(www.vknews.com) : ಪ್ರಸ್ತುತ ಸನ್ನಿವೇಶದಲ್ಲಿ ಕೂಲಿಯಾಳುಗಳ ಸಮಸ್ಯೆ ,ಅಧಿಕ ಖರ್ಚು ,ಕಡಿಮೆ ಇಳುವರಿ ಇನ್ನಿತರ ಸಮಸ್ಯೆಯಿಂದ ರೈತರು ಬೇಸಾಯವನ್ನು ಕೈ ಬಿಡುತ್ತಿರುವ ಸನ್ನಿವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯಂತ್ರ ಶ್ರೀ ಎನ್ನುವ ಹೊಸ ಕಾರ್ಯಕ್ರಮ ಯಾಂತ್ರೀಕೃತ ಭತ್ತ ಬೇಸಾಯ ಪದ್ಧತಿಯನ್ನು ರಾಜ್ಯಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ )ಇದರ ವತಿಯಿಂದ ಅನುಷ್ಠಾನ ಮಾಡಲು ತೀರ್ಮಾನಿಸಿದ್ದು , ಪ್ರಸ್ತುತ ಕುಂದಾಪುರ ತಾಲ್ಲೂಕಿನಲ್ಲಿ 137 ರೈತರಲ್ಲಿ 302ಎಕ್ರೇಯಲ್ಲಿ ಯಂತ್ರ ಶ್ರೀ ಭತ್ತ ಬೇಸಾಯ ಪದ್ಧತಿಯನ್ನು ಅಳವಡಿಸಲು ಯೋಜನೆಯನ್ನು ಹಾಕಿಕೊಂಡಿದ್ದು, ಭತ್ತ ಬೇಸಾಯ ಮಾಡಲು ಯಂತ್ರ ನಾಟಿಗೆ ಬೇಕಾಗುವ ನರ್ಸರಿ ಸಸಿ ಮಡಿಯನ್ನು ತಯಾರಿ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಕಾಳಾವರ ಅಸೂಡಿಯ ಸುನೀಲ್ ಕುಮಾರ್ ಶೆಟ್ಟಿಯವರ ಮನೆಯಲ್ಲಿ ಕಾಳಾವರ ಗ್ರಾಂ.ಪಂ ಅಧ್ಯಕ್ಷರಾದ ಸುಖಾನಂದ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಕಾಳಾವರ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರರಾದ ರವಿರಾಜ್ ಶೆಟ್ಟಿ ಯವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಪೂಜ್ಯ ಹೆಗ್ಗಡೆಯವರು ಇಂತಹ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ರೈತರಲ್ಲಿ ಹೊಸ ಸ್ಫೂರ್ತಿಯನ್ನು ನೀಡಿದಂತಾಗಿದೆ ಎಂದರು.
ನಂತರ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಸಾಂಕೇತಿಕವಾಗಿ ಸಸಿ ಮಡಿಯನ್ನು ತಯಾರಿಸಲು ನರ್ಸರಿ ಟ್ರೇ ಯನ್ನು ವಿತರಣೆ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಉಡುಪಿ ಜಿಲ್ಲಾ ನಿರ್ದೇಶಕರಾದ ಗಣೇಶ್ ಬಿ ಯವರು ಮಾತನಾಡಿ ನರ್ಸರಿ ಟ್ರೇ ಯನ್ನು ಸುಲಭ ವಿಧಾನದಲ್ಲಿ ಅಳವಡಿಸಲು 2ಅಡಿ ಉದ್ದ 1 ಅಡಿ ಅಗಲದ 75ಟ್ರೇ ಎಕ್ರೇಯೊಂದಕ್ಕೆ ಬೇಕಾಗುತ್ತದೆ.ಈ ರೀತಿ ಸುಲಭ ವಿಧಾನದಲ್ಲಿ ಮಾಡಬಹುದು ಎಂದರು.
ನಂತರ ಉಡುಪಿ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಸಿ.ಎಚ್.ಎಸ್ಸಿ ಸಮನ್ವಯಾಧಿಕಾರಿ ಅಶೋಕ್ ರವರು ಮಾತನಾಡಿ ಉತ್ತಮ ತಳಿಯ ಬೀಜದ ಆಯ್ಕೆ, ಬೀಜೋಪಚಾರ, ಸಸಿಮಡಿ ತಯಾರಿಸುವ ಕ್ರಮ, ಗೊಬ್ಬರ ನೀಡುವ ವಿಧಾನ ಇತ್ಯಾದಿ ವಿಧಾನಗಳ ಬಗ್ಗೆ ಉತ್ತಮವಾಗಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ತಾಲ್ಲೂಕು ಯೋಜನಾಧಿಕಾರಿ ಮುರಳೀಧರ ಕೆ ಶೆಟ್ಟಿ, ವಲಯ ಮೇಲ್ವಿಚಾರಕರಾದ ನಾಗರಾಜ್ ,ಒಕ್ಕೂಟದ ಅಧ್ಯಕ್ಷರಾದ ಚಂದ್ರಾಚಾರ್, ಪದಾಧಿಕಾರಿಗಳು, ಕೃಷಿಕರಾದ ಸುಜಿತ್ ಕುಮಾರ್ ಶೆಟ್ಟಿ ,ಸೇವಾ ಪ್ರತಿನಿದಿ ಪದ್ಮಾವತಿ ,ಸಾವಿತ್ರಿ, ಅಶೋಕ್ ಉಪಸ್ಥಿತರಿದ್ದರು. ತಾಲ್ಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಸರ್ವರನ್ನು ಸ್ವಾಗತಿಸಿ, ಸೇವಾ ಪ್ರತಿನಿದಿ ಶೇಖರ ದೇವಾಡಿಗ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.