ಮುದ್ದೇಬಿಹಾಳ (www.vknews.com) : ತಾಲ್ಲೂಕಿನ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕ್ರಮವಾಗಿ ರಾವಸಾಹೇಬ ದೇಸಾಯಿ ಹಾಗೂ ಶಿವಾಜಿ ಬಿಜಾಪೂರ ಅವಿರೋಧವಾಗಿ ಆಯ್ಕೆಯಾದರು. ಶನಿವಾರ ಸಂಜೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕ್ಷತ್ರೀಯ ಸಮಾಜದ ಅಂಗ ಸಮಾಜಗಳ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಕಳೆದ ಅವಧಿಯ ಅಧ್ಯಕ್ಷ ಪರಶುರಾಮ ಪವಾರ ಅಧ್ಯಕ್ಷತೆ ವಹಿಸಿದ್ದರು.
2020-22 ಎರಡು ವರ್ಷದ ಸಾಲಿಗೆ ಸಹ ಕಾರ್ಯದರ್ಶಿ ಸುರೇಶ ಕಲಾಲ, ಖಜಾಂಚಿಯಾಗಿ ನಿಂಗರಾಜ ಮಹೀಂದ್ರಕರ, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಮಂಜುನಾಥ ಕಲಾಲ ಆಯ್ಕೆಯಾದರು. ಸಂಘಟನೆಗೆ ಉಪಾಧ್ಯಕ್ಷರನ್ನಾಗಿ ಕ್ಷತ್ರೀಯ ಒಕ್ಕೂಟದ ಅಂಗ ಸಮಾಜಗಳ ಅಧ್ಯಕ್ಷರನ್ನೇ ಆಯ್ಕೆ ಮಾಡಲಾಯಿತು. ಅದರಲ್ಲಿ ಮರಾಠಾ ಸಮಾಜದಿಂದ ಅರ್ಜುನ ನಲವಡೆ, ಕ್ಷತ್ರೀಯ ಸಮಾಜದಿಂದ ಗುರಪ್ಪ ತಾಡಪತ್ರಿ, ರಜಪೂತ ಸಮಾಜದಿಂದ ದೀಪಕ ರಾಯಚೂರ, ಲೋಹಾರ ಸಮಾಜದಿಂದ ರಾಮು ಪವಾರ, ಭಾವಸಾರ ಸಮಾಜದಿಂದ ನಾಗೇಶ ಲಾತೂರಕರ, ಸೋಮವಂಶದಿಂದ ಮಂಜುನಾಥ ಪೇಟಕರ, ಕಲಾಲ ಸಮಾಜದಿಂದ ತುಕಾರಾಮ ಕಲಾಲ, ಗೊಂದಳೆ ಸಮಾಜದಿಂದ ನಾರಾಯಣ ದುರ್ವೆ, ಜೋಗಿ ಸಮಾಜದಿಂದ ಮೋಹನ ವಾಂಗಮೋರೆ, ಬೈಲಪತ್ತಾರ ಸಮಾಜದಿಂದ ಭೀಮರಾಜ ಪತ್ತಾರ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನೇತಾಜಿ ನಲಡವೆ, ಭರತ ಭೋಸಲೆ, ಚಂದ್ರಶೇಖರ ಕಲಾಲ, ತಾನಾಜಿ ಘೋರ್ಪಡೆ, ಯಶವಂತ ಕಲಾಲ, ನಾರಾಯಣ ಗೊಂದಳೆ, ಭೀಮಣ್ಣ ಗೊಂದಳೆ, ಕೃಷ್ಣಾಜಿ ಪವಾರ ಮತ್ತಿತರರು ಪಾಲ್ಗೊಂಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.