(ವಿಶ್ವ ಕನ್ನಡಿಗ ನ್ಯೂಸ್) : ಓವರ್ಸಿಸ್ ಕಾಂಗ್ರೆಸ್ ಏರ್ಪಡಿಸಿದ ಮೇರಾ ಭಾರತ್ ಮಹಾನ್ ಎನ್ನಾರೈ ಸೀರೀಸ್ ಝೋಮ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಮುಖ್ಯ ಕೇಂದ್ರಬಿಂದು ಕೆಪಿಸಿಸಿ ಘಟಕದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರು ಅನಿವಾಸಿ ಕನ್ನಡಿಗರನ್ನೊಳಗೊಂಡ ಅನಿವಾಸಿ ಭಾರತೀಯರೊಂದಿಗೆ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅನಿವಾಸಿ ಭಾರತೀಯರೆಂದರೆ ದೇಶಕ್ಕೆ ಅಂಬಾಸಿಡರ್ ಗಳಿದ್ದಂತೆ ಎಲ್ಲಾ ಸಮಯದಲ್ಲೂ ತಾಯಿನಾಡಿಗೆ ಕೊಡುಗೆ ಮತ್ತು ಹಿತಾಸಕ್ತಿ ಕಾಪಾಡಿಕೊಂಡು ಬಂದವರು ಆದ್ದರಿಂದ ಕೋವಿಡ್ ಕಾಲದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಸಹಕರಿಸುವ ಎಲ್ಲಾ ಭರವಸೆಯನ್ನಿತ್ತರು ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಂದರ್ಶನ ವಿಸಾ , ಗರ್ಭಿಣಿಯರು ಸೇರಿದಂತೆ ರೋಗಿಗಳು ಹಾಗೂ ಕೆಲಸ ಕಳಕೊಂಡವರಿಗೆ ಕೂಡಲೇ ಊರಿಗೆ ಪ್ರಯಾಣ ಬೆಳೆಸಲು ಸಹಕಾರಿಯಾಗುವಂತೆ ವಿಮಾನದ ಶೆಡ್ಯೂಲ್ ಇನ್ನಷ್ಟು ಹೆಚ್ಚಿಸಲು ಒತ್ತಡ ತರುಹುದಾಗಿ ತಿಳಿಸಿದರು.
ಓವರ್ಸಿಸ್ ಕಾಂಗ್ರೆಸ್ ಚೇರ್ಮನ್ ಶ್ಯಾಮ್ ಪೆಟ್ರಡಾ, ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ, ಓವರ್ಸಿಸ್ ಕಾಂಗ್ರೆಸ್ ಕಾರ್ಯದರ್ಶಿ ಹಿಮಾಂಶು ವ್ಯಾಸ್, ಕನ್ವಿನರ್ ಮನ್ಸೂರ್ ಪಲ್ಲೂರ್ ನವರು ಮಾತನಾಡಿ ಸೂಕ್ತ ಸಲಹೆಯನ್ನು ನೀಡಿದರು. ಓವಸೀಸ್ ಕಾಂಗ್ರೆಸ್ ಸೌದಿ ಘಟಕದ ಪ್ರಮುಖರು ಉದ್ಯಮಿ ಶಕೀಲ್ ಅಬ್ದುಲ್ , ಮಹಮ್ಮದ್ ಆಸಿಫ್, ಓವರ್ಸೀಸ್ ಕಾಂಗ್ರೆಸ್ ದುಬೈ ಪ್ರತಿನಿಧಿಗಳಾದ ಅನುರ ಮಥಾಯಿ, ಅನ್ವರ್ ಮಾಣಿಲ, ಡಾ. ಆರಿಸ್, ಫಹದ್ ಮುಳೂರು, ಶಿವಕುಮಾರ್, ಸನದ್ ರೆಹ್ಮಾನ್ ಹಾಗೂ ಮಹಮ್ಮದ್ ಮನ್ಸೂರ್ ಬಹರೈನ್ ಇಕ್ಬಾಲ್ ಕಾವೂರ್ ಮತ್ತಿತರರು ಅಲ್ಲದೆ ಅಮೆರಿಕ, ಕೆನಡಾ, ಜಪಾನ್ ನ ಓವರ್ಸೀಸ್ ಕಾಂಗ್ರೆಸ್ ಪ್ರತಿನಿಧಿಗಳು ಪಾಲ್ಗೊಂಡರು. ಸೊಫಿಯ ಸಂವಾದ ನಿರೂಪಿಸಿದರು ಮನ್ಸೂರ್ ಬಹರೈನ್ ವಂದಿಸಿದರು , ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಪ್ರಮುಖರಾದ ನಟರಾಜ್ ಗೌಡ , ಲಾವಣ್ಯ ಬಲ್ಲಾಳ್ , ಮಹಮದ್ ನಾಲಪಾಡ್ ಸಂವಾದಕ್ಕೆ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.