(ವಿಶ್ವ ಕನ್ನಡಿಗ ನ್ಯೂಸ್): ಅದೇನೋ ಗೊತ್ತಿಲ್ಲ ಇಂತಹ ದುರಿತ ಕಾಲದಲ್ಲೂ ಕೋಮುವಾದದ ಜೀವನಾಡಿ ಮಿಡಿಯುತ್ತಿದೆಯೆಂದರೆ ಕಾರಣ ಏನಿರಬಹುದು ಎಂದು ನಾಡಿನ ಸಮಾನ ಮನಸ್ಕರು ಇತ್ತೀಚೆಗೆ ಗಂಭೀರ ಆಲೋಚನೆಗೆ ಬಿದ್ದಿದ್ದು ಸುಳ್ಳಲ್ಲ, ಅಮೇರಿಕಾದ ಅಧ್ಯಕ್ಷ ಟ್ರಂಪ್ ಭೇಟಿಯಿಂದ ಹಿಡಿದು ತಬ್ಲೀಗಿ, ಅಜ್ಮೀರ್, ಅಹಮದಾಬಾದ್, ಮುಂಬಯಿ, ನಮಗೆ ತಿಳಿಯದೇ ಕೆಲ ಮಾಧ್ಯಮಗಳ ಸಹಕಾರದಿಂದ, ಸಾಮಾಜಿಕ ಜಾಲತಾಣಗಳನ್ನು ಸಕ್ರೀಯವಾಗಿ ಬಳಸಿಕೊಂಡು ಫ್ಯಾಸಿಸಂನ್ನೇ ಕಥೆಯನ್ನಾಗಿ ಮಾಡಿ ವಿಜೃಂಭಣೆಯಿಂದ ಬಿಂಬಿಸುತ್ತಾ ಕೋಮುವಾದವನ್ನು ಜೀವಂತವಾಗಿರಿಸುವ ಕೆಲಸವನ್ನು ಕಾಣದ ಮುಖಗಳು ಇಂತಹ ಪರಿಸ್ಥಿಯಲ್ಲೂ ಅಚ್ಚುಕಟ್ಟಾಗಿ ನಿಭಾಯಿಸಿದವು. ಈ ರೀತಿ ಮನಸು-ಮನಸುಗಳ ಮಧ್ಯೆಯಿರುವ ದ್ವೇಷವನ್ನು ಅಳಿಸಿ ಹಾಕುವ ಬದಲು ಕಾಪಾಡುವ ಉದ್ದೇಶವಾದರೂ ಏನಿರಬಹುದು, ಕೊರೋನಾಗೂ ಕೋಮುವಾದಕ್ಕೂ ಏನಾದರೂ ಸಂಬಂಧ ಇದೆಯಾ ಎಂಬುದನ್ನು ಸೂಕ್ಷ್ಮತೆಯಿಂದ ಗಮನಿಸಬೇಕಿದೆ, ಇದಕ್ಕೂ ಮೊದಲು ಇತಿಹಾಸದ ಒಂದು ಘಟನೆ ಉದಾಹರಣೆಯಾಗಿ ನೀವು ಓದಲೇಬೇಕು,
ಕ್ರಿ.ಶ.1916 ಹಿಂದೂಸ್ಥಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿತ್ತು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಗೆ ಹೋರಾಟಗಳು ದಿನೇದಿನೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು ಇಲ್ಲಿನ ಹೋರಾಟಗಳು ಹಿಂದೂಸ್ಥಾನದ ಈಸ್ಟ್ ಇಂಡಿಯಾ ಕಂಪನಿ ಹಾಗೂ ಇದರ ಪ್ರಮುಖ ಆಡಳಿತ ಸ್ಥಾನವಾದ ಇಂಗ್ಲೆಂಡಿನ ಸಂಸತ್ ಭವನವೇ ಅಲ್ಲೋಲಕಲ್ಲೋಲವಾಗಿತ್ತು, ಆಗಲೇ ನೋಡಿ ಈಸ್ಟ್ ಇಂಡಿಯಾ ಕಂಪನಿಯ ದಮನಕಾರಿ ಕಾಯ್ದೆಯೊಂದು ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು, ಅದೇ ರೌಲತ್ ಕಾಯ್ದೆ ಯಾರು ಸ್ವಾತಂತ್ರ್ಯ ಹೋರಾಟ ಎಂದು ಬೀದಿಗಿಳಿಯುತ್ತಿದ್ದರೋ ಅವರ ಅಭಿವ್ಯಕ್ತವನ್ನು ಗೋಲಿಬಾರ್ ಮೂಲಕ ಉತ್ತರಿಸಲಾಗುತ್ತಿತ್ತು ಅದಕ್ಕೊಂದು ಐತಿಹಾಸಿಕ ಉದಾಹರಣೆಯೆಂದರೆ 1919ರ ಜಲಿಯನ್ ವಾಲಾ ಬಾಗ್ ಗೋಲಿಬಾರ್ ಪ್ರಕರಣ. ಇದೇ ರೌಲತ್ ಕಾಯ್ದೆಯನ್ನು ಮುಂದಿಟ್ಟು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ರಕ್ತದಿಂದ ಬ್ರಿಟಿಶರು ಓಕುಳಿಯಾಡಿದ್ದರು.
ಸಂದರ್ಶನವೊದರಲ್ಲಿ ಭಾರತೀಯ ಪತ್ರಕರ್ತ ಇದಕ್ಕೆ ಕಾರಣನಾದ ಜನರಲ್ ಡಯಾರ್ ನನ್ನು ಒಂದು ಪ್ರಶ್ನೆ ಕೇಳಿದ್ದ ಅದೇನೆಂದರೆ ನೀವು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಮುಖ್ಯ ರುವಾರಿಯಾಗಿದ್ದೀರಿ ಇಷ್ಟು ಜನ ಅಮಾಯಕರ ಸಾವಿಗೆ ಕಾರಣಕರ್ತರಾದ ನಿಮಗೆ ಸ್ವಲ್ಪವೂ ಪಶ್ಚಾತ್ತಾಪ ಇಲ್ಲವೇ ? ಡಯಾರ್ : ಖಂಡಿತ ಇಲ್ಲ ನಾವು ಜಾತಿ ಧರ್ಮಗಳ ಮೂಲಕ ಭಾರತೀಯರನ್ನು ಒಡೆದಾಳುತ್ತಿದ್ದೇವು ಆದರೆ ಇವರು ಸ್ವಾತಂತ್ರ್ಯವೆಂಬ ಅಜೆಂಡಾವನ್ನು ಮುಂದಿಟ್ಟುಕೊಂಡು ಜಾತಿ ಧರ್ಮಗಳನ್ನು ಮೀರಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು ಅದು ಈಸ್ಟ್ ಇಂಡಿಯಾ ಕಂಪನಿಯ ಅಳಿವು ಉಳಿವಿನ ಸಮಯವಾಗಿತ್ತು ಹಾಗಾಗಿ ರೌಲತ್ ಕಾಯ್ದೆ ಜಾರಿ ಮಾಡಿ ಧ್ವನಿಯನ್ನು ದಮನಿಸುವುದು ಅನಿವಾರ್ಯವಿತ್ತು. ಎಂಬ ಉತ್ತರ ಆ ಪತ್ರಕರ್ತನಿಗೆ ನಿಜಕ್ಕೂ ಅಶ್ಚರ್ಯವನ್ನುಂಟು ಮಾಡುತ್ತದೆ.
ಕೋರೋನಾದಂತಹ ಸಂದರ್ಭದಲ್ಲೂ ಕೂಡ ಕೋಮುವಾದ ತನ್ನ ಕಬಂಧ ಬಾಹುಗಳು ಚಾಚಿದ ಉದ್ದೇಶವೇ ಓಟ್ ಬ್ಯಾಂಕಿಂಗನ್ನು ಭದ್ರವಾಗಿರಿಸಲೆಂದು ಮತ್ತು ಕಟ್ಟರ್ ಧಾರ್ಮಿಕವಾದಿಗಳಿಗೆ ಸಂತೋಷಪಡಿಸುವ ಸಲುವಾಗಿ ಎಂದು ಬಹಿರಂಗವಾಗಿಯೇ ತಿಳಿದುಬರುತ್ತದೆ, ಆ ಸಂದರ್ಭ ತನ್ನ ಕಟ್ಟರ್ ಓಟುಗಳನ್ನು ಉಳಿಸಲು ಧರ್ಮ-ಧರ್ಮಗಳ ಮಧ್ಯೆ ಬಿರುಕನ್ನು ಇನ್ನಷ್ಟು ದೊಡ್ಡದಾಗಿ ಮಾಡಲು ಕಾರ್ಯತಂತ್ರಗಳು ರೂಪಿಸಿಕೊಂಡಿದ್ದು ಅಮಾನವೀಯ, ಸಾರ್ವಜನಿಕರು ಜಾತಿ ಧರ್ಮ, ಮತ, ಪಂಥಗಳು ಬಿಟ್ಟು ಒಗ್ಗಟ್ಟಾಗಿ ಕೋರೋನಾ ವಿರುದ್ದ ಸಮರ ಸಾರಿದ್ದರು, ಪಕ್ಕದ ಮನೆಯ ಮೆಹೆಬೂಬ ನಿಗೆ ಮಾರಪ್ಪನ ಮನೆಯಿಂದ ಊಟ ಹೋಗುತ್ತಿದ್ದದ್ದು ಹಾಗೂ ರಾಜಣ್ಣನ ಗುಡಿಸಲಿಗೆ ರಹೀಮನ ಅಕ್ಕಿ ಮೂಟೆ ಹೋಗಿದ್ದು ಕಟ್ಟರ್ ಧಾರ್ಮಿಕವಾದಿಗಳಿಗೆ ಸಹಿಸಲಾಗಿರಲಿಲ್ಲ ಅವರಿಗೆ ತಿಳಿದಿತ್ತು ಈ ಒಗ್ಗಟ್ಟು ಭವಿಷ್ಯದಲ್ಲಿ ಒಡೆದಾಳುವಿಕೆ ನೀತಿಯನ್ನು ಬೆಂಡೆತ್ತುವ ಅಸ್ತ್ರವಾಗುತ್ತಿದೆಯೆಂದು, ನೀವು ಇನ್ನೂ ಸೂಕ್ಷ್ಮವಾಗಿ ಗಮನಿಸಿ ಎನ್.ಆರ್.ಸಿ. ವಿರೋಧಿ ಹೋರಾಟಗಳು ಕೂಡ ಇದೇ ಉದಾಹರಣೆಯ ಒಂದು ಭಾಗ, ಆಗಲೂ ದೇಶದ ಜನ ದೊಡ್ಡ ಮಟ್ಟದಲ್ಲಿಯೇ ಒಗ್ಗಟ್ಟು ಪ್ರದರ್ಶಿಸಿದ್ದರು. ನಮ್ಮ ದೇಶ ಯಾವ ಸಮಯದಲ್ಲಿ ಬಿಕ್ಕಟ್ಟಿಗೆ ಸಿಲುಕುತ್ತಿದೆಯೋ ಆ ಸಮಯದಲ್ಲಿ ಕೋಮುವಾದಿಗಳ ಐಟಿ ಸೆಲ್ ತಮ್ಮ ಕೆಲಸಗಳನ್ನು ಮಾನವೀಯ ಮೌಲ್ಯಗಳನ್ನು ಮರೆತು ಮಾಡುತ್ತಿವೆ. ಡಿವೈಡ್ ಅಂಡ್ ರೂಲ್ ಜೊತೆ ಜೊತೆಗೆ ಡೈವರ್ಟ್ ಅಂಡ್ ರೂಲ್ ಕೂಡ ನಡೆಯುತ್ತಿರುವುದು ದುರಂತವೇ ಸರಿ. ಬುದ್ಧ, ಬಸವ, ಶರೀಫರ ಸೌಹಾರ್ದ ಪರಂಪರೆಯನ್ನು ಜಗತ್ತಿನೆಲ್ಲೆಡೆ ಸಾರುವ ಕೆಲಸಗಳು ಎಲ್ಲರಿಂದಾಗಲಿ ಎಂದು ಆಶಿಸೋಣ.
-ಎಸ್.ಎಸ್.ಅಲಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.