ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್ 19 ಕೊರೋನಾ ಮಹಾಮಾರಿ ರೋಗವು ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಬಡ ಮತ್ತು ಮಧ್ಯಮ ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ದಾನಿಗಳ ಸಹಕಾರದಿಂದ ಸರಿಸುಮಾರು 33 ಮತ್ತು ದ್ವಿತೀಯ ಹಂತದಲ್ಲಿ ಹತ್ತು ಕಿಟ್ ವಿತರಿಸಿದ್ದ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯ ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿತ್ತು.
ಈ ಬಾರಿ ಹಲವಾರು ಬೇಡಿಕೆಗಳು ಬಂದಿದ್ದನ್ನು ಗಣನೆಗೆ ತೆಗೆದುಕೊಂಡ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯು ತೃತೀಯ ಹಂತದಲ್ಲಿ ಅರ್ಹ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಾಲೋನಿ ಸೇರಿದಂತೆ ಕಿಟ್ ವಿತರಿಸಲಾಯಿತು. ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆ ಸಾಮಾಜಿಕ ಕಾರ್ಯವನ್ನು ಗುರುತಿಸಿ ಈ ಬಾರಿ ಕೆಮ್ಮಾರ ಪರಿಸರದ ದಾನಿಗಳು ಸೇರಿದಂತೆ ರೈಯಾನ್ ಬಿಲ್ಡಿಂಗ್ ಕಂಟ್ರಕ್ಷನ್ ತೊಕ್ಕೊಟ್ಟು ಇದರ ಮಾಲಕರಾದ ರಫೀಕ್ ರವರು ಉತ್ತಮ ಮೊತ್ತವನ್ನು ನೀಡುವ ಮೂಲಕ ನಮ್ಮ ಸಾಮಾಜಿಕ ಸೇವೆಗೆ ಸಹಭಾಗಿತ್ವವನ್ನು ನೀಡಿದ್ದರಿಂದ ಹೆಚ್ಚಿನ ಸಂತ್ರಸ್ತ ಬಡ ಕುಟುಂಬಗಳಿಗೆ ಕಿಟ್ ವಿತರಿಸಲು ಸಾಧ್ಯವಾಯಿತು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಝೀಝ್ ಬಿ.ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅತಾವುಲ್ಲ ಕೆಮ್ಮಾರ , ಪ್ರಧಾನ ಕಾರ್ಯದರ್ಶಿ ಅಬ್ದುಲ್ ಗಫ್ಪಾರ್ ಕೆಮ್ಮಾರ, ಮಾಧ್ಯಮ ಸಲಹೆಗಾರ ಹಕೀಮ್ ಆಕಿರೆ, ಸಂಘಟನಾ ಕಾರ್ಯದರ್ಶಿ ಬಾಶಿತ್ ಅಲಿ ಕೆಮ್ಮಾರ, ನೌಫಲ್ ಕೆಮ್ಮಾರ, ಸಾಮಾಜಿಕ ಹೋರಾಟಗಾರ ಮುಸ್ತಫಾ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.