(www.vknews.com) : ರೈತನ ಸಂಕಷ್ಟ ಒಂದೇ ಎರಡೇ ಸಾಲ ಬಾದೆ , ಕೃಷಿ ವೆಚ್ಚ , ಬೆಳೆಗೆ ಸೂಕ್ತ ಬೆಲೆ ದೊರಕದೆ ಇರುವುದು ಒಮ್ಮೆ ಅತಿವೃಷ್ಟಿ , ಮತ್ತೊಮ್ಮೆ ಅನಾವೃಷ್ಟಿ , ನೆರೆಹಾವಳಿ
ಅದರಲ್ಲಿ ಜಾಗತೀಕರಣ , ಖಾಸಗೀಕರಣ ಅತ್ಯಂತ ದುಬಾರಿಯಾದ ಜೀವನ ವೆಚ್ಚ ಇವೆಲ್ಲವೂ ರೈತನನ್ನು ಸಂಕಷ್ಟಕ್ಕೆ ತಳ್ಳಿರುವಾಗ ಕೃಷಿಕ ಆರ್ಥಿಕ ಸಂಕಷ್ಟದಿಂದ ಹೊರ ಬರದಂತಾಗಿದೆ ಪ್ರತಿ ವರ್ಷವೂ ರೈತನದ್ದು ಮುಗಿಯದ ಬವಣೆಯೇ.
ಕರೋನಾ ಹಾಗೂ ಲಾಕ್ದೌನ್ ಬಿಕ್ಕಟ್ಟಿನಲ್ಲಿ ದೇಶಕ್ಕೆ ಮಿಡತೆಗಳು ಸವಾಲುವೊಡ್ಡಿವೆ. ಕರ್ನಾಟಕದಲ್ಲಿ ಈಗಾಗಲೇ ಅಲಲ್ಲಿ ಮಿಡತೆಗಳು ದಾಂಗುಡಿ ಇಡುತ್ತಿರುವುದು ರೈತನಿಗೆ ಆತಂಕ ಸೃಷ್ಟಿಸಿವೆ..
ಈ ಮಿಡತೆಗಳ ಹೆಸರು ಡೆಸರ್ಟ್ ಲೋಕೇಸ್ಟ್ ಅಂದರೆ ಮರುಭೂಮಿಯ ಒಣ ಪ್ರದೇಶದಲ್ಲಿ ಬದುಕುವ ಕೀಟಗಳಾಗಿವೆ ಇವು ಸೂರ್ಯಭಿಮುಖವಾಗಿ ಚಲಿಸುತ್ತವೆ.. ಒಂದು ಹಿಂಡಿನಲ್ಲಿ 5 ಕೋಟಿ ಮಿಡತೆಗಳಿರುತ್ತವೆ ಹಾಗೂ ಒಂದೇ ಬಾರಿಗೆ ಧಾಳಿಯು ಮಾಡುತ್ತವೆ ಇವು ಮರುಭೂಮಿಯಂತಹ ಪ್ರದೇಶದಲ್ಲಿಯೇ ಹೆಚ್ಚು ಸಂತಾನೋತ್ಪತ್ತಿ ಮಾಡುತ್ತವೆ ಒಂದು ಕೀಟ ಕನಿಷ್ಠ 600 ಮೊಟ್ಟೆ ಇಡುತ್ತದೆ ಎಂದು ತಜ್ಞರು ಹೇಳುತ್ತಾರೆ..
ಕರೋನಾದಿಂದ ಆರ್ಥಿಕವಾಗಿ ಕುಸಿದ ಭಾರತಕ್ಕೆ ಕೃಷಿ ವಲಯದ ಮೇಲೆ ಅತ್ಯಂತ ಭರವಸೆ ಇದಿದ್ದು ಈ ಒಂದು ಭಾರವಸೆಯೂ ದೇಶ ಹಾಗೂ ರೈತನ ಅರ್ಥಿಕ ಪರಿಸ್ಥಿತಿಯ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಕರೋನಾ ಸೋಂಕಿನಿಂದ ಹೈರಾಣಗಿದೆ ಇದೀಗ ಮತ್ತೊಂದು ವಿಪತ್ತು ದೇಶಕ್ಕೆ ಎರಗಿದ್ದು ಸಾವಿರಾರು ಕೋಟಿ ಮೌಲ್ಯದ ಆಹಾರ ಬೆಳೆಗಳನ್ನು ನಾಶ ಮಾಡುವ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ರಾಕ್ಷಸ ಸಂತತಿಗೆ ಸೇರಿದ ಮಿಡತೆಗಳ ಹಿಂಡು ಇದೀಗ ರೈತ ಬೆಳೆದ ಬೆಳೆಗೆ ಮುತ್ತಿಗೆ ಹಾಕುತ್ತಿರುವುದು ಆತಂಕದ ವಿಚಾರವಾಗಿದ್ದು ಇದರಿಂದ ಆಹಾರದ ಬಿಕ್ಕಟ್ಟು ತಲೆದೋರುವ ಹಾಗೂ ಹಸಿವು ಎಂಬ ಅತೀ ದೊಡ್ಡ ಅಪಾಯ ಎದುರಿಸುವ ಕಾಲವೂ ಬರಬಹುದು .
ಮಿಡತೆಗಳು ಹಸಿರು ಬೆಳೆ , ಧವಸ , ಧಾನ್ಯ , ಗಿಡ , ಮರಗಳನ್ನೆಲ್ಲಾ ತಿಂದು ಹೊಲವನ್ನು ಮಸಾಣ ಮಾಡುತ್ತವೆ ಒಂದು ಕಿಲೋಮೀಟರ್ ವ್ಯಾಪ್ತಿಯ ಒಂದು ಮಿಡತೆ ದಂಡು ಒಂದು ದಿನಕ್ಕೆ ಸುಮಾರು 35 ಸಾವಿರ ಜನರು ಊಟ ಮಾಡುವಷ್ಟು ಆಹಾರವನ್ನು ತಿಂದು ಹಾಕುತ್ತಿರುವುದು ಆತಂಕದ ವಿಚಾರ ..
ಕೆ.ಜಿ.ಸರೋಜಾ ನಾಗರಾಜ್
ಲಾಕ್ದೌನ್ ನಿಂದ ಸಾಕಷ್ಟು ನಷ್ಟ ಅನುಭವಿಸಿರುವ ಅನ್ನಧಾತ ಈಗ ಮಿಡತೆಗಳ ದಾಳಿಯಿಂದ ಬವಣೆಯನ್ನು ಕಾಣಬೇಕಾಗಿದೆ. ಮುಂಗಾರಿಗೂ ಮೊದಲು ಮಿಡತೆ ಸಂತತಿಯನ್ನು ನಿಯಂತ್ರಿಸದಿದ್ದಲ್ಲಿ ಆಹಾರ ಉತ್ಪಾದನೆಯೇ ಕಡಿಮೆ ಆಗಲಿದೆ ಅದರಲ್ಲೂ ಆಹಾರ ಧಾನ್ಯ ,ಎಣ್ಣೆ ಕಾಳುಗಳು , ಹತ್ತಿ , ಹಣ್ಣು , ತರಕಾರಿ ಬೆಳೆಗಳು ನಾಶವಾಗುವ ಸಂಭವವೂ ಇದೆ ..
1993 ರಲ್ಲಿ ಮಿಡತೆಗಳಿಂದ ಭಾರತ ಅತೀ ದೊಡ್ಡ ಮಟ್ಟದ ಸಂಕಷ್ಟ ಎದುರಿಸಿದ್ದು ನೆನಪಿಸಿಕೊಳ್ಳಬಹುದು. ಈಗ ಅದಕ್ಕಿಂತ ದೊಡ್ಡ ಮಟ್ಟದ ನಷ್ಟವನ್ನು ರೈತ ಅನುಭವಿಸ ಬೇಕಾಗಬಹುದು.. ಹೀಗೆ ದಿನಾ ಸಾಯುವುದಕ್ಕಿಂತ ರೈತ ಒಮ್ಮೆಲೇ ಸಾಯಬಾರದೆ ಎಂದು ಯೋಚಿಸುವ ಮೊದಲು ಸರಕಾರ ಮಿಡತೆಗಳನ್ನು ನಿಯಂತ್ರಿಸಬೇಕಾಗಿದೆ.
ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.