(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…
حَدَّثَنَا عُثْمَانُ بْنُ أَبِي شَيْبَةَ، قَالَ حَدَّثَنَا جَرِيرٌ، عَنْ مَنْصُورٍ، عَنْ أَبِي وَائِلٍ، قَالَ كَانَ عَبْدُ اللَّهِ يُذَكِّرُ النَّاسَ فِي كُلِّ خَمِيسٍ، فَقَالَ لَهُ رَجُلٌ يَا أَبَا عَبْدِ الرَّحْمَنِ لَوَدِدْتُ أَنَّكَ ذَكَّرْتَنَا كُلَّ يَوْمٍ. قَالَ أَمَا إِنَّهُ يَمْنَعُنِي مِنْ ذَلِكَ أَنِّي أَكْرَهُ أَنْ أُمِلَّكُمْ، وَإِنِّي أَتَخَوَّلُكُمْ بِالْمَوْعِظَةِ كَمَا كَانَ النَّبِيُّ صلى الله عليه وسلم يَتَخَوَّلُنَا بِهَا، مَخَافَةَ السَّآمَةِ عَلَيْنَا.
3. ಅಬು ವಾಯಿಲ್ (ರ) ಉದ್ದರಿಸಿದರು: `ಅಬ್ದುಲ್ಲಾರವರು ಪ್ರತಿ ಗುರುವಾರ ಜನರಿಗೆ ಧಾರ್ಮಿಕ ಭಾಷಣ ಮಾಡುತ್ತಿದ್ದರು. ಒಮ್ಮೆ ಒಬ್ಬ ವ್ಯಕ್ತಿಯು, ಹೇಳಿದರು, “ಓ ಅಬಾ` ಅಬ್ದುರ್-ರಹಮಾನ್! (ಅಲ್ಲಾಹನಾಣೆ) ನೀವು ಪ್ರತಿದಿನ ನಮಗೆ ಬೋಧಿಸಬಹುದೆಂದು ನಾನು ಬಯಸುತ್ತೇನೆ. ” ಆಗ ಅವರು ಉತ್ತರಿಸಿದರು, “ಹಾಗೆ ಮಾಡುವುದನ್ನು ತಡೆಯುವ ಏಕೈಕ ವಿಷಯವೆಂದರೆ, ನಾನು ನಿಮಗೆ ಬೇಸರವನ್ನುಂಟುಮಾಡುವುದನ್ನು ದ್ವೇಷಿಸುತ್ತೇನೆ, ಮತ್ತು ಪ್ರವಾದಿ (ﷺ) ನಮ್ಮೊಂದಿಗೆ ಮಾಡುತ್ತಿದ್ದಂತೆಯೇ ಸೂಕ್ತ ಸಮಯವನ್ನು ಆರಿಸುವುದರ ಮೂಲಕ ಉಪದೇಶದಲ್ಲಿ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ, ನಮಗೆ ಬೇಸರ ತರುವ ಭಯದಿಂದ. ”
حَدَّثَنَا الْحُمَيْدِيُّ، قَالَ حَدَّثَنَا سُفْيَانُ، قَالَ حَدَّثَنِي إِسْمَاعِيلُ بْنُ أَبِي خَالِدٍ، عَلَى غَيْرِ مَا حَدَّثَنَاهُ الزُّهْرِيُّ، قَالَ سَمِعْتُ قَيْسَ بْنَ أَبِي حَازِمٍ، قَالَ سَمِعْتُ عَبْدَ اللَّهِ بْنَ مَسْعُودٍ، قَالَ قَالَ النَّبِيُّ صلى الله عليه وسلم ” لاَ حَسَدَ إِلاَّ فِي اثْنَتَيْنِ رَجُلٌ آتَاهُ اللَّهُ مَالاً فَسُلِّطَ عَلَى هَلَكَتِهِ فِي الْحَقِّ، وَرَجُلٌ آتَاهُ اللَّهُ الْحِكْمَةَ، فَهْوَ يَقْضِي بِهَا وَيُعَلِّمُهَا
4. `ಅಬ್ದುಲ್ಲಾ ಬಿನ್ ಮಸ್’ವೂದ್ (ರ) ರಿವಾಯತಿನಂತೆ: ಪ್ರವಾದಿ (ﷺ), ಹೇಳಿದರು “ಎರಡು ಪ್ರಕರಣಗಳನ್ನು ಹೊರತುಪಡಿಸಿ ಯಾರೊಬ್ಬರಂತೆ ಇರಲು ನೀವು ಬಯಸಕೂಡದು. (ಮೊದಲನೆಯದು) ಒಬ್ಬ ವ್ಯಕ್ತಿ,ಗೆ ಅಲ್ಲಾಹನು ಸಂಪತ್ತನ್ನು ಕೊಟ್ಟಿದ್ದಾನೆ ಮತ್ತು ಅವನು ಅದನ್ನು ನ್ಯಾಯಯುತವಾಗಿ ಖರ್ಚು ಮಾಡುತ್ತಾನೆ; (ಎರಡನೆಯದು). ಅಲ್ಲಾಹನು ಬುದ್ಧಿವಂತಿಕೆಯನ್ನು (ಪವಿತ್ರ ಕುರಾನ್) ಕೊಟ್ಟಿದ್ದಾನೆ ಮತ್ತು ಅವನು ಅದರ ಪ್ರಕಾರ ನಡೆದು ಅದನ್ನು ಇತರರಿಗೆ ಕಲಿಸುತ್ತಾನೆ.
ಸಂಪತ್ತು ಮತ್ತು ಜ್ಞಾನದ ಬಗ್ಗೆ ಅಲ್ಲಾಹು ಪ್ರತಿಯಬ್ಬರಲ್ಲೂ ಕೇಳಲಿಕ್ಕಿದ್ದಾನೆ. ಯಾರು ಈ ವಿಷಯದಲ್ಲಿ ಅಲ್ಲಾಹುವಿನ ಹಾಗೂ ಅವನ ಪ್ರವಾದಿಯವರ ಆದೇಶದಂತೆ ಹಾಗೂ ಕುರಾನಿನ ಸಂದೇಶದಂತೆ ನಡೆಯತ್ತಾರೋ ಅವರಿಗೆ ಅಂತ್ಯ ದಿನದಂದು ಯಾರಿಗೂ ಲಭ್ಯವಾಗದ ಭಾಗ್ಯ ಲಭಿಸಲಿದೆ.
ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.