(www.vknews.com) : ಕೋವಿದ್ 19 ಕೊರೋನ ಸೋಂಕು ಭಯಾನಕವಾಗಿ ಹರಡುವ ಈ ಸಂಧರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸುವುದು ಸೂಕ್ತವಲ್ಲ ಎಂದು ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ,ಎಸ್.ಜಿ. ಸಿದ್ದರಾಮಯ್ಯ ರಿಂದ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಕೊರೋನ ಸೋಂಕು ಈಗ ಹಬ್ಬುತ್ತಿರುವ ವೇಗವನ್ನು ಗಮನಿಸುತ್ತಿದ್ದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅದನ್ನು ನೋಡಿ ಜೀವ ಝಲ್ಲೆನ್ನುತ್ತದೆ.
ಈ ಸಂಧರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿ ಯು ಸಿ ಪರೀಕ್ಷೆಗಳನ್ನು ನಡೆಸುವುದು ಯಾವುದೇ ಕಾರಣಕ್ಕೂ ಸೂಕ್ತವಲ್ಲ. ತಾನು ಈ ಹಿಂದೆ ನಿಮ್ಮೊಂದಿಗೆ ಮಾತನಾಡಿದಾಗ ಇರುವ ಪರಿಸ್ಥಿತಿ ಇಷ್ಟು ಕೆಟ್ಟಿರಲಿಲ್ಲ . ವಲಸೆ ಕಾರ್ಮಿಕರು ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರಲಿಲ್ಲ,ಹಾಗೂ ನಮ್ಮ ದೇಶದಲ್ಲಿರುವ ವಲಸೆ ಕಾರ್ಮಿಕರ ಪ್ರಯಾಣ ಕೂಡ ರಾಜ್ಯವ್ಯಾಪಿ ನಡೆದಿರಲಿಲ್ಲ.ಅದೇ ರೀತಿ ವಿದೇಶದಿಂದ ಕೂಡ ಯಾರು ಬಂದಿರದೆ,ಲೋಕ್ ಡೌನ್ ಕಾರಣದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿತ್ತು. ಆದರಿಂದ ಪರೀಕ್ಷೆಗಳನ್ನು ಸೂಕ್ತವಾದ ಪೂರ್ವ ತಯಾರಿಯೊಂದಿಗೆ ಮಾಡಬಹುದೆಂದು ನನ್ನ ಅಭಿಪ್ರಾಯವನ್ನು ತಿಳಿಸಿದ್ದೆ. ಆದರೆ ಈಗಿನ ಭಯಾನಕ ಪರಿಸ್ಥಿತಿಯನ್ನು ನೋಡುವಾಗ ಪರೀಕ್ಷೆ ನಡೆಸುವುದು ಯಾವುದೇ ಕಾರಣಕ್ಕೂ ಸೂಕ್ತವಲ್ಲ. ಮಕ್ಕಳ ಜೀವನದ ದೃಷ್ಟಿ ಇಟ್ಟುಕೊಂಡು ಜೀವದ ಜೊತೆ ಈ ಭಯಾನಕ ಆಪತ್ತಿಗೆ ಆಹ್ವಾನ ನೀಡುವುದು ಅಮಾನವೀಯ ನಡೆಯಾಗುತ್ತದೆ.
ಆದರಿಂದ ಈ ವರ್ಷದ ಪರೀಕ್ಷೆಯನ್ನು ರದ್ದು ಗೊಳಿಸಬೇಕಾಗಿ ಕಳಕಳಿಯಿಂದ ವಿನಂತಿಸುತ್ತೇನೆ.
ತಮ್ಮ ವಿಶ್ವಾಸಿ ಎಸ್.ಜಿ ಸಿದ್ದರಾಮಯ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.