ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್): ಇಂಡಿಯನ್ ಸೋಶಿಯಲ್ ಫಾರಂನ ಪ್ರಯತ್ನದ ಫ಼ಲವಾಗಿ ಕಾಲು ಮುರಿತಕ್ಕೊಳಗಗಿದ್ದ ಬೆಂಗಳೂರು ಮೂಲದ ಅನಿವಾಸಿ ಕನ್ನಡಿಗರೊಬ್ಬರು ತವರಿಗೆ ಮರಳಲು ಸಾಧ್ಯವಾಗಿದೆ.
ಸೌದಿ ಅರೇಬಿಯಾದ ರಿಯಾದ್ ನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಮೆಹ್ಬೂಬ್ ಸುಬ್ ಹಾನಿ ಫ಼ಝಲುರ್ರಹ್ಮಾನ್ ಎಂಬವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿದ್ದು ಎರಡೂ ಕಾಲು ಮುರಿತಕ್ಕೊಳಗಾಗಿದ್ದು, ಸಮರ್ಪಕ ಚಿಕಿತ್ಸೆ ಮತ್ತು ಉಪಚಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಅವರನ್ನು ಹೇಗಾದರೂ ಮಾಡಿ ತವರಿಗೆ ತಲುಪಿಸುವಂತೆ ತವರಿನಲ್ಲಿರುವ ಅವರ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫಾರಂ, ಸೌದಿ ಅರೇಬಿಯಾಕ್ಕೆ ಮನವಿ ಮಾಡಿದ್ದರು.
ತಕ್ಷಣವೇ ಕಾರ್ಯಪ್ರವೃತ್ತವಾದ ಇಂಡಿಯನ್ ಸೋಶಿಯಲ್ ಫಾರಂ, ಫ಼ಝಲುರ್ರಹ್ಮಾನ್ ರನ್ನು ಸಂಪರ್ಕಿಸಿತ್ತು. ಅವರು ಮೂರು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಗೆ ಬಂದಿದ್ದು, ಎರಡು ತಿಂಗಳ ಹಿಂದೆ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ನಷ್ಟವನ್ನು ನಿಯಂತ್ರಿಸುವ ಕ್ರಮದ ಭಾಗವಾಗಿ ಕಂಪೆನಿ ಕೆಲಸದಿಂದ ತೆಗೆದು ಹಾಕಿತ್ತು.
ಬಳಿಕ ಮೇ 20, 2020ರಂದು ತವರಿಗೆ ಮರಳಲು ರಾಯಭಾರಿ ಕಚೇರಿ ಅನುಮೋದನೆ ನೀಡಿದ್ದು ಪ್ರಯಾಣ ಟಿಕೆಟ್ ಕಾಯ್ದಿರಿಸಲಾಗಿದ್ದರೂ ಎಕ್ಸಿಟ್- ರಿಎಂಟ್ರಿ ಪತ್ರ ಸಿದ್ಧವಾಗದ ಕಾರಣದಿಂದ ಅವರ ಪ್ರಯಾಣವನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ನಂತರ ಎಕ್ಸಿಟ್ ರಿಎಂಟ್ರಿ ಪತ್ರವನ್ನು ಕಂಪೆನಿ ನೀಡಿದ್ದರೂ ಪ್ರಯಾಣಕ್ಕೆ ರಾಯಭಾರಿ ಕಚೇರಿಯ ಅನುಮೋದನೆ ಅಗತ್ಯವಿತ್ತು.
ಈ ಕುರಿತು ಇಂಡಿಯನ್ ಸೋಶಿಯಲ್ ಫಾರಂ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಫ಼ಝಲುರ್ರಹ್ಮಾನ್ ರವರ ಪರಿಸ್ಥಿಯನ್ನು ಸಂಪೂರ್ಣ ವೈದ್ಯಕೀಯ ವರದಿಗಳೊಂದಿಗೆ ಮನವರಿಕೆ ಮಾಡಿ ಮೇ 31ರ ರಿಯಾದ್-ಹೈದರಾಬಾದ್ ವಿಮಾನದ ಮೂಲಕ ವಾಪಾಸಾತಿಗೆ ಅವಕಾಶ ಮಾಡುವಂತೆ ಕೋರಿಕೊಂಡಿತ್ತು. ರಾಯಭಾರಿ ಕಚೇರಿ ಇದನ್ನು ಅನುಮೋದಿಸಿದ್ದು ಮೇ 31 ರಂದು ಫ಼ಝಲುರ್ರಹ್ಮಾನ್ ರವರು ಹೈದರಾಬಾದ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.