ಸಿಟಿ ಪ್ರೆಂಡ್ಸ್ ಅಜ್ಜಿನಡ್ಕ ಯುವಕರಿಂದ ಅರಣ್ಯ ಅಧಿಕಾರಿಗಳಿಗೆ ಮನವಿ :
ಪುಣಚ (www.vknews.com) : ಮಣಿಲ ಎಂಬಲ್ಲಿ ನಿನ್ನೆ ರಾತ್ರಿ ಸುಮಾರು 8:00 ಗಂಟೆ ಸಮಯದಲ್ಲಿ ಸಿರಾಜ್ ಮಣಿಲ ಅವರು ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎರಡು ಕಾಡುಕೋಣ ಪ್ರತ್ಯಕ್ಷವಾಗಿದ್ದು ತಕ್ಷಣ ಅರಣ್ಯ ಅಧಿಕಾರಿಗಳು , ಊರ ಗ್ರಾಮಸ್ಥರು ಸೇರಿ ಹುಡುಕಾಡಿದರೂ ಕಾಡುಕೋಣ ತಪ್ಪಿಸಿಕೊಂಡು ಕಣ್ಮರೆಯಾಗಿತ್ತು.
ಈ ಘಟನೆಯ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ನಿರಂತರವಾಗಿ ಶೋಧ ನಡೆಸಿದ್ದರು ಅದರ ಜಾಡು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಇಂದು ಬೆಳಿಗ್ಗಿನ ಸಮಯದಲ್ಲಿ ಅಜ್ಜಿನಡ್ಕ ವ್ಯಾಪ್ತಿಯ ಪಟಿಕಲ್ಲು ಭಾಗದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದೆ ಎಂದು ಪ್ರತ್ಯಕ್ಷರೊಬ್ಬರು ತಿಳಿಸಿರುತ್ತಾರೆ ಒಟ್ಟಿನಲ್ಲಿ ಪುಣಚ ಗ್ರಾಮದಲ್ಲಿ ಕಂಡುಬಂದ ಕಾಡುಕೋಣದ ಪ್ರತ್ಯಕ್ಷ ನಾಗರೀಕರಲ್ಲಿ ಆತಂಕ ಮನೆಮಾಡಿದೆ.
ಈಗಾಗಲೇ ಸಿಟಿ ಪ್ರೆಂಡ್ಸ್ ಅಜ್ಜಿನಡ್ಕದ ಯುವಕರಾದ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ, ಆಸೀಫ್ ಸಿಎಚ್ , ಶರೀಫ್ ಗುಂಪೆ, ಅವರು ಅರಣ್ಯ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿ ಸೂಕ್ತವಾಗಿ ಇದನ್ನು ಕಂಡುಹಿಡಿದು ಗ್ರಾಮಸ್ಥರ ಭಯವನ್ನು ದೂರವಾಗಿಸಲು ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.