ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಕುರಿತು ಇಂದು ಯಾರಿಗೂ ಪರಿಚಯಪಡಿಸಬೇಕಾದ ಅಗತ್ಯವಿಲ್ಲ. ಕೋವಿಡ್-19 ಕಾರಣದಿಂದ ಸಂಕಷ್ಟಕ್ಕೊಳಗಾದ ಹಲವಾರು ಕನ್ನಡಿಗರಿಗೆ ಕೆಸಿಎಫ್ ಸನ್ನಧ್ಧ ಸಂಘದ ಮೂಲಕ ಸಾಂತ್ವನ ಚಟುವಟಿಕೆಯಲ್ಲಿ ತೊಡಗಿಕೊಂಡು ಬರೊಬ್ಬರಿ ಹತ್ತು ಸಾವಿರಕ್ಕೂ ಮಿಕ್ಕ ಆಹಾರ ಕಿಟ್ ಗಳನ್ನು ವಿತರಿಸಿತು. ಸೌದಿ ಅರೇಬಿಯಾ, ಓಮಾನ್, ಯುಎಇ, ಕತ್ತರ್, ಕುವೈಟ್, ಬಹ್ರೈನ್, ಮಲೇಷ್ಯಾ, ಲಂಡನ್ ರಾಷ್ಟ್ರಗಳಲ್ಲಿ ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ, ವೇತನವಿಲ್ಲದೆ ಅಸಾಹಾಯಕರಾಗಿ ದಿನದೂಡುತ್ತಿದ್ದ ಅನಿವಾಸಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸಿಕೊಟ್ಟು ಅನಿವಾಸಿ ಕನ್ನಡಿಗರ ಭರವಸೆಯ ಬೆಳಕಾಗಿ ಗುರುತಿಸಿಕೊಂಡಿತು. ಅಂಬ್ಯುಲೆನ್ಸ್ ಸೇವೆ, ಮೆಡಿಸಿನ್, ಕ್ವಾರಿಂಟಿನ್ ವ್ಯವಸ್ಥೆ ಮೊದಲಾದ ಮಾನವೀಯ ಸೇವೆಗಳೊಂದಿಗೆ ಸರಿಸಾಟಿಯಿಲ್ಲದ ಸಂಘಟನೆಯಾಗಿ ಗುರುತಿಸಿಕೊಂಡು ವಿದೇಶಿ ನೆಲದಲ್ಲಿ ಕನ್ನಡ ಮಣ್ಣಿನ ಸ್ನೇಹ ಭಾತೃತ್ವವನ್ನು ಸಾರಿತು. ಕೆಸಿಎಫ್ ಸೌದಿ ಅರೇಬಿಯಾ ವಿಶೇಷ ಕಾಳಜಿಯನ್ನು ವಹಿಸಿ ಟ್ಯಾಂಕರ್ ಮೂಲಕ ಕುಡಿಯುವ ಶುದ್ಧ ನೀರನ್ನು ಸಹ ಒದಗಿಸಿಕೊಟ್ಚಿತು. ಲಾಕ್ ಡೌನ್ ಸಮಯದಲ್ಲಿ ಆಕಸ್ಮಿಕ ಮರಣ ಹೊಂದಿದ ಅನಿವಾಸಿಗಳ ಮೃತ ಶರೀರವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ದಫನ ಕಾರ್ಯವನ್ನು ಕೆಸಿಎಫ್ ಮುಂದೆ ನಿಂತು ನೆರವೇರಿಸಿಕೊಟ್ಟಿತು. ಕೋವಿಡ್-19 ವಿರುಧ್ಧ ಹೋರಾಡುತ್ತಿರುವ ಯುಎಇ ಪೋಲಿಸರ ಸಹಭಾಗಿತ್ವದಲ್ಲಿ ಕೆಸಿಎಫ್ ಸದಸ್ಯರು ಅವರೊಂದಿಗೆ ಕೈಜೋಡಿಸಿದರು.
ಇಷ್ಟೆಲ್ಲ ಮಾನವೀಯ ಸೇವೆಗಳನ್ನು ಗುರಿಯಾಗಿರಿಸಿಕೊಂಡು ರಾತ್ರಿ ಹಗಲೆನ್ನದೆ ಓಡಾಡುತ್ತಿರುವ ಕಾರ್ಯಕರ್ತರು ಇನ್ನೊಬ್ಬರ ಸಂತೋಷದಲ್ಲಿ ಪಾಲುದಾರರಾಗುವುದಲ್ಲದೆ, ಸ್ವತ ಕಷ್ಟಗಳನ್ನು ಯಾರಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸ್ವತ ಮನಗಂಡು ಅವರ ಕಷ್ಟಗಳಿಗೆ ಹೆಗಲು ಕೊಟ್ಟು ನಿಂತಿತು. ಕಾರ್ಯಕರ್ತರ ಕುಟುಂಬಗಳು ಸಂಕಷ್ಟಕ್ಕೊಳಗಾದರೆ ಅವರಿಗೆ ಆಸರೆಯಾಗಿ ನಿಲ್ಲಬೇಕಾದವರು ನಾವು ಎಂದು ಹೇಳಿ ದಿಟ್ಟ ತೀರ್ಮಾನವನ್ನು ಕೈಗೊಂಡಿತು.
ಅದರಂತೆ, ತಾರೀಕು 24/04/2020 ರಂದು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ। ಶೈಖ್ ಬಾವ ಹಾಜಿರವರ ನಿರ್ದೇಶನದಂತೆ KCF RAPID INTERVENTION TEAM IN INDIA (KCF RIT IN INDIA) ಎಂಬ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ರಚನೆ ಮಾಡಲು ಹೇಳಿದರು. ಗ್ರೂಪ್ ರಚನೆಯಾದ ಬಳಿಕ ಡಾ। ಶೈಖ್ ಬಾವ ಹಾಜಿರವರ ನಿರ್ದೇಶನ ಪ್ಲಾನಿಂಗ್ ನಿಜಕ್ಕೂ ಅಚ್ಚರಿಮೂಡಿಸಿತು. ಪ್ರತಿಯೊಂದು ತಾಲೂಕಿನಿಂದಲೂ ಊರಲ್ಲಿರುವ ನಾಯಕರನ್ನು, ಕಾರ್ಯಕರ್ತರನ್ನು ಹುಡುಕಿ ಗ್ರೂಪಿಗೆ ಸೇರಿಸುವಂತೆ ತಿಳಿಸಿದಾಗ ನನಗೆ ಗೊತ್ತಿರುವ ಪ್ರತೀ ರಾಷ್ಟ್ರದಿಂದಲೂ ನಾಯಕರನ್ನು ಸೇರಿಸಲಾಯಿತು. ನಂತರ ನಡೆದುದೆಲ್ಲವೂ ಕ್ರಾಂತಿಯಾಗಿತ್ತು. ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಝೋನ್ ಸೆಕ್ಟರ್ ಮೂಲಕ ಪ್ರತೀಯೊಬ್ಬರ ಕೆಸಿಎಫ್ ಐಡಿ ಪರಿಶೀಲಿಸಿ ಕಿಟ್ ಕೊಡಲಾಗುತ್ತಿತ್ತು. ಪ್ರತಿಯೊಂದು ರಾಷ್ಟ್ರಗಳಿಂದಲೂ ಸಂಕಷ್ಟ ಎದುರಿಸುತ್ತಿರುವ ಕಾರ್ಯಕರ್ತರ ಪಟ್ಟಿಯು ನಮ್ಮ ಕೈ ಸೇರುತ್ತಲೇ ಇತ್ತು.
ತುರ್ತು ಆವಶ್ಯಕತೆಗಳಿಗಾಗಿ ಊರಿಗೆ ಬಂದು ಮರಳಿ ಹೋಗಲು ಸಾಧ್ಯವಾಗದೆ ಇರುವವರು, ಅನಾರೊಗ್ಯ ಪೀಡಿತರಾಗಿ ಚಿಕಿತ್ಸೆಗಾಗಿ ಊರಿಗೆ ಬಂದವರು, ಲಾಕ್ ಡೌನ್ ಕಾರಣ ರೂಮಲ್ಲಿ ಉಳಿದುಕೊಂಡು ಮೂರ್ನಾಲ್ಕು ತಿಂಗಳಿನಿಂದ ವೇತನವಿಲ್ಲದೆ ಮನೆಯಲ್ಲಿ ಅಕ್ಕಿ ಸಾಮಾಗ್ರಿಗಳಿಲ್ಲದೆ ದುಖ ಅನುಭವಿಸುವವರು ಮೊದಲಾದ ರೀತಿಯಲ್ಲಿ ಸಂಕಷ್ಟಕ್ಕೊಳಗಾದ ಕೆಸಿಎಫ್ ಕಾರ್ಯಕರ್ತರಿಗೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವರಿಗೆ ಅರಿವಿಲ್ಲದೆ ಅವರ ಮನೆಗೆ ಕಿಟ್ ತಲುಪಿಸಿಕೊಡಲಾಗುತ್ತಿತ್ತು. ಸಾಧಾರಣ 2000/- ರೂಪಾಯಿ ಬೆಲೆಯ , ಇಫ್ತಾರ್ ಕಿಟ್ ಒಳಗೊಂಡ ಆಹಾರ ಸಾಮಾಗ್ರಿಗಳನ್ನು 100 ಕ್ಕೂ ಮಿಕ್ಕ ಕಾರ್ಯಕರ್ತರ ಕುಟುಂಬಗಳಿಗೆ ಒದಗಿಸಿಸಿಕೊಡಲಾಯಿತು. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ವಿಟ್ಲ, ಮೂಡಬಿದ್ರೆ, ಉಪ್ಪಿನಂಗಡಿ, ಕಾಟಿಪಳ್ಳ, ಕಾವೂರು, ಉಡುಪಿ, ಕೊಡಗು ಪ್ರತಿಯೊಂದು ತಾಲೂಕಿಗೂ ಕಿಟ್ ತಲುಪಿಸಿಕೊಡುವ ಜವಾಬ್ದಾರಿಯನ್ನು ಕೂಡ ಕೆಸಿಎಫ್ ಕಾರ್ಯಕರ್ತರೇ ವಹಿಸಿಕೊಂಡು ನಿರ್ವಹಿಸಿದರು.
ಕೆಲವರ ಮನೆಗೆ ಕಿಟ್ ತಲುಪಿಸಿಕೊಟ್ಟಾಗ ಅವರ ಮುಖದಲ್ಲಿ ಮೂಡಿದ ಮಂದಹಾಸ ಭಕ್ತಿ ಪೂರ್ಣ ಪ್ರಾರ್ಥಣೆ ಕೇಳುವಾಗ ಅವರ ಕಷ್ಟಗಳು ನೋವಿನ ದಿನಗಳ ಬಗ್ಗೆ ಅರಿವಾಗುತ್ತಿತ್ತು. ಕೇವಲ ಕೆಸಿಎಫ್ ಸದಸ್ಯ ಎಂಬ ಕಾರಣದಿಂದ ನಮಗೆ ಅರಿವಿಲ್ಲದೆ ನಮ್ಮ ಕಷ್ಟಗಳನ್ನು ಅರಿತುಕೊಂಡು ಸಹಾಯ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ನಾವು ಅಸಾಹಾಯಕರಾಗಿದ್ದೇವೆ. ಎರಡು ವಾರಗಳಿಂದ ಮನೆಯಲ್ಲಿ ಆಹಾರ ಸಾಮಾಗ್ರಿಗಳಿಲ್ಲದೆ ಕಷ್ಟಪಟ್ಟು ದಿನದೂಡುತ್ತಿದ್ದೇವೆ. ಈ ಸಂಧರ್ಭದಲ್ಲಿ ಆಪತ್ಭಾಂದವರಾಗಿ ಬಂದು ಕಿಟ್ ತಲುಪಿಸಿಕೊಟ್ಟದ್ದು ಮರೆಯಲು ಸಾಧ್ಯವಿಲ್ಲ ಎಂದು ಅವರು ಕಾರ್ಯಾಚರಿಸಿದ ಸೆಕ್ಟರ್ ಝೋನ್ ಗಳಿಗೆ ಸಂತೋಷ ಹಂಚಿಕೊಳ್ಳುತ್ತಿದ್ದರು. ಮನೆಯಲ್ಲಿ ಸಕ್ಕರೆ ಇರಲಿಲ್ಲ. ಖರೀದಿಸಲು ಹಣವೂ ಇಲ್ಲ ಹೀಗಾಗಿ ತಲೆಗೆ ಕೈಹೊತ್ತು ಕುಳಿತಿರುವಾಗಲೇ ಕೆಸಿಎಫ್ ರಂಝಾನ್ ಕಿಟ್ ತಲುಪಿತು ಎಂದು ಸಂತೋಷ ಹಂಚಿಕೊಳ್ಳುತ್ತಾರೆ. ನಿಜಕ್ಕೂ ಕೆಸಿಎಫ್ ಅನಿವಾಸಿ ಕನ್ನಡಿಗರ ಭರವಸೆಯ ಬೆಳಕು ಎಂದು ಫಲಾನುಭವಿಗಳು ಒಪ್ಪಿಕೊಳ್ಳುತ್ತಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಕೈಹಿಡಿದು ಕಣ್ಣೀರು ಒರೆಸಿ ಸಹಾಯ ಮಾಡುವ ಸಂಘಟನೆಯಲ್ಲಿ ಸದಸ್ಯರಾಗಿರುವುದು ನಮ್ಮ ಭಾಗ್ಯ ಎಂದು ಎಂದು ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸುತ್ತಿದ್ದರು. ಎಲ್ಲವನ್ನೂ ಅಲ್ಲಾಹು ಸ್ವೀಕರಿಸಲಿ ಆಮೀನ್.
✍🏻Nizzu4ever👁️ ಉರುವಾಲು ಪದವು [email protected]
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.