ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕೊರೋನಾ ತಡೆಗಟ್ಟಲು ಇಲ್ಲಿನ ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿರುವಾಗ ಸರ್ಕಾರಿ ಪ್ರೌಢಶಾಲೆ ಗಾಂಧಿನಗರ, ಸುಳ್ಯ ವಿದ್ಯಾರ್ಥಿಯಾದ ಸುಳ್ಯ ಇಕ್ಬಾಲ್ ಜಿ ಎ ರವರ ಪುತ್ರ ಮೊಹಮ್ಮದ್ ಶಿಬಿಲಿ ತನ್ನ ಕೈ ಚಲಕದ ಮೂಲಕ ಸ್ಯಾನಿಟೈಝರ್ ಸ್ಟ್ಯಾಂಡ್ ತಯಾರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸ್ಟ್ಯಾಂಡ್ನ ಪ್ರಾತ್ಯಕ್ಷಿಕೆ ಕೊರೋನಾ ಮಹಾಮಾರಿಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮತ್ತು ಕೈಯನ್ನು ಆವಾಗವಾಗ ಸ್ಯಾನಿಟೈಝ್ ಮಾಡುವುದು ಬಹಳ ಮುಖ್ಯ. ಹೀಗಾಗಿ ಕಾಲಿನ ಮೂಲಕ ಅದುಮಿ ಸ್ಯಾನಿಟೈಝರನ್ನು ಕೈಗೆ ಹಾಕಿ ಕೈಯನ್ನು ಶುಚಿಯಾಗಿ ಇರಿಸುವುದು ಈ ಸ್ಟ್ಯಾಂಡ್ನ ವೈಶಿಷ್ಟ್ಯ.
“ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಎಲ್ಲರೂ ಒಂದೇ ಬಾಟಲಿಯ ಸ್ಯಾನಿಟೈಝರನ್ನು ಬಳಸುವ ಸಂದರ್ಭದಲ್ಲಿ ಇತರರು ಮುಟ್ಟಿದ ಅದೇ ಸ್ಯಾನಿಟೈಝರ್ ಬಾಟಲ್ ನಾವು ಮುಟ್ಟುವುದರಿಂದ ವೈರಸ್ ಹರಡಲು ಸಾಧ್ಯತೆಯಿರುವುದರಿಂದ ನಾನು ಇಂತಹ ಒಂದು ವಿಭಿನ್ನ ರೀತಿಯ ಯೋಚನೆಯನ್ನು ಮಾಡಿ ಈ ಉಪಕರಣವನ್ನು ತಯಾರಿಸಿದೆ” ಎನ್ನುತ್ತಾರೆ ಮೊಹಮ್ಮದ್ ಶಿಬಿಲಿ.
ತಾನು ವಿನೂತನ ನಿರ್ಮಿಸಿದ ಸ್ಟ್ಯಾಂಡನ್ನು ಕ್ಯಾಂಪಸ್ ಫ್ರಂಟ್ ಸುಳ್ಯ ನಾಯಕರೊಂದಿಗೆ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕೊಡುಗೆಯಾಗಿ ನೀಡಿದರು ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಮಹಾದೇವ್ರವರು ಮಾತನಾಡಿ ವಿದ್ಯಾರ್ಥಿಯಿಂದ ಇದೊಂದು ವಿಶಿಷ್ಠ ಸಾಧನೆ, ಮುಂದಿನ ದಿನಗಳಲ್ಲಿ ಉತ್ತಮ ಸಂಶೋಧಕ, ವಿಜ್ಞಾನಿಯಾಗಿ ಮೂಡಿ ಬರಲಿ ಎಂದು ಹಾರೈಸಿ, ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಕ್ಯಾಂಪಸ್ ಫ್ರಂಟ್ ಸುಳ್ಯ ಅಧ್ಯಕ್ಷರಾದ ಅರ್ಫೀದ್ ಅಡ್ಕಾರ್,ಕಾರ್ಯದರ್ಶಿ ಸಾಜಿದ್ ಸುಳ್ಯ, ಸದಸ್ಯರಾದ ಶಮಾಲ್ ಸುಳ್ಯ, ಅಜ್ನಾಸ್ ಪೈಚಾರ್ ರವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.