ಸಕಲೇಶಪುರ (www.vknews.com) : ಮುಸ್ಲಿಂ ಮುಖಂಡರೊಬ್ಬರ ಮೇಲೆ ರಾಜಕಾರಣಿಯೊಬ್ಬರ ಪ್ರಚೋದನೆಯಿಂದ ದಲಿತ ವ್ಯಕ್ತಿಯ ಮೂಲಕ ದಾಖಲಾಗಿರುವ ಮೊಕದ್ದಮೆ ಇಬ್ಬರ ವೈಯಕ್ತಿಕ ವಿಚಾರವಾಗಿದ್ದು ಇದು ದಲಿತ ಮತ್ತು ಮುಸ್ಲಿಂ ಸಾಮರಸ್ಯಕ್ಕೆ ಈ ಪ್ರಕರಣ ಕಾರಣವಾಗಬಾರದು ಎಂದು ದಲಿತ ಮುಖಂಡರಾದ ದೋಡ್ಡಯ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತ ಮತ್ತು ಮುಸ್ಲಿಂ ಸಮರಸ್ಯ ತಾಲೂಕಿನಲ್ಲಿ ಉತ್ತಮವಾಗಿದೆ. ಈ ಬಾಂಧವ್ಯವನ್ನು ನಡೆಸಲು ಕೆಲ ವ್ಯಕ್ತಿಗಳು ಮುಂದಾಗಿದ್ದಾರೆ ಎಂದರು.
ಪುರಸಭೆಯ ಮಾಜಿ ಅಧ್ಯಕ್ಷ ಸೈಯದ್ ಮುಫೀಸ್ ಮತ್ತು ನಿವೃತ್ತ ಯೋಧ ಧರ್ಮಪ್ಪ ಇವರುಗಳು ಮಧ್ಯೆ ವೈಯಕ್ತಿಕ ಕಾರಣಕ್ಕಾಗಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಪ್ರಕರಣದಲ್ಲಿ ಮುಪೀಜ್ ತಪ್ಪು ಮಾಡಿದ್ದರೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ ಆದರೆ ರಾಜಕಾರಣಿಗಳು ಮಧ್ಯಪ್ರವೇಶಿಸಿ ಎರಡು ಸಮುದಾಯದ ನಡುವೆ ಬಿರುಕು ಮಾಡುವುದು ಸರಿಯಲ್ಲ ಎಂದರು.
ಮುಸ್ಲಿಮರು ನಮ್ಮ ಶತ್ರುಗಳಲ್ಲ, ಸಮಾಜದ ವಿರೋಧಿಗಳಲ್ಲ ನಾವು ಮುಸ್ಲಿಮರ ವಿರೋಧಿಗಳಲ್ಲ ತಾಲೂಕಿನಲ್ಲಿ ಮುಸ್ಲಿಮರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಕಲ್ಪನೆಗೆ ಒಳಗಾಗಬೇಡಿ ಎನ್ನುತ್ತ ಮತ್ತು ಮುಸ್ಲಿಮ್ ಮುಖಂಡರಲ್ಲಿ ಮನವಿ ಮಾಡಿದರು.
ದಲಿತ ಮುಖಂಡ ದೇವರಾಜ್ ಮಾತನಾಡಿ, ಸಕಲೇಶಪುರದ ದಲಿತ ಮತ್ತು ಮುಸ್ಲಿಮ್ ನಡುವಿನ ಸಂಬಂಧ ಐತಿಹಾಸಿಕವಾಗಿದ್ದು ಇಲ್ಲಿಯವರೆಗೆ ಒಂದೇ ಒಂದು ಪ್ರಕರಣ ಜಾತಿ ದೌರ್ಜನ್ಯ ಕಾಯ್ದೆಯ ಅಡಿ ದಾಖಲಾಗಿಲ್ಲ ನಮ್ಮ ಸಾಮಾಜಿಕ ಜೀವನದಲ್ಲಿ ಇಂತಹ ಘಟನೆಯನ್ನು ನಾವು ಕೇಳಿಲ್ಲ ಎಂದರು.
ತಾಲೂಕಿನ ದಲಿತ ಮುಖಂಡರಲ್ಲಿ ಧರ್ಮಪ್ಪ ರವರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ವಿನಿಮಯ ಮಾಡಿಲ್ಲ ಹೀಗಿದ್ದರೂ ಖುದ್ದು ನಾನೇ ವಿಷಯವನ್ನು ತನ್ನ ಅವರಲ್ಲಿ ಪ್ರಸ್ತಾಪಿಸಿದರು ಸಕಾರತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ ದಲಿತ ಸಂಘಟನೆಗಳ ಬೆಂಬಲವನ್ನು ಇವರು ಕೋರಿಲ್ಲ ಈ ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪುಕಲ್ಪನೆಗಳು ಮೂಡಬಾರದು ದಲಿತ ಮತ್ತು ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆಯಾಗಬಾರದು ಎರಡು ಸಮುದಾಯದ ಬಾಂಧವ್ಯ ಉತ್ತಮವಾಗಿರಬೇಕು ಎಂಬ ಕಾರಣಕ್ಕಾಗಿ ಎರಡು ಸಮುದಾಯವಾದ ಮುಖಂಡರಲ್ಲಿ ಮಾಡಿಕೊಳ್ಳುತ್ತಿರುವಾಗ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ದಲಿತ ಮುಖಂಡರಾದ ನಲ್ಲುಲ್ಲಿ ಈರಯ್ಯ,ಕುಮಾರಯ್ಯ, ಮಳಲಿ ಶಿವಣ್ಣ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.