ಮುಲ್ಕಿ (www.vknews.com) : ಮಂಗಳೂರಿನ ಮುಲ್ಕಿಯಲ್ಲಿ ಹಾಡುಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯ ನಿವಾಸಿ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.
ಮೂಡಬಿದಿರೆಯಲ್ಲಿ ಅಲೈನ್ ಜ್ಯುವೆಲ್ಲರಿ ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದ ಅಬ್ದುಲ್ ಲತೀಪ್ ಅವರು ಪತ್ನಿಯ ಮನೆ ಮುಲ್ಕಿ ಸಮೀಪದ ಕಾರ್ನಾಡಿಗೆ ಬಂದಿದ್ದರು, ಇಂದು ಸಾಯಂಕಾಲ ಸುಮಾರು ಮೂರು ಗಂಟೆಯ ಹೊತ್ತಿಗೆ ತನ್ನ ಮಾವ ಹಾಗು ಬಾಮೈದ ಬೊತೆ ಮುಲ್ಕಿಯ ವಿಜಯ ಬ್ಯಾಂಕಿಗೆ ತೆರಳಿ ಹೊರ ಬರುತ್ತಿದ್ದಂತೆ ಕಾರು ಹಾಗೂ ಬೈಕ್ ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳು ಹಾಡುಹಗಲೇ ತಲ್ವಾರ್, ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಲತೀಫ್ ಅವರ ಮಾವನ ಹಣಕಾಸಿನ ವಿವಾದ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಲತೀಫ್ ಮಾವ ಮುನೀರ್ ಹಾಗು ಅವರ ಮಗ ಹಯಾಝ್ ಗಾಯಗೊಂಡಿದ್ದಾರೆ.
ವರದಿ: ಅದ್ದಿ ಬೊಳ್ಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.