ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್) : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮತ್ತು ಸಚಿವರಾಗಿರುವ ವಿ.ಮುನಿಯಪ್ಪ ಅವರು ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಕ್ಷೇತ್ರದ ಅಭಿವೃಧ್ಧಿಗಾಗಿ ಏನು ಸಾಧನೆ ಮಾಡಿಲ್ಲವೆಂದು ಎಸ್.ಎನ್.ಕ್ರಿಯಾ ಟ್ರಸ್ಟ್ನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಆರೋಪಿಸಿದ್ದಾರೆ.
ನಗರದ ಸಂತೋಷನಗರದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ನಿಂದ ಆಟೋಚಾಲಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕ ಮತ್ತು ಸಚಿವರಾಗಿ ಏನು ಸಾಧನೆ ಮಾಡಿದ್ದಾರೆ ಎಂಬುದು ಆತ್ಮವಲೋಕನ ಮಾಡಿಕೊಳ್ಳಿ ವಿನಾಕಾರಣ ಸಮಾಜಸೇವೆ ಮಾಡುವರನ್ನು ಕ್ಷುಲ್ಲಕವಾಗಿ ಟೀಕಿಸುವ ಧೋರಣೆಯನ್ನು ಬದಲಿಸಿಕೊಳ್ಳಬೇಕೆಂದರು.
ಕ್ಷೇತ್ರದಲ್ಲಿ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲ ಅದನ್ನು ಪರಿಹರಿಸಲಿ ಆದರೇ ಕೈಲಾದಷ್ಟು ಸಮಾಜಸೇವೆ ಮಾಡುವ ಸೇವಕರನ್ನು ಟೀಕಿಸುವುದು ಅವರ ಗೌರವ ಘನತೆಗೆ ತಕ್ಕದಲ್ಲ ಬದಲಿಗೆ ಅವರುಬಡ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಲಿ ಎಂದರಲ್ಲದೆ ಕ್ಷೇತ್ರದ ಎಲ್ಲಾ ಹಳ್ಳಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹೋರಾಟ ನಡೆಸಲಾಗುವುದೆಂದರು.
ಇದೇ ಸಂದರ್ಭದಲ್ಲಿ ಶಿಡ್ಲಘಟ್ಟ ನಗರ,ಜಂಗಮಕೋಟೆ,ದಿಬ್ಬೂರಹಳ್ಳಿ,ಸಾದಲಿ ಸೇರಿದಂತೆ ಒಟ್ಟು 500 ಮಂದಿ ಆಟೋಚಾಲಕರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ನ ಕಾರ್ಯದರ್ಶಿ ವಿಶ್ವನಾಥ್,ಅಫ್ಸರ್ಪಾಷ,ನಗರಸಭಾ ಸದಸ್ಯ ಶಬ್ಬೀರ್ ಅಹಮದ್,ಬಾಬುಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.