(www.vknews.com) : ದಿನಾಂಕ: 22-05-2020ನೇ ಶುಕ್ರವಾರದಂದು ಮೂಲ್ಕಿ ಗೃಹರಕ್ಷಕ ದಳದ 35 ಗೃಹರಕ್ಷಕರಿಗೆ ದಿನಸಿ ಸಾಮಗ್ರಿ ಇರುವ ಕಿಟ್ನ್ನು ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮೂಲ್ಕಿ ನಗರ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಶ್ರೀ ಚಂದ್ರಪೂಜಾರಿ ಭಾಗವಹಿಸಿದ್ದರು.
ನಿಷ್ಕಾಮ ಸೇವೆ ಸಲ್ಲಿಸುವ ಕನಿಷ್ಟ ಗೌರವ ಧನಕ್ಕೆ ಕೆಲಸ ಮಾಡುವ ಗೃಹರಕ್ಷಕರೇ ನಿಜವಾದ ದೇಶ ರಕ್ಷಕರು. ಅವರ ಸೇವೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಅವರು ಮಾತನಾಡಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ಮುಂದೆ ನಿಂತು ಸೇನಾನಿಗಳಂತೆ ಕೆಲಸ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗೃಹರಕ್ಷಕರು ನಿಜವಾದ ಅರ್ಥದಲ್ಲಿ ಯೋಧರು. ಅವರ ಸೇವೆಯನ್ನು ಇಲಾಖೆ ಸ್ಮರಿಸುತ್ತದೆ ಮತ್ತು ಗೌರವಿಸುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಘಟಕಾಧಿಕಾರಿ ಲೋಕೇಶ್ ಹಿರಿಯ ಗೃಹರಕ್ಷಕರಾದ ವಲೇರಿಯನ್ ಡಿ’ಸೋಜಾ, ಮಲ್ಲಿಕಾ, ದಿವಾಕರ್, ಮುಂತಾದವರು ಉಪಸ್ಥಿತರಿದ್ದರು. ಸುಮಾರು 35 ಮಂದಿಗೆ ದಿನಸಿ ಕಿಟ್ನ್ನು ಹಂಚಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.