ಚಿಕ್ಕಬಳ್ಳಾಪುರ (ವಿಶ್ವ ಕನ್ನಡಿಗ ನ್ಯೂಸ್) : ಗೌರಿಬಿದನೂರು ತಾಲ್ಲೂಕಿನಲ್ಲಿ ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಬಾರದಂತೆ ನೋಡಿಕೊಳ್ಳತಕ್ಕದ್ದು ಸುಮಾರು 22 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವ ಮಾಹಿತಿಯಿದ್ದು, ಅದಕ್ಕೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ಗೌರಿಬಿದನೂರಿನ ತಾಲ್ಲೂಕು ಪಂಚಾಯಿತಿ ಅವರಣದ ಸಾಮಥ್ರ್ಯ ಸೌಧದಲ್ಲಿ ಅಯೋಜಿಸಿದ್ದ ತಾಲ್ಲೂಕು ಮಟ್ಟದ ಸಾಮಾನ್ಯ ಸಭೆಯಲ್ಲಿ ಬಾಗವಹಿಸಿ ಮಾತನಾಡುತ್ತಾ, ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೋವಿಡ್-19 ಸೋಂಕನ್ನು ತಾಲ್ಲೂಕಿನ ಅಧಿಕಾರಿಗಳು ಉತ್ತಮ ಸೇವೆಯನ್ನು ನೀಡಿ, ಕೋವಿಡ್-19 ಸೋಂಕಿನ ವಿರುದ್ಧ ಮೆಟ್ಟಿ ನಿಂತಿರುವುದು ಶ್ಲಾಘನೀಯವಾದುದ್ದು ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಅಧಿಕಾರಿ ಮಂಜುನಾಥ್ ಮಾತನಾಡಿ, ಈ ಬಾರಿ ಉತ್ತಮ ಮಳೆ ಅಗುವ ಸಂಭವ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು ರೈತರು ಕೃಷಿಗೆ ಎಲ್ಲ ಸಿದ್ದತೆಗಳು ಮಾಡಿಕೊಳ್ಳಬೇಕು, ಅಗತ್ಯಕ್ಕೆ ತಕ್ಕಂತೆ ಇಲಾಖೆಯ ಕೃಷಿ ಕೇಂದ್ರಗಳಲ್ಲಿ ರಾಗಿ, ತೊಗರಿ, ಸಿರಿಧಾನ್ಯಗಳ ದಾಸ್ತಾನು ಮಾಡಿದ್ದು ಜೊತೆಗೆ ರಸಗೊಬ್ಬರ ಸಹ ಸಾಕಷ್ಟಿದೆ ಎಂದರು.
ಅಂತರ್ಜಲ ವೃದ್ದಿಗೆ ಜಮೀನಿನಲ್ಲಿ ಬದುಗಳನ್ನು ನಿರ್ಮಸಿಕೊಳ್ಳತಕ್ಕದ್ದು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 10 ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕರು ತಿಳಿಸಿದರು.
ಆರೋಗ್ಯ ಅಧಿಕಾರಿ ಓ.ರತ್ನಮ್ಮ ಮಾತನಾಡಿ ಕೋವಿಡ್ -19 ಸೋಂಕು ನಮ್ಮ ತಾಲ್ಲೂಕಿನಲ್ಲ್ಲಿ ಸಂಪೂರ್ಣ ಹತೋಟಿಯಲ್ಲಿದ್ದು ತಕ್ಷಣಕ್ಕೆ ಕ್ವಾರಂಟೈನ್ನಲ್ಲಿ ಸುಮಾರು 130 ಜನ ಇದ್ದು ಅದರಲ್ಲಿ 77ಜನ ಗುಣಮುಖರಾಗುವುದು ಖಚಿತವಾಗಿದೆ. ಕೊರೊನಾ ಸೋಂಕು ನಿವಾರಣೆಗೆ ಅಯುಷ್ಮಾನ್ ಚೂರ್ಣವನ್ನು ಸೇವಿಸಿದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.
ಇದೇ ವೇಳೆಯಲ್ಲಿ ಅಶಾ ಕಾರ್ಯಕರ್ತರಿಗೆ ಅಯುಷ್ಮಾನ್ ಚೂರ್ಣವನ್ನು ವಿತರಣೆ ಮಾಡಿದರು. ಮಿಡತೆ ಹಾವಳಿ ಮಾಹಿತಿ ಕೇಳಿ ಬೆಚ್ಚಿ ಬಿದ್ದ ಶಾಸಕರು: ರಾಜ್ಯದ ಕೋಲಾರಕ್ಕೂ ಮಿಡತೆ ಹಾವಳಿ ಬಂದಿದ್ದು ಸ್ವತಃ ಶಾಸಕರು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯಿಂದ ಇದರ ಬಗ್ಗೆ ಮಾಹಿತಿ ಪಡೆದ ಶಾಸಕರು ಮಿಡತೆ ಹಾವಳಿಎದುರಿಸುವ ಬಗ್ಗೆ ಅಧಿಕಾರಿಗಳು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು.ಅದರೆ ಮಿಡತೆ ಹಾವಳಿ ನಿಯಂತ್ರಣ ಅಸಾಧ್ಯ, ಮರ ಗಿಡ ಮಾತ್ರವಲ್ಲದೆ ವಿದ್ಯುತ್ ಕಂಬಗಳನ್ನು ಕೂಡ ಹತ್ತಿ ಕೃಷಿ ಬೆಳೆಯನ್ನು ನಾಶಪಡಿಸುತ್ತವೆ ಮಿಡತೆ ರೈತರ ಪಾಲಿಗೆ ಕೊರೊನಾ ಸೋಂಕಿಗಿಂತ ಅಪಾಯವಾಗದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳ ಈ ಬಗ್ಗೆ ತಜ್ಞರ ಸಲಹೆಗಳು ಪಡೆದು ಅವುಗಳು ನಮ್ಮ ತಾಲ್ಲೂಕು ಬರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ ಅಧ್ಯಕ್ಷ ಲೋಕೇಶ್. ಉಪಾಧ್ಯಕ್ಷೆ ರತ್ನಮ್ಮ ಅಶ್ವತ್ಥನಾರಾಯಣಗೌಡ, ಸದಸ್ಯರಾದ ನಾರಪ್ಪರೆಡ್ಡಿ ರಾಮಬಾಬು, ಇಡಗೂರು ನರಸಿಂಹಮೂರ್ತಿ, ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.