ವಿಟ್ಲ (www.vknews.com) : ಅಪ್ರಾಪ್ತ ಹುಡುಗನ ಮೇಲೆ ವಿಟ್ಲ ಬಜರಂಗಳದ ಮುಖಂಡ ದಿನೇಶ್ ಕನ್ಯಾನ ಎಂಬವನು ಹಲ್ಲೆ ನಡೆಸಿ ನಿಂದಿಸುವ ವಿಡಿಯೋ ವೈರಲ್ ಆಗಿದ್ದು ಈ ಘಟನೆಯ ಬಗ್ಗೆ ವರದಿ ಪಡೆದುಕೊಂಡು ಕೊಳ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್ ಅವರು ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಡಿವೈಎಸ್ಪಿ , ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ,ವಿಟ್ಲ ಎಸೈ ಮೊದಲಾದವರಿಗೆ ದೂರವಾಣಿ ಮುಖಾಂತರ ಮನವಿ ಮಾಡಿದ್ದರು. ಈ ವಿಚಾರವಾಗಿ ನಿನ್ನೆ ರಾತ್ರಿ ನಾಲ್ಕು ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಇಂದು ಕೊಳ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್ ಅವರ ನೇತ್ರತ್ವದಲ್ಲಿ ಹಲ್ಲೆಗೆ ಒಳಗಾದ ಅಪ್ರಾಪ್ತ ಹುಡುಗನ ಮನೆಗೆ ತೆರಳಿ ಮನೆಯವರಿಗೆ ಹಾಗೂ ಅಪ್ರಾಪ್ತ ಹುಡುಗ ಸೌಬನ್ ಆತನಿಗೆ ಎಂ.ಎಸ್ ಮಹಮ್ಮದ್ ಅವರು ದೈರ್ಯ ತುಂಬಿದರು ಮತ್ತು ನಿಮಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ದೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಆರೋಪಿಗಳನ್ನು ತಕ್ಷಣವಾಗಿ ಬಂಧಿಸಿದ ಪೋಲಿಸ್ ಅಧಿಕಾರಿಗಳ ಕಾರ್ಯ ಶಾಘ್ಲನೀಯ ಮತ್ತು ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಸಿರಾಜುದ್ದೀನ್ ಸಖಾಪಿ ಕನ್ಯಾನ , ಗ್ರಾ.ಪಂ.ಸದಸ್ಯರಾದ ಇಬ್ರಾಹಿಂ ಗುಂಡಿ, ಪ್ರಮುಖ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.