ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಿಲ್ಲೆಯಲ್ಲಿ ಮಾತ್ರವಲ್ಲದೆ ಕೇರಳ ಗಡಿ ಪ್ರದೇಶವಾದ ಮಂಜೇಶ್ವರ ಸಮೀಪದ ತೋಕೆ ಮತ್ತು ವರ್ಕಾಡಿ ಪ್ರದೇಶಕ್ಕೆ ಮಂಗಳೂರಿನ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್, ದ.ಕ ಕಾರ್ಡಿನೇಷನ್ ಸಹಯೋಗದೊಂದಿಗೆ ಅರ್ಹ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಿಸಲಾಯಿತು.
ಬದ್ರಿಯಾ ಜುಮಾ ಮಸ್ಜಿದ್, ಬದ್ರಿಯಾ ನಗರ, ತೋಕೆ ಇದರ ಖತೀಬರು ದುಆ ನೆರವೇರಿಸಿ ಕಿಟ್ ನೀಡುವ ಮೂಲಕ ಚಾಲನೆ ನೀಡಿದರು. ಜಮಾತಿನ ಅರ್ಹ 40 ಕುಟುಂಬ ಮತ್ತು ಮುಹಿಯುದ್ದೀನ್ ಜುಮಾ ಮಸ್ಜಿದ್ ವರ್ಕಾಡಿ ಮಂಜೇಶ್ವರ ಜಮಾತಿನ ಅರ್ಹ 25 ಕುಟುಂಬಕ್ಕೆ ರಂಜಾನ್ ಕಿಟ್ ನೀಡಲಾಯಿತು.
ಈ ಗಡಿ ಪ್ರದೇಶದಲ್ಲಿ ಅನೇಕ ಕಡು ಬಡ ಕುಟುಂಬಗಳು ಇವೆ ಎಂಬ ಮಾಹಿತಿ ಲಭಿಸಿರುವುದರಿಂದ ನಮ್ಮ ಸಂಸ್ಥೆಯು ರಂಜಾನ್ ಕಿಟ್ ನೀಡಲು ನಿರ್ಧರಿಸಿತು. ಈ ಸಂದರ್ಭದಲ್ಲಿ ಬಿ-ಹ್ಯೂಮನ್ ಸ್ಥಾಪಕ ಅಧ್ಯಕ್ಷರಾದ ಆಸಿಫ್ ಡೀಲ್ಸ್, ಅಲ್ತಾಫ್, ಶಮೀಮ್, ಸಲೀಂ ಯು.ಬಿ., ಅಶ್ರಫ್ ಐನ, ಮುನ್ನ ಕಮ್ಮರಡಿ, ರಾಶ್ ಬ್ಯಾರಿ, ಕರೀಂ ಎನ್.ಎಸ್., ಇಕ್ಬಾಲ್ ತಿಲಪದವು ಉಪಸ್ಥಿತಿರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.