ಬೆಂಗಳೂರು,(ವಿಶ್ವಕನ್ನಡಿಗ ನ್ಯೂಸ್): ಜಯನಗರ ಪೂರ್ವ ವಾರ್ಡ್’ನ 9ನೇ ಮುಖ್ಯ ರಸ್ತೆ ಮತ್ತು 1ನೇ ಬ್ಲಾಕ್ ಭೈರಸಂದ್ರ ಎಕ್ಸಟೆನ್ಶನ್’ನ 3ನೇ ಅಡ್ಡ ರಸ್ತೆ ಸೇರಿದಂತೆ ಕ್ಷೇತ್ರದ ಇನ್ನಿತರೇ ಪ್ರದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ಧರೆಗುರುಳಿದ ಮರಗಳು ಮತ್ತು ವಿದ್ಯುತ್ ತಂತಿಗಳ ಮೇಲೆ ಬಿದ್ದಿದಂತಹ ಕೊಂಬೆಗಳನ್ನು ತೆರವುಗೊಳಿಸಲಾಯಿತು.
ಶಾಸಕಿ ಸೌಮ್ಯರೆಡ್ಡಿ ,ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಚೆನ್ನಕೇಶವಮೂರ್ತಿ ಹಾಗೂ ಸಹಾಯಕ ಇಂಜಿನಿಯರ್ ಚಿರಂಜೀವಿ ಅವರು ಜಯನಗರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಕಾರಣ ಪ್ರದೇಶದ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಮತ್ತು ಇತರ ಅನೇಕರಿಗೆ ಆಗಿರುವ ತೊಂದರೆ ಮತ್ತು ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹಲವಾರು ಸ್ಥಳಗಳಲ್ಲಿ 62 ಮರಗಳು, ವಿದ್ಯುತ್ ಕಂಬಗಳು ಮತ್ತು ತಂತಿಗಳು ಬಿದ್ದು ಹಾನಿಯುಂಟಾಗಿದ್ದು, ಬೆಂಗಳೂರಿನಲ್ಲಿ ಮರದ ಸಮೀಕ್ಷೆ ಮಾಡುವ ಕುರಿತು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಹಿಂದೆ ಮಾತನಾಡಿ ಒಣ ಕೊಂಬೆಗಳು / ಒಣ ಮರಗಳನ್ನು ನಿಯತಕಾಲಿಕವಾಗಿ ಪರಿಶೀಲನೆ ನಡೆಸಿ ತೆರವುಗೊಳಿಸುವುದರ ಬಗ್ಗೆ ಆಗ್ರಹಿಸಲಾಯಿತು ಬಿಬಿಎಂಪಿ ಮೇಯರ್ ಮತ್ತು ಆಯುಕ್ತರು ಗಮನಹರಿಸಬೇಕು ಎಂದರು. .
ಬಿಬಿಎಂಪಿ, ಅರಣ್ಯ ಇಲಾಖೆ ಸಿಬ್ಬಂದಿ, (ವಾಸು , ಕುಮಾರ್ , ಭಾಂದವ ತಂಡ ) ಸ್ಥಳೀಯ ನಿವಾಸಿಗಳು ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.