ಬೆಳ್ಳಾರೆ (www.vknews.com) : ವಿಶ್ವಾದ್ಯಾಂತ ಪಸರಿಸಿದ ಮಹಮಾರಿ ಕೊರೊನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲೇ ದೇವಿ ಹೈಟ್ಸ್ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.
ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಕಾರ್ಯವರಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು ವ್ಯವಹಾರಿಕ ಕಟ್ಟಡದಲ್ಲಿ ಸುಪ್ರವೈಸರ್ ಆಗಿ ಷುಡಿಯುತ್ತಿರುವ ಪ್ರಶಾಂತ್ ಶೆಟ್ಟಿ ಎಂಬ ಯುವಕ ಭಯಾನಕ ಕೊರೋನಾ ಜಾಗೃತಿಗಾಗಿ ಸರಳವಾಗಿ ಅತೀ ಕಡಿಮೆ ವೆಚ್ಚದಲ್ಲಿ ಪ್ರತೀ ಅಂಗಡಿಯ ಮುಂಭಾಗದಲ್ಲಿ ಪಿವಿಸಿ ಪೈಪ್ ನಿಂದ ನಿರ್ಮಿತವಾದ ಸನಿಟೈಸರ್ ಸ್ಟೇಂಡ್ ನ್ನು ನಿರ್ಮಿಸಿದ್ದಾರೆ.
ಈಗಾಗಲೇ ಕಳೆದ ಕೆಲವು ತಿಂಗಳಿನಿಂದ ಅಂಗಡಿಗಳು ನಷ್ಷದಲ್ಲಿದ್ದು, ಮತ್ತೆ ಅವರು ಹೊರಗಿನಿಂದ ಇಂಥಹ ವ್ಯವಸ್ತಿತ ಸ್ಠೇಂಡ್ ಖರೀದಿಸಲು ಸುಮಾರು 2 ರಿಂದ 3 ಸಾವಿರ ತಗಲಬಹುದು.
ಇತ್ತೀಚಿನ ಸಂದಿಗ್ದ ಪರಿಸ್ಥಿತಿಯನ್ನು ತನ್ನ ಮನದಲ್ಲಿಟ್ಟು ಅಂಗಡಿಯವರಿಗೆ ಇನ್ನಷ್ಟು ಭಾರವನ್ನು ತನ್ನ ಹೆಗಲ ಮೇಲೆ ಇಡಬಾರದು ಎಂಬ ಮಾನವೀಯ ದೃಷ್ಟಿಯಿಂದ ಕೇವಲ 300 ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದೇನೆ ಎನ್ನುತ್ತಾರೆ ಸ್ಟೇಂಡ್ ನಿರ್ಮಿಸಿದ ಪ್ರಶಾಂತ್ ಶೆಟ್ಟಿ..
ಲಾಕ್ ಡೌನ್ ಸಂಧರ್ಭದಲ್ಲಿ ದೇವಿ ಹೈಟ್ಸ್ ಮಾಲಕರಾದ ರಾಕೇಶ್ ಶೆಟ್ಟಿ ಲಕ್ಷಾಂತರ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದ ಬೆನ್ನಲೇ ದೇವಿ ಹೈಟ್ಸ್ ಸುಪ್ರವೈಸರ್ ಪ್ರಶಾಂತ್ ಶೆಟ್ಟಿಯವರ ಈ ಮಾನವೀಯತೆಯ ಮುಖ ಅನಾವರಣ ಗೊಂಡಿತು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.