(www.vknews.com) : ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ, ಭಾರತೀಯ ಹೋಮಿಯೋಪತಿ ವೈದ್ಯರ ಸಂಘ ಮಂಗಳೂರು ಮತ್ತು ರಿಕ್ಷಾ ಚಾಲಕರ ಸಂಘ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ನಗರದ ಜೆಪ್ಪು ಪ್ರದೇಶದ ಅಟೋ ರಿಕ್ಷಾ ಚಾಲಕರಿಗೆ ಉಚಿತ ವೈದ್ಯಕೀಯ ಮಾಹಿತಿ ಶಿಬಿರ ಮತ್ತು ಕೋವಿಡ್-19 ತಿಳುವಳಿಕೆ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪೌರರಕ್ಷಣಾ ಪಡೆ ಇದರ ಚೀಫ್ ವಾರ್ಡನ್ ಡಾ|| ಮುರಲೀ ಮೋಹನಚೂಂತಾರು ಇವರು ವಹಿಸಿದ್ದರು. ದ.ಕ. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ವಿಷ್ಣುಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಡಿಯನ್ ಹೋಮಿಯೋಪತಿ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷರಾದ ಡಾ|| ಪ್ರವೀಣ್ ರೈ ಅವರು ದೇಹದ ರಕ್ಷಣಾ ವ್ಯವಸ್ಥೆ ಸದೃಢವಾಗಿದ್ದಲ್ಲಿ ಯಾವ ರೋಗವೂ ಬರುವುದಿಲ್ಲ ಎಂದರು. ಎಲ್ಲರಿಗೂ ಉಚಿತ ಹೋಮಿಯೋಪತಿ ಔಷಧಿ ಹಂಚಲಾಯಿತು. ಡಾ|| ಮುರಲೀಮೋಹನ ಚೂಂತಾರು ಅವರು ಮಾತನಾಡಿ ಖಾಕಿ ಧರಿಸಿದ ಅಟೋ ಚಾಲಕರು ಸಮಾಜದ ಅನಿವಾರ್ಯ ಅಂಗವಾಗಿ ಬೆಳೆದಿದ್ದಾರೆ.
ತುರ್ತು ಅಫಘಾತದ ಸಂದರ್ಭಗಳಲ್ಲಿ ರಿಕ್ಷಾ ಚಾಲಕರು ಆಪತ್ಬಾಂಧವರಾಗಿರುತ್ತಾರೆ ಮತ್ತು ಕೋವಿಡ್-19 ರೋಗದ ಸಂದರ್ಭದಲ್ಲಿಯೂ ಬಸ್ ವ್ಯವಸ್ಥೆ ಇಲ್ಲದಾಗ ಜನರನ್ನು ಮತ್ತೆ ರೋಗಿಗಳನ್ನು ಸಾಗಿಸಲು ಅಟೋ ಚಾಲಕರು ಹೆಚ್ಚು ಧೈರ್ಯ ವಹಿಸಿ ಮುಂದೆ ಬಂದಿರುವುದು ಶ್ಲಾಘನೀಯ ಎಂದರು. ಪೌರರಕ್ಷಣಾ ತಂಡದ ಅಜಯ್, ದಿವಾಕರ್, ಲಿಂಗಪ್ಪ, ಮಹೇಶ್, ಸಂತೋಷ್ ಉಪಸ್ಥಿತರಿದ್ದರು. ಅಟೋ ಚಾಲಕರ ಸಂಘದ ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ್ ಕುಲಾಲ್ ವಂದನಾರ್ಪಣೆಗೈದರು. ಸುಮಾರು 40 ಅಟೋ ರಿಕ್ಷಾ ಚಾಲಕರಿಗೆ ಈ ಸಂದರ್ಭದಲ್ಲಿ ಮುಖಕವಚ, ಔಷಧಿ ಮತ್ತು ಸ್ಯಾನಿಟೈಸರ್ ಉಚಿತವಾಗಿ ನೀಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.