ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಆಫ್ ಒಮಾನ್ ಕೊರೋನವೈರಸನ್ನು ಎದುರಿಸಲು ಸುಪ್ರೀಂ ಕಮಿಟಿಯ ಜಾರಿಗೆ ತಂದ ಆದೇಶಗಳನ್ನು ಧಿಕ್ಕರಿಸಿದ ಕಾರಣಕ್ಕಾಗಿ ರಾಯಲ್ ಓಮನ್ ಪೊಲೀಸ್ (ROP) ಒಮಾನ್ನಾದ್ಯಂತ ಹಲವರನ್ನು ಬಂದಿಸಿದ್ದಾರೆ ಎಂದು ದೇಶೀಯ ಮಾದ್ಯಮಗಳು ವರದಿ ಮಾಡಿದೆ.
ಅಲ್-ದಖಿಲಿಯಾ ಗವರ್ನರೇಟ್ನಲ್ಲಿ, ಸುಪ್ರೀಂ ಕಮಿಟಿ ನಿರ್ಧಾರಗಳನ್ನು ಉಲ್ಲಂಘಿಸಿದ ವಾಣಿಜ್ಯ ಸಂಕೀರ್ಣವೊಂದರಲ್ಲಿ ಊಟೋಪಹಾರ ತಯಾರಿಸಿ ಜನರು ಜಮಾಯಿಸಿದ ಆರೋಪದ ಮೇಲೆ ಪೊಲೀಸರು 49 ವಲಸಿಗರನ್ನು ಬಂಧಿಸಿದ್ದಾರೆ. ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಸ್ಕತ್ನಲ್ಲಿ ಘಾಲಾ ಕೈಗಾರಿಕಾ ವಲಯದಲ್ಲಿ ಈದ್ ಪ್ರಾರ್ಥನೆ ನಡೆಸಿದ 40 ವಲಸಿಗರು, ಮಸ್ಕತ್ ಅಲ್-ಅನ್ಸಾಬ್ ಪ್ರದೇಶದಲ್ಲಿ ಕ್ರಿಕೆಟ್ ಆಡಿದ ಆರೋಪದ ಮೇಲೆ 34 ವಲಸಿಗರನ್ನು ಬಂಧಿಸಿದ್ದಾರೆ. ಹಾಗೂ ಅಲ್-ಖೌದ್ ಪ್ರದೇಶದ ಕಟ್ಟಡದ ಮೇಲೆ ಒಟ್ಟುಗೂಡಿದ 13 ವಲಸಿಗರನ್ನು ಮತ್ತು ಕೂಟಗಳಲ್ಲಿ ಭಾಗವಹಿಸಿದ್ದಕ್ಕಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸದ ಕಾರಣಕ್ಕಾಗಿ ಮತ್ತು ನಿಷೇಧಿತ ಚಟುವಟಿಕೆಗಳ ಪಟ್ಟಿಗೆ ಸೇರುವ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಜನರನ್ನು ಧೋಫರ್ ಗವರ್ನರೇಟ್ ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸದೇ ಗುಂಪು ಸೇರಿದವರಿಗೆ ದಕ್ಷಿಣ ಭಾತಿನ ಪೊಲೂಸರು ದಂಡ ವಿಧಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.