(www.vknews.com) : ಕೊವಿಡ್ 19ರ ಈ ಸಂದರ್ಭದಲ್ಲಿ ನಾವು ಪಾಲಿಸಬೇಕಾದ ಹಾಗೂ ಮಾಡಬೇಕಾದ ಕೆಲಸಗಳು ಹಲವಾರು ಇದ್ದು ಅದನ್ನು ಸಮರ್ಪಕವಾಗಿ ಮಾಡಿ ನಮ್ಮ ಜೀವನವನ್ನು ಸುಂದರ ರೀತಿಯಲ್ಲಿ ಕೊಂಡೊಯ್ಯಬೇಕಾದುದು ನಮ್ಮ ಪ್ರಥಮ ಕೆಲಸವಾಗಬೇಕಾಗಿದೆ. ಯಾವುದೇ ಆತುರದ ತೀರ್ಮಾನಗಳು ನಮ್ಮನ್ನು ಇನ್ನೂ ಆದಷ್ಟು ಸಂಕಷ್ಟಕ್ಕೆ ಒಳಪಡಿಸಬಹುದು. ಈ ವರ್ಷ ಅಂದರೆ 2020 ನಮಗೆಲ್ಲರಿಗೂ ಒಂದು ಪರೀಕ್ಷಾಕಾಲವಾಗಿದೆ ಎಂಬುದನ್ನು ನಾವು ಮರೆಯ ಕೂಡದು. ಜನರು ಬದುಕು ಮರಣಗಳ ಮಧ್ಯೆ ಚಡಪಡಿಸುದನ್ನು ನಾವು ನಮ್ಮ ಕಣ್ಣ ಮುಂದೆಯೇ ಕಾಣುತಿದ್ದೇವೆ. ಸಾಧ್ಯವಾದಷ್ಟು ಪರಿಸ್ಥಿತಿಯನ್ನು ಅರಿತು ಕೊಂಡು ಕೆಲಸವನ್ನು ಮಾಡಲು ನಾವು ಮುಂದಾಗಬೇಕು ಹೊರತು ಪರಿಸ್ಥಿತಿಯ ಲಾಭವನ್ನು ಪಡಯುದಲ್ಲ ಬೇಕಾದುದು.
ಈಗೀಗ ಜನರು ಮಕ್ಕಳನ್ನು ಶಾಲೆಗ ಕಳುಹಿಸುವ ವಿಚಾರದಲ್ಲಿ ಚರ್ಚೆ ಮಾಡುವುದು ನಮಗೆ ಕಂಡುಬರುತಿದೆ. ಆದರೆ ಪರಿಣಾಮ ಏನಾಗಬಹುದು ಎಂಬುದನ್ನು ಮಾತ್ರ ಯಾರೂ ಚಿಂತಿಸುತಿಲ್ಲ. ಒಂದು ವೇಳೆ ಶಾಲೆಗಳು ಪ್ರಾರಂಭವಾದರೂ ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರುವುದು ಒಳಿತು. ಯಾಕೆಂದರೆ ಮಕ್ಕಳಿಗೆ ಈ ವಿಷಯದಲ್ಲಿ ಜ್ಞಾನ ಇಲ್ಲದೆ ಇರಬಹುದು. ಮಕ್ಕಳು ಶಾಲೆಗೆ ಹೋಗಬೇಕಾದರೆ ಒಂದೋ ಶಾಲಾ ವಾಹನವನ್ನು ಅಥವಾ ಇನ್ನಿತರ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ. ಇದರಿಂದಾಗಿ ಮಕ್ಕಳು ಕೊವಿಡ್ ದುರಂತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಇದೆಲ್ಲವನ್ನು ಮನಗಂಡು ಮಕ್ಕಳ ಜೀವನ ಸಂರಕ್ಷಿಸಬೇಕಾದ ನಾವು ಮಕ್ಕಳನ್ನೇ ಬಲಿ ಕೊಡುವಂತಹ ಕೆಲಸಕ್ಕೆ ಇಳಿಯುವವರಾಗಬಹುದು. ಅಪಾಯವನ್ನು ತಿಳಿದೂ ತಿಳಿಯದಂತೆ ನಾಟಕವಾಡಿದರೆ ಎಲ್ಲರ ಶಾಪ ನಮ್ಮ ತಲೆಯ ಮೇಲೆ ಕಟ್ಟಿಟ್ಟ ಬುತ್ತಿ.
ಆದುದರಿಂದ ಯಾವುದಾದರು ಪರ್ಯಾಯ ಶಿಕ್ಷಣ ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸಿದಾಗ ಅದರಂತೆ ಆದಷ್ಟು ಜಾಗ್ರತೆಯಿಂದ ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಮುಂದಾಗುವ ಮಾತ್ರವಲ್ಲದೆ ಜೀವವನ್ನು ಉಳಿಸುವ ಕೆಲಸವನ್ನು ಮಾಡುವ. ದೇವನು ನಮ್ಮೆಲ್ಲರನ್ನೂ ಇಹ ಪರ ಲೋಕಗಳಲ್ಲಿ ವಿಜಯಿಗಳನ್ನಾಗಿ ಮಾಡಲಿ ಆಮೀನ್. ನಮ್ಮೆಲರನ್ನೂ ಕೋವಿದ ನಂಥಹ ಮಾರಕ ರೋಗಗಳಿಂದ ಪಾರುಗೊಳಿಸಿ ಜೀವನ ಸುಗಮವಾಗಿ ಸಾಗಿಸಲು ಅನುವುಮಾಡಿಕೊಡಲಿಎಂದು ಪ್ರಾರ್ಥಿಸುವ. ಮಾತ್ರವಲ್ಲ ಈ ರೋಗದಿದಂದ ಬಳಲುತಿರ್ವ ಎಲ್ಲರನ್ನೂಸಂಪೂರ್ಣ ಸುಖಗೊಳಿಸಿ ದೀರ್ಘಾಯುಸನ್ನು ಕೊಟ್ಟು ಈಮಾನಿನೊಂದಿಗೆ ಕಾಪಾಡಲಿ. ಆಮೀನ್
ಪ್ರೊ.ಯಂ.ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.