(www.vknews.com) : ನಿಜವಾಗಿ ಮೇ 4 ಮನುಷ್ಯತ್ವಕ್ಕೆ ಬರ ಬಂದ ದಿನವೆಂದು ಆಚರಿಸಲೇ ಬೇಕು ಜನ ಇರುವೆಯಂತೆ ಸಾಲು ಇಟ್ಟಿರುವ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿ ನಾಚಿಕೆ ಆಗಿದೆ.. ಎಲ್ಲಾ , ಮಂದಿರ , ಮಸೀದಿ , ಚರ್ಚ್ , ಶಾಲೆ , ಕಾಲೇಜ್ ಗಳನ್ನು ಮುಚ್ಚಿದ್ದರು ವೈನ್ ಶಾಪ್ ಗಳನ್ನು ಮಾತ್ರ ತೆರೆದಿರುವುದು ನಿಜಕ್ಕೂ ತಲೆ ತಗ್ಗಿಸಬೇಕಾದ ಸಂಗತಿ . ಹಣದ ಬರವಿದೆ ಒಪ್ಪೋಣ ಆದರೆ ಸರಕಾರಕ್ಕೆ ಆದಾಯ ಬರುವುದನ್ನು ಮಾತ್ರ ತೆರೆದು ಜನರನ್ನು ಅಡ್ಡ ದಾರಿಗೆ ಎಳೆದು ಅವರ ಆರೋಗ್ಯದ ಜೊತೆಗೆ ಆಟವಾಡಿದೆ..
ಜನ ಬಯಸಿದ್ದು ಕೊಡುವವನು ನಾಯಕನಲ್ಲ , ಜನರಿಗೇನೂ ಮುಖ್ಯವೋ ಅದನ್ನು ಮಾತ್ರ ಕೊಡುವವನು ನಿಜವಾದ ನಾಯಕ …! ಕೇವಲ ಸರಕಾರ ಬೊಕ್ಕಸಕ್ಕೆ ಹಣ ಸೇರುವುದನ್ನು ಯೋಚನೆ ಮಾಡಿದೆ ಜನಗಳ ಪ್ರಾಣಗಳು ಮುಖ್ಯವಾಗಲೇ ಇಲ್ಲ.. ಇದರಲ್ಲಿ ಹೆಣ್ಣು ಮಕ್ಕಳು ಏನು ಕಮ್ಮಿ ಇಲ್ಲವೆಂದು ಸಾಭೀತು ಪಡಿಸಿರುವುದು ನೋಡಿದರೆ ನಮ್ಮ ಸಂಸ್ಕೃತಿ ಎತ್ತಲಿಂದ ಎತ್ತ ಸಾಗಿದೆ ಅನ್ನಿಸದೇ ಇರುವುದಿಲ್ಲ.. ಸರಕಾರ ನಿಜಕ್ಕೂ ತಪ್ಪು ಮಾಡುತ್ತಾ ಇದೆ ಎಲ್ಲಿ ತಪ್ಪು ಮಾಡುತ್ತಾ ಇದ್ದೇವೆಂದು ಮೇ 4 ರ ದೃಶ್ಯ ಮಾಧ್ಯಮಗಳ ಅವಹೇಳನಕಾರಿ ದೃಶ್ಯಗಳನ್ನು ನೋಡಿ ಜನನಾಯಕರೇ..!
ಕೊಲೆ , ದರೋಡೆ , ಭ್ರಷ್ಟಾಚಾರ , ಮಾನಭಂಗ ಮಾಡಿ ಸಮಾಜಕ್ಕೆ ಕಂಟಕವಾದವರ ಮುಖವನ್ನು ಮಸಕು – ಮಸಕು ಮಾಡಿ ತೋರಿಸುತ್ತಾರೆ.. ಆದರೆ ಸರಕಾರವೇ ಅಧಿಕೃತವಾಗಿ ಪರವಾನಿಗೆ ಕೊಟ್ಟು ಕುಡಿಯಿರಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಎಂದು ಹಸಿರು ನಿಶಾನೆ ತೋರಿಸಿರುವಾಗ ಮಧ್ಯ ಪ್ರಿಯರು ಬಿಡುತ್ತಾರೆಯೇ..?
ಸಾಕಷ್ಟು ದೃಶ್ಯ ಮಾಧ್ಯಮಗಳಲ್ಲಿ ಸಾರಾಯಿ ಕುಡಿದವರನ್ನು ಕುಣಿಸಿ ಬೆಕ್ಕಾಬಿಟ್ಟಿ ಹಾಡಿಸಿ ಅದನ್ನ ಬೇಕಂತಲೇ ಲೈವ್ ವಿಡಿಯೋ ಮಾಡಿ ವಿಕೃತ ತೋರಿದ್ದಾರೆ ಅನ್ನಿಸುವುದಿಲ್ಲವೇ..? ಅವರ ಕುಟುಂಬದವರಿಗೆ ಸಮಾಜದಲ್ಲಿ ಅವಮಾನವಾಗುವುದಿಲ್ಲವೇ ಎಷ್ಟು ಮುಜುಗರವಾಗುತ್ತದೆ ಅನ್ನೋ ಸಾಮಾಜಿಕ ಪ್ರಜ್ಞೆಯು ಇಲ್ಲವೇ..? ಮಧ್ಯಮ ಮಿತ್ರರೇ ಒಂದು ಸತ್ಯವನ್ನು ಹೇಳಿ ..? ನೀವು ಕುಡಿಯುವುದಿಲ್ಲವೇ.? ಜನಸಾಮಾನ್ಯರ ಬಗ್ಗೆ ಸರಕಾರ ಹಾಗೂ ದೃಶ್ಯ ಮಾಧ್ಯಮ ಮಿತ್ರರಿಗೆ ಕಾಳಜಿ , ಕನಿಕರವಿರಲಿ..!
ಅಬಕಾರಿ ಅದಾಯವೇ ಬಹಳ ದೊಡ್ಡದು ಎಂದು ನಂಬಿರುವ ಸರಕಾರದ ಮಾತನ್ನು ನೀವು ನಂಬಿದ್ದರೆ ನಿಮಗಿಂತ ಮೂರ್ಖರು ಇಲ್ಲ ಮೇಲ್ನೋಟಕ್ಕೆ ಸರಕಾರಿ ಬೊಕ್ಜಸ ಒಂದಿಷ್ಟು ತುಂಬಬಹುದು ಆದರೆ ಪರೋಕ್ಷವಾಗಿ ಜನರ ಆರೋಗ್ಯದ ಮೇಲೆ ಆಗೋ ಪರಿಣಾಮ ಮತ್ತು ಅದರ ನಿರ್ವಹಣೆಗೆ ಸರಕಾರ ಖರ್ಚು ಮಾಡುತ್ತಿರುವ ಹಣದ ಪ್ರಮಾಣ ಅದಾಯಕ್ಕಿಂತಲೂ ನಾಲ್ಕು ಪಟ್ಟು ಈ ವಿಷಯ ನಮ್ಮನ್ನು ಅಳುವವರಿಗೆ ಅರ್ಥವಾಗಿಲ್ಲ ಅನ್ನಿಸದೇ ಇರುವುದಿಲ್ಲ.. ಇಲ್ಲಿ ಬಡವರಿಗೆ ಆಹಾರ ಪದಾರ್ಥ, , ಉಚಿತ ಊಟವನ್ನು ಸರಕಾರ ಹಾಗೂ ಸಂಘ , ಸಂಸ್ಥೆಗಳು ಈಗ ನಿರಂತರವಾಗಿ ವ್ಯವಸ್ಥೆ ಮಾಡುತ್ತಿವೆ ಅಭಿನಂದನೆಗಳು.. ಕುಡಿಯುವುದಕ್ಕೆ ಕಾಸು ಇದ್ದವರಿಗೆ ತಿನ್ನುವ ಪದಾರ್ಥಗಳನ್ನು ಕೊಳ್ಳಲು ಕಾಸಿಲ್ಲವೇ.? ಅಂಥವರನ್ನು ಗುರುತಿಸಿ ಕೈ ಮೇಲೆ ಹಚ್ಛೆ ಹಾಕಿ ಅನುಕೂಲಸ್ಥನೆಂದು ಇದರಿಂದಾಗಿ ಸರಕಾರದ ಖರ್ಚು ಕಡಿಮೆಯಾಗುತ್ತದೆ.. ಕುಡಿಯುವುದಕ್ಕೆ ದುಡಿದ ಹಣ, ಊಟಕ್ಕೆ ಸರಕಾರ ಇದೆ ಅನ್ನೋ ಉಡಾಫೆಯಲ್ಲವೇ.? 40 ದಿನಗಳಿಂದ ಮಧ್ಯವನ್ನು ಬಿಟ್ಟು ಬದುಕಿದವರು ಮುಂದೆಯು ಬದುಕುತ್ತಾರೆ ಇದನ್ನೇ ಸರಿಯಾದ ಅವಕಾಶವೆಂದು ಸರ್ಕಾರ ಸಂಪೂರ್ಣ ಮಧ್ಯ ಮಾರಾಟವನ್ನು ನಿಷೇಧ ಮಾಡಬಹುದಿತ್ತು ..
ಕೆ.ಜಿ.ಸರೋಜಾ ನಾಗರಾಜ್
ದೃಶ್ಯ ಮಾಧ್ಯಮ ಮಿತ್ರರು ಕೂಡ ಪ್ರತಿಭಟನೆ ಮಾಡಬಹುದಿತ್ತು ಇಂಥ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಮರೆತು ರಾಜ್ಯದ ಜನರೆದುರು ಬೆತ್ತಲಾಗಿ ನಿಂತಿದ್ದಾರೆ..
ಮಧ್ಯ ಮಾರಾಟ ನಿಷೇಧದ ಬಗ್ಗೆ ರಾಜಕೀಯ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಗಂಭೀರ ಚರ್ಚೆಯಾಗಲಿ. .. ಯೋಗ ಒಂದೇ ಸಾರಿ ಬರುವುದು ಯೋಗ್ಯತೆ ಮಾತ್ರ ಕೊನೆಯವರೆಗೂ ಉಳಿಯುವುದು..
ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.