಫ್ಯಾಮಿಲಿ ಡಾಕ್ಟರ್ಗೆ ತೋರಿಸಿದರು ಪರೀಕ್ಷೀಸಿದ ಡಾಕ್ಟರ್ ಮಗುವಿನ ಹೊಟ್ಟೆಯಲ್ಲಿ ಗೆಡ್ಡೆಯೊಂದು ಬೆಳೆತಯುತ್ತಿದೆ ಎಂಬ ಕಹಿ ಸುದ್ದಿಯನ್ನು ತಾಯಿಗೆ ನೀಡಿದರು. ಇದರಿಂದ ನೊಂದ ದಂಪತಿಗಳು ಕಳೆದ ಒಂದು ವರ್ಷದಿಂದ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಲ್ಲಾ ಕಡೆಯಿಂದಲೂ ಮದ್ದು ಮಾಡುತ್ತಿದ್ದರು.ಆದರೂ ದೇವರ ವಿಧಿಯ ಆಟ ಬೇರೇನೆ ಆಗಿತ್ತು
ಇದೇ ಉಪವಾಸ 25 ರ ರಾತ್ರಿ ಮೊಹಮ್ಮದ್ ರಿಹಾನ್ ತನ್ನ ತಾಯಿಯನ್ನು ಕರೆದು ಅಮ್ಮ ನನ್ನನ್ನು ಆದಷ್ಟೂ ಬೇಗ ಸ್ಥಾನ ಮಾಡಿಸು ಎಂದು ಕೂಗ ತೊಡಗಿದನು ಹಾಗೇಯೇ ತಾಯಿ ಕೂಡ ತನ್ನ ಮಗುವನ್ನು ಸ್ಥಾನ ಮಾಡಿಸಿ ಕೋಣೆಗೆ ಕರೆತಂದರು, ಮತ್ತೇ.. ತಾಯಿಯನ್ನು ಕೂಗಿದ ರಿಹಾನ್ ನಾನು ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ ಅಮ್ಮ ಎಂದು ಹೇಳಿದನು, ರಿಹಾನ್ ನ ನಡುವಳಿಕೆಯಲ್ಲಿ ವಿಚಿತ್ರವನ್ನು ಗಮನಿಸಿದ ಮನೆ ಮಂದಿಯೆಲ್ಲಾ ರಿಹಾನ್ ನ ಪಕ್ಕದಲ್ಲಿಯೇ ಕುಳಿತುಕೊಂಡರು, ಮತ್ತೇ.. ಕೂಗಿದ ರಿಹಾನ್ ಎಲ್ಲರನ್ನು ಹತ್ತಿರ ಕರೆದು ಚುಂಬಿಸುತ್ತ ತನ್ನ ತಾಯಿಯ ಕೈಯನ್ನು ಹಿಡಿದು ಅಮ್ಮ ನೀನು ಯಾವಾಗಲೂ ಅಳಬಾರದಮ್ಮ ( #ಅಲ್_ಹಂದುಲಿಲ್ಲಾಹ್) ಎಂಬ ಕೊನೆಯ ಮಾತನ್ನು ಹೇಳುತ್ತಾ ಈ ಇಹಲೋಕದ ಅಲ್ಪ ಸಮಯದ ಬದುಕಿಗೆ ವಿದಾಯ ಹೇಳಿ ಕೊನೆಯುಸಿರೆಳೆಯುವ ಒಂದು ಅಘಾತಕಾರಿಯಾದ ಘಟನೆ ಮನೆ ಮಂದಿಯ ಸಮ್ಮುಖದಲ್ಲಿ ನಡೆದೇ ಹೋಯಿತು. ಮೊಹಮ್ಮದ್ ರಿಹಾನ್ ನ ಆಕಾಲಿಕ ಮರಣವನ್ನು ಕಣ್ಣೇದುರೇ ನೋಡಿದ ತಾಯಿಯು ಆಘಾತಕ್ಕೊಳಗಾಗಿ ಇಂದು ಬದುಕಿದ್ದು ಸತ್ತವಳಂತೆ ದುಖಿಃತಳಾಗಿ ಮೂಕಪಕ್ಷಿಯಂತೆ ಮನೆಯ ಒಂದು ಮೂಲೆಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಒಂದು ಕಡೆ ರಿಹಾನ್ ನನ್ನು ಕಳೆದುಕೊಂಡ ನೋವನ್ನು ಸಹಿಸಲು ಅಸಾಧ್ಯವಾದ ದುಖಃವಾದರೆ ಇತ್ತ ರಿಹಾನ್ ತಾಯಿಯ ಶೋಚನೀಯ ಸ್ಥಿತಿಯನ್ನು ಕಂಡು ಕುಟುಂಬದಲ್ಲಿ ಇಂದು ಕಗ್ಗತ್ತಲ ಛಾಯೆ ಮೂಡಿದೆ. ಇದನ್ನೆಲ್ಲಾರಿತ ಅಬ್ದುಲ್ ಜಲೀಲ್ ಮೆಲ್ಕಾರ್ ರವರು ನಿನ್ನೆ ನನಗೊಂದು ಸಂದೇಶ ರವಾಣಿಸಿದರು ರಹಿಮಾನ್ ಭಾಯಿ ನೀವು ನನಗೊಂದು ಸಹಾಯ ಮಾಡಬೇಕು ಅದೇನಂದ್ರೆ ನನ್ನ ಕುಟುಂಬದ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಆದುದರಿಂದ ತಾವು ನಿಮ್ಮ ಬರಹದ ಮೂಲಕ ನನ್ನ ಕುಟುಂಬಕ್ಕೆ ನಿಮ್ಮ ಸ್ನೇಹಿತರಲ್ಲಿ ಪ್ರಾರ್ಥಿಸಲು ವಿನಂತಿಸಿ ಕಂಡಿತವಾಗಿಯೂ ಯಾರದರೊಬ್ಬರ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಿದರೆ ನಮ್ಮ ಕುಟುಂಬ ಎಂದಿನಂತೆ ಸಹಜ ಸ್ಥಿತಿಗೆ ಮರಳುತ್ತದೆ.
ಆದುದರಿಂದ ನನ್ನೆಲ್ಲಾ ಮುಖಪುಟದ ಪ್ರೀತಿಯ ಗೆಳೆಯ, ಗೆಳತಿಯರೇ ಅ ತಾಯಿ ತನ್ನ ಕರುಳಕುಡಿಯನ್ನು ಕಳೆದುಕೊಂಡ ನೋವನ್ನು ಮರೆತು ಒಂದು ಸುಂದರವಾದ ಬದುಕು ಕಟ್ಟಲು ಅದೇ ರೀತಿ ಅವರ ಕುಟುಂಬ ಯಥಾಸ್ಥಿತಿಗೆ ಮರಳಲು ಮತ್ತು ನಮ್ಮನ್ನೆಲ್ಲರನ್ನಗಲಿದ ಮೊಹಮ್ಮದ್ ರಿಹಾನ್ ನ ಪರಲೋಕದ ಶಾಸ್ವತವಾದ ಬದುಕು ಅತ್ಯಂತ ಸುಂದರವಾಗಿರಲಿ ಎಂದು ನಾವೆಲ್ಲರೂ ಈ ಪವಿತ್ರವಾದ ಉಪವಾಸದ ಕೊನೆಯ ಘಟ್ಟದಲ್ಲಿರುವ ಸಂಧರ್ಭದಲ್ಲಿ ಸರ್ವಶಕ್ತನಾದ ಅಲ್ಲಾಹನಲ್ಲಿ ನಿರಂತರವಾಗಿ ಪ್ರಾರ್ಥಿಸುವ ಸರ್ವಶಕ್ತನಾದ ಅಲ್ಲಾಹನು ಅನುಗ್ರಹಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್.
ಬರಹ: ರಹಿಮಾನ್ ಮಠ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.