ಮಂಗಳೂರು (www.vknews.com) : ಸೀಲ್ ಡೌನ್ ಜಾರಿಯಾದ ಬೋಳಿಯಾರ್ ಕಾಪಿಕಾಡ್ ಪ್ರದೇಶಕ್ಕೆ, ಮೊದಲು ನೆಗೆಟೀವ್ ವರದಿಯನ್ನು ನೀಡಿದ ಅಧಿಕಾರಿಗಳು ಬೇಜವಾಬ್ದಾರಿತನ ತೋರಿಸಿದ್ದಾರೆ. ನೆಗೆಟೀವ್ ವರದಿಯನ್ನು ತಿಳಿದು ಸಂತಸದಿಂದಿದ್ದ ಸಂತ್ರಸ್ತರಿಗೆ ಅಧಿಕಾರಿಗಳು ನೀಡಿದ ಬಿಗ್ ಶಾಕ್ ನಿಜಕ್ಕೂ ನಮ್ಮ ವೈದ್ಯಕೀಯ ವ್ಯವಸ್ಥೆಯ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ. ಇಂಥಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ (ರಿ.) ಇದರ ಅಧ್ಯಕ್ಷ ಇಸ್ಮಾಈಲ್ ಶಾಫಿ ಬಬ್ಬುಕಟ್ಟೆ ಆಗ್ರಹಿಸಿದ್ದಾರೆ.
ಈಗೀಗ ಹಲವೆಡೆ ಕಂಡುಬಂದಂತೆ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ, ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡದಿರುವುದು ಮುಂತಾದ ಬೇಜವಾಬ್ದಾರಿತನವನ್ನು ಬಿಟ್ಟು ಸೀಲ್ ಡೌನ್ ಜಾರಿಯಾದ ಪ್ರದೇಶದ ಮನೆಗಳಿಗೆ ಮಾನವೀಯತೆಯ ನೆಲೆಯಲ್ಲಿ ಅವರಿಗೆ ಬೇಕಾದ ರೇಶನ್, ಅಗತ್ಯ ಸಾಮಗ್ರಿಗಳನ್ನು ಸರ್ಕಾರ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಖ್ಯಾತ ಹಿರಿಯ ಪತ್ರಿಕೋದ್ಯಮಿ, ಸಾಹಿತಿ, ಪತ್ರಕರ್ತ ಡಿ.ಐ. ಅಬೂಬಕರ್ ಕೈರಂಗಳ, ಉಪಾಧ್ಯಕ್ಷ ಮುನೀರ್ ಅಸೈಗೋಳಿ, ಸಂಚಾಲಕ ಸಲೀಂ ಮೆಗಾ, ಪ್ರಧಾನ ಕಾರ್ಯದರ್ಶಿ ನಿಸಾರ್ ಮಾರಿಪಳ್ಳ, ಕಾರ್ಯದರ್ಶಿ ಮುಹಮ್ಮದಾಲಿ ವಳವೂರು, ಕೋಶಾಧಿಕಾರಿ ಸಿದ್ದೀಕ್ ಕೊಳಕೆ, ಸಂಘಟನಾ ಕಾರ್ಯದರ್ಶಿ ಕರೀಂ ಬೊಳ್ಳಾಯಿ, ಕಾನೂನು ಕಾರ್ಯದರ್ಶಿ ಆರ್ಕೆ ಮದನಿ, ಅಬ್ದುಲ್ ಅಝೀಝ್ ಝುಹ್ರಿ ಪುಣಚ, ಮಾಧ್ಯಮ ಕಾರ್ಯದರ್ಶಿ ಕುರ್ನಾಡು ಸಖಾಫಿ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.