(www.vknews.com) : ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡುತ್ತಾ ಕರೋನಾದಿಂದಾಗಿ ಜನರು ಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಪೋಷಕರು ಕೆಲಸವಿಲ್ಲದೇ ಮನೆಯಲ್ಲಿದ್ದಾರೆ. ಜೀವನ ನಡೆಸುವುದೇ ಕಷ್ಟವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸದ್ಯದ ಪರಿಸ್ಥಿತಿಯಲ್ಲಿ ಶುಲ್ಕ ಕಟ್ಟಲು ಆಗುತ್ತಿಲ್ಲ. ಆದರೆ ವಿವಿ ಪರೀಕ್ಷಾ ಶುಲ್ಕವನ್ನು ಕಡ್ಡಾಯವಾಗಿ ಮಾಡಿರುವುದರಿಂದ ತೊಂದರೆಯಾಗಿದೆ.
ಇದು ವಿದ್ಯಾರ್ಥಿ ವಿರೋಧಿ ನೀತಿ ಆಗಿದೆ. ಕೂಡಲೇ ವಿವಿ ಕಡ್ದಾಯ ಶುಲ್ಕ ಪಾವತಿ ಆದೇಶ ಹಿಂಪಡೆಯಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಎಲ್ಲಾ ವರ್ಗದ ಜನರಿಗೆ ಶುಲ್ಕ ರಹಿತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೋಡಬೇಕು. ಸರ್ಕಾರವೇ ಶುಲ್ಕವನ್ನು ಭರಿಸಬೇಕು. ದಯವಿಟ್ಟು ಈ ಕೂಡಲೇ ಉನ್ನತ ಶಿಕ್ಷಣ ಸಚಿವರು, ಮಾನ್ಯ ಮುಖ್ಯಮಂತ್ರಿಗಳು, ಈ ಬಗ್ಗೆ ಗಮನ ಹರಿಸಿ ಈ ಒಂದು ಶುಲ್ಕ ರಹಿತ ಪರೀಕ್ಷೆಗಾಗಿ ಅವಕಾಶ ನೀಡುವ ಮೂಲಕ ವಿದ್ಯಾರ್ಥಿ ಪರ ನಿಲ್ಲಬೇಕಾಗಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKFನ ಎಲ್ಲಾ ಪದಾಧಿಕಾರಿಗಳ ತಂಡ ಮನವಿ ಮಾಡುತ್ತಿದ್ದೇವೆ ಎಂದರು.
ಮನವಿ ಸಲ್ಲಿಸುವಾಗ VKF ವಿದ್ಯಾರ್ಥಿ ಘಟಕದ ಅಧ್ಯಕ್ಷ ದೊಡ್ಡಿ ಪ್ರವೀಣ್, ಆಕಾಶ್, ಕೋಲಾರ ಜಿಲ್ಲಾ ಅಧ್ಯಕ್ಷ ಹುಂಗೇನಹಳ್ಳಿ ವೇಣು, ರಾಜ್ಯ ಸಂಚಾಲಕ ದೊಡ್ಡಕಲ್ಲಹಳ್ಳಿ ಮಂಜುನಾಥ್, ರಾಜ್ಯ ರಾಯಭಾರಿ ಇಮ್ರಾನ್ ಹಾಗೂ ಇತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.