ತುಮಕೂರು: ದಕ್ಷಿಣ ಹಂಪಿ ನಿಡಗಲ್ಲು ದುರ್ಗದಲ್ಲಿ ದೇವಸ್ಥಾನಗಳು ಮತ್ತು ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರ ಅನುಕೂಲ ದೃಷ್ಠಿಯಿಂದ ಯಾತ್ರಿ ನಿವಾಸ ಮತ್ತು ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ದಕ್ಷಿಣ ಹಂಪಿ ತಾಲ್ಲೂಕಿನ ನಿಡಗಲ್ಲು ದುರ್ಗದಲ್ಲಿ ಭೂಸೇನಾ ನಿಗಮ ಮತತು ನಿರ್ಮಿತಿಕೆಂದ್ರದ ವತಿಯಿಂದ ನಿಮ್ರಾಣವಾಗುತತಿರುವ ಇಪ್ಪತ್ತೈದು ಲಕ್ಷ ವೆಚ್ಚದ ಯಾತ್ರಿ ನಿವಾಸ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕು ಬರಪೀಡತ ಪ್ರದೇಶವಾಗಿದ್ದರೂ ಸಹ ನಿಡಗಲ್ಲು ದುರ್ಗದಲ್ಲಿರುವ ಬೆಟ್ಟಗುಡ್ದಗಳು, ಅರಣ್ಯ ಸಂಪತ್ತು, ಪ್ರಾಣಿ ಸಂಕುಲ ಹಾಗೂ ಸರ್ವಧರ್ಮಗಳ ದೇವಸ್ಥಾನಗಳು ವಿಶೇಷವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಪ್ರವಾಸೋಧ್ಯಮ ಇಲಾಖೆ ನೆರವು ನೀಡಿದರೆ ದಕ್ಷಿಣ ಭಾರತದಲ್ಲೇ ಸುಪ್ರಸಿದ್ದ ಪ್ರವಾಸಿ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಾಲ್ಮೀಕಿ ಸಂಜಯ್ ಕುಮಾರ ಸ್ವಾಮಿಗಳ ಆಗಮದಿಂದಾಗಿ ಹಿಂದುಳಿದ ತಾಲ್ಲೂಕಿನಲ್ಲಿ ಜನರು ಹೆಚ್ಚು ಸಂಘಟಿತರಾಗುತ್ತಿದ್ದು ಹಿಂದುಳಿದ ವರ್ಗಗಳ ಮುಂದಿನ ಬೆಳವಣಿಗೆ ಹಾಗೂ ಆಶ್ರಮದ ಪ್ರಗತಿಯ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತಾಗಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುನಿಡಗಲ್ಲು ದುರ್ಗದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದ್ದು, ಹೆಚ್ಚಿನ ಅತಿಥಿ ಗೃಹದ ಕೊಠಡಿಗಳು, ಡಾಂಬರೀಕೃತ ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆ ಎಂದರು.
ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ ನಿಡಗಲ್ಲು ದುರ್ಗವನ್ನು ಪ್ರವಾಸಿತಾಣ ಮಾಡುವ ಕುರಿತು ಸಚಿವ ಸಿ.ಟಿ.ರವಿ ರವರನ್ನು ಕ್ಷೇತ್ರಕ್ಕೆ ಕರೆತಂದು ಚರ್ಚಿಸಲಾಗುವುದು, ನಿಡಗಲ್ಲು ಪ್ರವಾಸಿ ತಾಣವಾದರೆ ಈ ಭಾಗದ ಆರ್ಥಿಕ ಚಟುವಟಿಕೆಗಳು ಚರುಕುಗೊಳ್ಳುತ್ತವೆ ಎಂದರು.
ಇದೇ ವೇಳೆ ಸಂಸದ ನಾರಾಯಣಸ್ವಾಮಿ ಹಾಗೂ ಶಾಸಕ ವೆಂಕಟರಮಣಪ್ಪ ಭೂಸೇನಾ ನಿಗಮದಿಂದ ಆಯೋಜಿಸಿದ್ದ ಇಪ್ಪತ್ತೈದು ಲಕ್ಷ ವೆಚ್ಚದ ಯಾತ್ರಿ ನಿವಾಸ ಮತ್ತು ಐದು ಲಕ್ಷ ವೆಚ್ಚದ ವಾಲ್ಮೀಕಿ ಆಶ್ರಮದ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿದರು.
ನಿರ್ಮಿತಿ ಕೇಂದ್ರದಿಂದ ಪ.ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಐವತ್ತು ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ವಾಲ್ಮೀಕಿ ಭವನ ನೂತನ ಕಟ್ಟಡವನ್ನು ಸಂಸದ ನಾರಾಯಣಸ್ವಾಮಿ ಹಾಗೂ ಶಾಸಕ ವೆಂಕಟರಮಣಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿಡಗಲ್ಲು ಸಂಸ್ಥಾನದ ಶಿಡ್ಲೆಕೋಣ ಸಂಜಯ್ ಕುಮಾರ್ ಸ್ವಾಮೀಜಿ, ನಿರ್ಮಿತಿ ಕೇಂದ್ರದ ರಾಜಶೇಖರ್, ಸುಬ್ರಮಣಿ, ಭೂಸೇನಾ ನಿಗಮದ ಮಹದೇವಪ್ಪ, ತಾ.ಪಂ ಅಧ್ಯಕ್ಷ ಸೊಗಡು ವೆಂಕಟೇಶ್, ಉಪಾಧ್ಯಕ್ಷ ನಾಗರಾಜು, ತಾಲ್ಲೂಕು ಪ.ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಜಿ.ಪಂ ಸದಸ್ಯ ಪಾಪಣ್ಣ, ತಾ.ಪಂ.ಸದಸ್ಯೆ ಗಂಗಮ್ಮ, ಗ್ರಾ.ಪಂ.ಅಧ್ಯಕ್ಷೆ ಮಂಜುಳಈರಣ್ಣ, ವಾಲ್ಮೀಕಿ ಜಾಗೃತಿ ಅಧ್ಯಕ್ಷ ಪಾಳೇಗಾರ್ ಲೋಕೇಶ್, ಚಂದ್ರು, ಓಂಕಾರ್ ನಾಯಕ, ಸುರೇಶ್, ಮಹಾರಾಜು, ಸಾಧಿಕ್, ಮಲ್ಲಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.