ಹೆಬ್ಬಾರ್(ವಿಶ್ವಕನ್ನಡಿಗ ನ್ಯೂಸ್): ಗೆಳಯ-ಗೆಳತಿಯರೇ ನೋಡಿರಿ ಎಂದು ಯಕ್ಷಕನ್ನಿಕೆಯರಾದ ಸುಷ್ಮ ಮಾರ್ಪಾಡಿ ಮತ್ತು ಮೈತ್ರಿ ಭಟ್ ಮುವ್ವಾರ್ ಮುಂತಾದವರು ಕುಣಿದಿದ್ದಾರೆ. ಈ ಯಕ್ಷಗಾನದ ನಂಟು ಅಂದರೆ ಹಾಗೆ ಕಲಾವಿದರಿಗೆ ಗೆಜ್ಜೆ ಕಟ್ಟಿ ಕುಣಿದರೆ ಏನೊ ಒಂದು ಉತ್ಸಾಹ, ಉಲ್ಲಾಸ, ಆನಂದ. ಈಗ ಗೆಜ್ಜೆ ಕಟ್ಟಿ ಕುಣಿಯಲು ರಂಗಸ್ಥಳ ಇಲ್ಲ. ಏಲ್ಲಾ ಕೊಲೆ ಪಾತಕಿ ಮಹಾಮಾರಿ ಕರೋನ ಎಂಬ ಸಾವುನೋವಿನ ರೋಗ ಎಲ್ಲಾ ರೀತಿಯಿಂದಲೂ ಸಂಕಷ್ಟಕ್ಕೆ ಎಡೆಮಾಡಿದೆ. ಇಂತಹ ಸಂದರ್ಭದಲ್ಲಿ ಪ್ರತಿಭೆಗಳು ಏನು ಮಾಡುದು ಎಂಬ ಚಿಂತೆಯಲ್ಲಿ ಇರುವಾಗ ತಟ್ಟನೆ ಹೊಳೆದದ್ದು ಯಕ್ಷಗಾನ ಪಧ್ಯಕ್ಕೆ ಮನೆಯಂಗಳವೇ ರಂಗಸ್ಥಳ ಮಾಡಿದರೆ ಹೇಗೆ ಎಂಬ ಸಂಶೋದನೆಯ ಪ್ರಕಾರ ತೆಂಕುತ್ತಿಟ್ಟಿನ ಯಕ್ಷ ಕುವರಿಯರ ಈ ಪ್ರಯತ್ನ ಉತ್ತಮ ವಾಗಿದೆ.
ಗೃಹ ಬಂಧನದ ಈ ಸಮಯದಲ್ಲಿ ಕಲಾವಿದರು ತಮ್ಮ ಪೌರಾಣಿಕ ಹಾಡನ್ನು ತೆಂಕಿನ ಹಿರಿಯ ಭಾಗವತರಾದ ಶ್ರೀಯುತ ಶ್ರೀನಿವಾಸ ಬಳಮಂಜ ಇಂಪಾದ ಪೌರಾಣಿಕ ಪದ. ಮದ್ದಲೆ ತನನಂನಲ್ಲಿ ಶ್ರೀಯುತ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಸಾಥ್ ನೀಡಿದ್ದಾರೆ. ಕನಕಾಂಗಿ ಕಲ್ಯಾಣ ಪೌರಾಣಿಕ ಪ್ರಸಂಗದಲ್ಲಿ ವನ ವಿಹಾರದ ಪಧ್ಯ “ಗೆಳತಿಯರೇ ವನ ಪೋಗುವ” ಎಂಬ ವನದ ಸೊಬಗನ್ನು ಹಾಡಿನ ಮೂಲಕ ಪ್ರಸಂಗಕರ್ತರು ನಿತ್ಯಾನಂದ ಅವಧೂತರು ವನದ ಸೋಬಗನ್ನು ಹಣೆದ್ದೀದ್ದಾರೆ. ಆ ಹಾಡನ್ನು ಶ್ರೀಯುತ ಶ್ರೀನಿವಾಸ ಬಳಮಂಜರ ಗಾಯನದಲ್ಲಿ ಇಂಪು ನಾವು ಕಾಣಬಹುದು.
ಮನೆಯೇ ಮಂತ್ರಾಲಯ ಎಂಬ ಈ ಪರಿಸ್ಥಿತಿಯಲ್ಲಿ ಗೆಳತಿಯರಾದ ಸುಷ್ಮ ವಸಿಷ್ಠ, ಮೈತ್ರಿ ಭಟ್ ಮುವ್ವಾರ್, ಚೈತ್ರ ಎಚ್, ಅಶ್ವಿನಿ ಅಚಾರ್, ಬಿಂದ್ಯಾ ಶೆಟ್ಟಿ, ಪ್ರತಿಷ್ಠಾ ರೈ ಈ ಯಕ್ಷಕನ್ನೆಯರು ಸೇರಿ ಮನೆಯಲ್ಲೆ ಯಕ್ಷ ನೃತ್ಯ ಮಾಡಿ ಎಲ್ಲರ ಮನಗಳಲ್ಲಿ ಯಕ್ಷಗಾನದ ನಾಟ್ಯವನ್ನು ಉಣಬಡಿಸಿದ್ದಾರೆ. ಇಂತಹ ಪುಣ್ಯ ದೀಮಂತ ಕನ್ನಡ ನಾಡು ನುಡಿಯನ್ನು ಬೆಳೆಸುವ ಬೆಳಗಿಸುವ ಈ ಯಕ್ಷ ಕಲೆಯನ್ನು ಆರು ಕನ್ಯಾ ತಾರೆಯರು ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಇಂತಹ ವೀಡಿಯೋದ ಮೂಲಕ ಬೇರೆ ಬೇರೆ ಸ್ಥಳದ ಪರಿಚಯವು ಹಾಗೂ ಭಾರತೀಯ ಸಂಸ್ಕೃತಿ ಮೂಲವಾದ ಝರತಾರಿ ಸೀರೆಯುಟ್ಟು, ಯಕ್ಷಗಾನದ ಕೆಲವು ಆಭರಣಗಳನ್ನು ತೊಡಗಿಸಿ ಯಕ್ಷತಾರೆಯರು ಸುಷ್ಮ ವಸಿಷ್ಠ, ಮೈತ್ರಿ ಭಟ್ ಮುವ್ವಾರ್, ಚೈತ್ರ ಎಚ್, ಅಶ್ವಿನಿ ಆಚಾರ್, ಬಿಂದ್ಯಾ ಶೆಟ್ಟಿ, ಪ್ರತಿಷ್ಠ ರೈ ಸೇರಿ ಕುಣಿದ್ದಿದ್ದಾರೆ. ಇವರ ಸಣ್ಣ ಪ್ರಯತ್ನ ದೊಡ್ಡದಾಗಿ ಯಕ್ಷ ಪ್ರೇಕ್ಷಕರ ರಸದೌತಣ ಸವಿಯಲು ಸಾಮಾಜಿಕ ಜಾಲಗಳು ಸಾಕ್ಷಿಯಾಗಿ ಎಲ್ಲರ ಪ್ರಶಂಸೆಗೆ ಪ್ರೀತಿ ಪಾತ್ರವಾಗಿದೆ. ಇಂತಹ ಪ್ರಯತ್ನ ಮುಂದೆಯು ನಡೆಯಲಿ ಗೃಹಬಂಧನದ ಈ ಪರಿಸ್ಥಿತಿಯಲ್ಲಿ ಎಲ್ಲರ ಮನೆ ಮನ ಗೆಲ್ಲಲಿ ಎಂದು ನಾವೆಲ್ಲರು ಹಾರೈಸೋಣ.
✍️ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.