ಕುದ್ಲೂರು(ವಿಶ್ವಕನ್ನಡಿಗ ನ್ಯೂಸ್): ನಮ್ಮ ಊರು ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ತೀರಾ ಸಿಗುತ್ತಿಲ್ಲ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್ ವರ್ಕ್ ಇಲ್ಲದೇ ಇರುವುದರಿಂದ ಬಹಳ ಕಷ್ಟವಾಗುತ್ತಿದೆ. ಇದೀಗ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮಕ್ಕಳ ವಿಧ್ಯಾಭ್ಯಾಸ ಕೂಡಾ ಓನ್ ಲೈನ್ ಇಂಟರ್ ನೆಟ್ ಮೊರೆಹೋಗಿದುದರಿಂದ ಇಲ್ಲಿನ ಮಕ್ಕಳ ವಿಧ್ಯಾಭ್ಯಾಸಕ್ಕೆ ಕೂಡಾ ಚ್ಯುತಿ ಬರುತ್ತಿದೆ.ಮಕ್ಕಳು ಮನೆಯ ಹಂಚು,ಗುಡ್ಡೆಯನ್ನು ಹತ್ತಿ ನೆಟ್ ವರ್ಕಿಗಾಗಿ ಪರದಾಡುತ್ತಿದ್ದಾರೆ.
ನಮ್ಮೂರಿಗೆ ಸಮರ್ಪಕವಾಗಿ ನೆಟ್ ವರ್ಕ್ ಸಿಗುವಂತೆ ಟವರ್ ಒಂದನ್ನು ಅಳವಡಿಸಿಕೊಡಬೇಕಾಗಿ ಎರಡು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರ ದ ಶಾಸಕರಾದ ಎಸ್. ಅಂಗಾರ ಅವರಿಗೆ ನಮ್ಮ ಬೇಡಿಕೆಯನ್ನು ಇಟ್ಟಿದ್ದೆವು.ಇದರಿಂದ ಇನ್ನೂ ಪ್ರಯೋಜನವಾಗದ ನಮ್ಮ ಅಹವಾಲನ್ನು ಮತ್ತೇ ಶಾಸಕರ ಕ್ಷಮಕ್ಷಮಕ್ಕೆ ಇಡಲಾಯಿತು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ತಿಮ್ಮಪ್ಪ ಗೌಡ,ಎಂ.ಎಂ ಮಹ್ ರೂಫ್ ಆತೂರು,ಸಿರಾಜ್,ಇಲ್ಯಾಸ್, ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.