ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ):ತಾಲೂಕಿನ ವಿವಿಧೆಡೆ ಕ್ವಾರಂಟೈನ್ನಲ್ಲಿದ್ದು ವರದಿ ಬರುವ ಮುಂಚೆ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಮನೆಗೆ ಮರಳಿದ ಮರುದಿನವೇ ಕೋವಿಡ್-19 ಸೋಂಕು ದೃಢ ಪಟ್ಟ ವ್ಯಕ್ತಿಗಳ ಮನೆಯ 200 ಮೀಟರ್ ವ್ಯಾಪ್ತಿಯಲ್ಲಿ ಸೋಂಕು ಕಂಡು ಬರುತ್ತಿದ್ದೂ ಸೀಲ್ ಡೌನ್ ಮಾಡಲಾಗಿದೆ.ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಕೋಡಿಯಲ್ಲಿ ಸೋಂಕು ದೃಢ ಪಟ್ಟ ವ್ಯಕ್ತಿಯ ಮನೆಯ ಪರಿಸರವನ್ನು ಸೀಲ್ ಡೌನ್ ಮಾಡಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಸ್ರೂರು, ನೇರಳಕಟ್ಟೆ, ಹಳ್ನಾಡು ,ಚೊನ್ಗಿ ಗುಡ್ಡೆ ಭಾಗದಲ್ಲಿನ ವ್ಯಕ್ತಿಗಳಲ್ಲಿ ಸೋಂಕು ದೃಢ ಪಟ್ಟಿರುವುದರಿಂದ ಅವರ ಮನೆಯ 200 ಮೀಟರ್ ಪರಿಸರವನ್ನು ಸೀಲ್ ಡೌನ್ ಮಾಡಲಾಗಿದೆ.ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯ ವಂಡಾರು ಗ್ರಾಮದ ಮಾರ್ವಿ, ಕೋಟ ಠಾಣೆ ವ್ಯಾಪ್ತಿಯ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಬಾರಿಕೆರೆಯ 100 ವ್ಯಾಪ್ತಿಯ 12 ಮನೆ ಪರಿಸರವನ್ನು ಸೀಲ್ಡೌನ್ ಮಾಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.