ಬಂಟ್ವಾಳ (www.vknews.com) : ವಿಟ್ಲ ಕೊಳ್ನಾಡು ಗ್ರಾಮದ ಕಾಡು ಮಠ ಶಾಲೆಯ ಮೈಧಾನದಲ್ಲಿ ಅಪ್ರಾಪ್ತ ಹುಡುಗನ ಮೇಲೆ ವಿಟ್ಲದ ಭಜರಂಗದಳದ ಮುಖಂಡ ದಿನೇಶ್ ಕನ್ಯಾನ ಎಂಬವನು ಹುಡುಗನಿಗೆ ಥಳಿಸಿದ್ದಲ್ಲದೆ ತಂದೆ ತಾಯಿಯಂದಿರಿಗೆ ಅಶ್ಲೀಲವಾಗಿ ನಿಂಧಿಸಿ ಜೈ ಶ್ರೀರಾಮ್ ಹೇಳಲು ಬಲವಂತಪಡಿಸಿ ಬಹಿರಂಗವಾಗಿ ಜೀವ ಬೆದರಿಕೆಯನ್ನು ಒಡ್ಡಿದ್ದಾನೆ.
ಈತನ ಹಿನ್ನಲೆಯನ್ನು ಸ್ಥಳೀಯರು ಹೇಳುವ ಪ್ರಕಾರ ನೆರೆಯ ಕೇರಳದ ಒಬ್ಬ ಧರ್ಮ ಗುರುಗಳ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದು ಹಾಗೂ ವಿಟ್ಲ ಠಾಣೆಯಲ್ಲಿ ಹಲವು ಕೇಸುಗಳು ಈತನ ಮೇಲೆ ಇದ್ದು ಈತ ಕನ್ಯಾನ ಭಾಗದ ಭಜರಂಗ ದಳದ ಮುಖಂಡನಾಗಿದ್ದಾನೆ. ಈತನ ಸಾರ್ವಜನಿಕವಾದ ಕಪಿಚೇಷ್ಟೆಯನ್ನು ಖಂಡಿತವಾಗಿ ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಎಸ್ ಡಿ ಪಿ ಐ ಬಂಟ್ವಾಳ ವಿಧಾನ ಸಭಾ ಕ್ಷೆತ್ರಸಮಿತಿ ಈ ಕ್ರತ್ಯವನ್ನು ಅತ್ಯಂತ ಕಠೋರ ಶಬ್ದಗಳಿಂದ ಖಂಡಿಸುತ್ತದೆ. ಹಾಗೂ ಈತನ ಮೇಲೆ ಕಠಿಣ ಕಾನೂನು ಕ್ರಮಜರಗಿಸಬೇಕೆಂದು ಪೊಲೀಸ್ ಇಲಾಖೆ ಯೊಂದಿಗೆ ಪ್ರಭಲವಾಗಿ ಆಗ್ರಹ ಪಡಿಸುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.