ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್): ಇಂಡಿಯನ್ ಸೋಶಿಯಲ್ ಫಾರಂ ದಮ್ಮಾಮ್, ಕರ್ನಾಟಕ ಘಟಕವು ಹೆಲ್ತ್ ಕೇರ್ ಪಾಲಿ ಕ್ಲಿನಿಕ್ ದಮ್ಮಾಮ್ ಇದರ ಸಹಯೋಗದೊಂದಿಗೆ 29 ಮೇ 2020ರಂದು “ಕೋವಿಡ್ ನೊಂದಿಗೆ ಜೀವಿಸಲು ಕಲಿಯಿರಿ” ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿತು.
ಝೂಮ್ ಆಪ್ ನಲ್ಲಿ ನಡೆದ ಈ ವೆಬಿನಾರ್ ನಲ್ಲಿ ಸೌದಿ ಅರೇಬಿಯಾ ಪೂರ್ವ ಪ್ರಾಂತ್ಯ ಮತ್ತು ನೆರೆಯ ಪ್ರಾಂತ್ಯಗಳ ಸುಮಾರು 150ಕ್ಕೂ ಅಧಿಕ ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ದಲ್ಲಿ ಡಾ.ಶೈಲೇಂದ್ರನಾಥ್ ವಿಷಯ ಮಂಡನೆ ಮಾಡಿ ಉಪಯುಕ್ತ ಮಾಹಿತಿಯನ್ನು ನೀಡಿದರು. ಇಂಡಿಯನ್ ಸೋಶಿಯಲ್ ಫಾರಮ್ ದಮ್ಮಾಮ್, ಕರ್ನಾಟಕ ಘಟಕದ ಅಧ್ಯಕ್ಷ ಶರೀಫ್ ಜೋಕಟ್ಟೆ ಅವರು ಸಮಾರೋಪ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಕಾರ್ಯಕ್ರಮ ನಿರೂಪಿಸಿದರು.
Muhammed
May 30, 2020 at 3:07 amMashah Allah it was a very good program. Thanks to Indian Social Forum and Healthcare Polyclinic for organizing such a wonderful and informative approach.
Thank you once again.
Abu Naushad
May 30, 2020 at 5:31 amIt was a nice programme arranged by Isf and health care Doctor Mr shailendranath very informative.