ಸೌದಿ ಅರೇಬಿಯಾ(ವಿಶ್ವಕನ್ನಡಿಗ ನ್ಯೂಸ್): ಮಕ್ಕಾದ ಸಿತ್ತೀನಿನ ಬಿಹಾನಿ ಸೂಪರ್ ಮಾರ್ಕೆಟ್ ನಲ್ಲಿ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಮೂಡಿಗೆರೆ ತಾಲೂಕಿನ ಬಣಕಲ್ ನಿವಾಸಿ ಶೇಖ್ ಮುಹಮ್ಮದ್ ರವೂಫ್ (65.ವ) 30/05/2020 ರಂದು ಅಲ್ಪಕಾಲದ ಅಸೌಖ್ಯದಿಂದ ಮಕ್ಕಾದ ಅಲ್ ನೂರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮರಣ ವಾರ್ತೆ ಕೇಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಜಿದ್ದಾ ಝೋನ್ ಹಾಗೂ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ಇಲಾಖೆ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ ಹಾಗೂ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಜಿದ್ದಾ ವೆಸ್ಟ್ ಇದರ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಗಬ್ಗಲ್ ರವರು ಜತೆಯಾಗಿ ಎಲ್ಲಾ ದಾಖಲೆ ಪತ್ರಗಳನ್ನು ಕ್ಲಿಪ್ತ ಸಮಯಕ್ಕೆ ಸಂಗ್ರಹಿಸಿ ಸೌದಿ ಸರ್ಕಾರಕ್ಕೆ ಸಲ್ಲಿಸಿದ ನಂತರ ಮೃತದೇಹವನ್ನು ಇವರ ಕೈಗೆ ಹಸ್ತಾಂತರ ಮಾಡಿದರು ಇವರಿಬ್ಬರು ಮರಣ ವಾರ್ತೆಯ ಪ್ರಾರಂಭದಿಂದ ದಫನ್ ಪ್ರಕ್ರಿಯೆ ಮುಗಿಯುವರೆಗೆ ದಫನ್ ನ ಎಲ್ಲಾ ವಿಧಿ ವಿಧಾನಗಳಿಗೆ ಸಹಕರಿಸಿದರು.
ಮೃತರ ಕುಟುಂಬ ಬಂದು-ಬಳಗದವರಿಗೆ ದುಃಖವನ್ನು ಸಹಿಸುವ ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ. ಮೃತರ ಮಗ್ಫಿರತ್ಗಾಗಿ ದುಆ ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಬೇಕಾಗಿ ಕುಟುಂಬವು ವಿಜ್ಞಾಪಿಸಿದೆ.
ವರದಿ: ಇಕ್ಬಾಲ್ ಕಕ್ಕಿಂಜೆ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.